| ಹರಿಮೇಧಾ ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ ಸ್ವರ್ಣಜಯಂತ್ಯುತ್ಸವದ ಸ್ಮರಣ ಸಂಚಿಕೆ ಬಿಡುಗಡೆಯ ದಿನಾಂಕ : ೩೧.೧೨.೨೦೦೫ ವಿಶ್ವೇಶತೀರ್ಥ ಪ್ರಶಸ್ತಿಃ ಭಂಡಾರಕೇರಿ ಮಠಾಧೀಶಾನಾಂ ಶ್ರೀ ವಿದ್ಯೇಶತೀರ್ಥಾನಾಂ ರಜತಪೀಠಾರೋಹಣೋತ್ಸವೇ ಸ್ವರ್ಣಜಯಂತಿ ಸಂದರ್ಭೇ ಶಿಷ್ಯವಾತ್ಸಲ್ಯ ಪೂರ್ವಕಂ ಪೇಜಾವರಮಠಾಧೀಶೈಃ ಶ್ರೀ ವಿಶ್ವೇಶತೀರ್ಥ ಶ್ರೀಪಾದೈಃ ಪ್ರದತ್ತಾ ಸ್ವರ್ಣಪ್ರಶಸ್ತಿಃ - ಶಾಸ್ತ್ರಾರ್ಥ ಶಿಕ್ಷಾಸು ಮುರಾರಿ ಭಕ್ತಿ ದೀಕ್ಷಾಸು ವೇದಾಂತ ವಿಚಕ್ಷಣಾನಾಂ | ರಕ್ಷಾಸು ವೀಕ್ಷಾಸು ಚ ಭಾರತಾದೇಃ ವಿದ್ಯೇಶತುಲ್ಯೋ ನ ಹಿ ವಿದ್ಯತೇsದ್ಯ || ಶಾಸ್ತ್ರ ಪಾಠಣ ಭಕ್ತಿ ದೀಕ್ಷಣ ವೇದಾಂತ ವಿದ್ವಾಂಸರ ಸಂರಕ್ಷಣಾ ಭಾರತಾದಿಗ್ರಂಥ ಪರಿವೀಕ್ಷಣ ಇವುಗಳಲ್ಲಿ ವಿದ್ಯೇಶತೀರ್ಥರಿಗೆ ಸಮರು ಈಗ ಸಿಗರು. ಶ್ರೀ ಮದ್ಭಾಗವತ ಗ್ರಂಥ ಜ್ಞಾನಗಂಗಾ ಭಗೀರಥಾನ್ | ಶ್ರೀ ವಿದ್ಯೇಶಮಹಾಭಾಗಾನ್ ಅಭಿನಂದಾಮಹೇ ವಯಮ್ || ಭಾಗವತ ಗ್ರಂಥದ ಜ್ಞಾನಗಂಗೆಯ ಹರಿಸಿದ ಭಗೀರಥರಾದ ವಿದ್ಯೇಶತೀರ್ಥರನ್ನು ನಾವು ಅಭಿನಂದಿಸುವೆವು. ವಿದ್ಯಾವಿಮರ್ಶೇ ವಿನಯೇ ವಿರಾಗೇ ವಿದ್ವದಾಶ್ರಯೇ | ಅದ್ವಿತೀಯೋsದ್ಯ ವಿದ್ಯೇಶಃ ಹೃದ್ಯೋ ವಿದ್ಯೋತತಾಂ ಸದಾ || ವಿದ್ಯೆಯ ವಿಮರ್ಶೇ, ವಿನಯ, ವೈರಾಗ್ಯ, ವಿದ್ವದಾಶ್ರಯ ಇವರಲ್ಲಿ ವಿದ್ಯೇಶತೀರ್ಥರು ಅದ್ವಿತೀಯರು. ಅಚ್ಚುಮೆಚ್ಚಿನ ಅವರು ಬೆಳಗಲಿ ಎಂದೆಂದು ಬಹುಕಾಲ. ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ ಸ್ವರ್ಣಜಯಂತ್ಯುತ್ಸವದ ಸಮತಿ ಗಿರಿನಗರ - ಬೆಂಗಳೂರು |