ಸುಬ್ರಹ್ಮಣ್ಯ ಮಠಾಧೀಶರು ಆದ ಶ್ರೀ ವಿದ್ಯಾಪ್ರಸನ್ನತೀರ್ಥರು ಇವರು ವಿದ್ಯೇಶತೀರ್ಥರ ರಜತಪೀಠಾರೋಹಣದ ಸಂದರ್ಭದಲ್ಲಿ ಕಳುಹಿಸಿದ ಅನುಗ್ರಹ ಸಂದೇಶ !
ವಿದ್ಯೇಶತೀರ್ಥ ಶ್ರೀಪಾದಂಗಳವರು ಶ್ರೀ ಭಂಡಾರಿಕೇರಿ ಮಠ ಇವರ ಸಂನ್ಯಾಸದೀಕ್ಷೆಯ ೨೫ನೇ
ವರ್ಷದ ಆಚರಣೆ ಮತ್ತು ೫೦ನೇ ವರ್ಧಂತೋತ್ಸವದ ಆಚರಣೆ ಬೆಂಗಳೂರಿನಲ್ಲಿ ಈ ತಿಂಗಳ
ಕೊನೆಯದಿನಾಂಕದಂದು ನಡೆಯುತ್ತಿರುವ ವಿಚಾರ ತಿಳಿದು ತುಂಬಾ ಸಂತೋಷವಾಯಿತು.
ಪೂಜ್ಯರಾದ
ಶ್ರೀಗಳ ಜೀವನದ ಇಷ್ಟು ಅವಧಿಯೂ ಸಾರ್ಥಕವಾದದ್ದು. ಬಾಲ್ಯದಿಂದಲೂ ಶ್ರೀಗಳು
ನಿತ್ಯಾನುಷ್ಠಾನದಲ್ಲೂ ಅಧ್ಯಯನದಲ್ಲೂ ತುಂಬಾ ನಿಷ್ಠಾವಂತರು. ಆಶ್ರಮದ ತರುವಾಯ ಅವರ
ಅನುಷ್ಠಾನಾಧ್ಯಯನಾದಿಗಳು ಇನ್ನಷ್ಟು ತೀವ್ರವಾಯಿತು. ಅಗಾಧ ಪಾಂಡಿತ್ಯ, ತಪಸ್ಸು
ಇತ್ಯಾದಿಗಳಿಂದ ಅವರು ಮಾಡಿದ ಸಾಧನೆ ಅಪಾರ.
ಶಾಸ್ತ್ರಗಳಲ್ಲಿ ಒಂದೊಂದು ಪದಕ್ಕೂ ಅವರು ನೀಡುವ ಅನೇಕಾರ್ಥಗಳು ಅಪೂರ್ವವಾದವುಗಳು.
ವಿಶಿಷ್ಟವಾದವುಗಳು. ಭಾಗವತ ಪುರಾಣವನ್ನು ಮನೆಮನೆಗೂ ತಲುಪಿಸುವ ಅವರ ಪ್ರಯತ್ನ
ವೇದವ್ಯಾಸರಿಗೆ ಅತ್ಯಂತ ಪ್ರೀತುಕರವಾದ ಸೇವೆ.
ಈ
ಸಂದರ್ಭದಲ್ಲಿ ಸನ್ಯಾಸ ಸ್ವೀಕಾರದ ಬೆಳ್ಳಿ ಮಹೋತ್ಸವವನ್ನು ಮತ್ತು ಜನ್ಮಾನಂತರದ ೫೦ ನೇ
ವರ್ಧಂತ್ಸುತ್ಸವವನ್ನು ಆಚರಿಸುವುದು ಅತ್ಯಂತ ಪ್ರಸ್ತುತ. ಸಮಿತಿಯವರ ಪ್ರಯತ್ನ
ಸಾರ್ಥಕವಾಗಲಿ. ಶ್ರೀಗಳಿಗೆ ದೀರ್ಘಾಯುರಾರೋಗ್ಯ ಭಾಗ್ಯವನ್ನು ಪ್ರಾರ್ಥಿಸುತ್ತೇವೆ.
ಇತಿ ನಾರಾಯಣ ಸ್ಮರಣೆಗಳು
ವಿದ್ಯಾಪ್ರಸನ್ನತೀರ್ಥರು
ಸುಬ್ರಹ್ಮಣ್ಯಮಠ