| ತಂದೆ ತಾಯಿ |
ಶ್ರೀ ಕುಪ್ಪಣ್ಣ ತಂತ್ರಿಗಳು ಹಾಗೂ ಶ್ರೀಮತಿ ರಾಧಮ್ಮ |
| ಹುಟ್ಟಿದ ಊರು |
ಎರ್ಮಾಳು |
| ಹುಟ್ಟಿದ ದಿನ |
ಪ್ರಮಾದಿ ಸಂವತ್ಸರ ಆಷಾಡಮಾಸ ಕೃಷ್ಣಪಕ್ಷ ನವಮಿ ಭರಣಿ ನಕ್ಷತ್ರ ರವಿವಾರ - ೨೭.೭.೧೯೧೩ |
| ಪೂರ್ವಾಶ್ರಮದ ಹೆಸರು |
ನಾರಾಯಣ |
| ಉಪನಯನ |
ಎಂಟನೇ ವರ್ಷ ವಯಸ್ಸಿನಲ್ಲಿ ಪುತ್ತಿಗೆ ಮಠದ ಶತಾಯುಷಿ ಶ್ರೀ ಶ್ರೀಸುದೀಂದ್ರತೀರ್ಥರು ಎರ್ಮಾಳಿನ ಮನೆಗೆ ಆಗಮಿಸಿದ ಶುಭ ದಿನದಂದು |
| ಕೃಷ್ಣಾಮಂತ್ರೋಪದೇಶ |
ಉಪನಯನದಂದು ಶ್ರೀ ಶ್ರೀಸುದೀಂದ್ರತೀರ್ಥರಿಂದ |
| ಪ್ರಾಥಮಿಕ ಶಿಕ್ಷಣ |
ಎರ್ಮಾಳಿನಲ್ಲಿ ತಂದೆ ಶ್ರೀ ಕುಪ್ಪಣ್ಣ ತಂತ್ರಿಗಳಿಂದಲೇ |
| ಮುಂದಿನ ವಿದ್ಯಾಭ್ಯಾಸ |
ಉಡುಪಿ ಅನಂತೇಶ್ವರದೇವಾಲಯದಲ್ಲಿ ನೆಡೆಯುತ್ತಿದ್ದ ಶ್ರೀಮನ್ವಧ್ವಸಿದ್ಧಾಂತಪ್ರಬೋಧಿನೀಸಂಸ್ಕೃತ ಮಹಾಪಾಠಶಾಲೆಯಲ್ಲಿ |
| ಆಶ್ರಮಗುರುಗಳು |
ಅದಮಾರು ಯತಿಪರಂಪರೆಯಲ್ಲಿ ೨೧ನೆ ಯತಿಗಳಾಗಿದ್ದ ಶ್ರೀ ಶ್ರೀವಿಬುಧಪ್ರಿಯತೀರ್ಥರು |
| ಸನ್ಯಾಸದ ದಿನ |
ಕ್ರೋಧನ ಸಂವತ್ಸರದ ಕಾರ್ತೀಕ ಕೃಷ್ಣ ಪಂಚಮಿ - ೫.೧೧.೧೯೨೫ |
| ಆಶ್ರಮದೀಕ್ಷೆ ನಡೆದಸ್ಠಳ |
ಉಡುಪಿ ಶ್ರೀಕೃಷ್ಣಮಠದ ಸರ್ವಜ್ಞ ಸಿಂಹಾಸನದ ಸಮಕ್ಷಮದಲ್ಲಿ |
| ಆಶ್ರಮನಾಮ |
ಶ್ರೀ ವಿದ್ಯಾಮಾನ್ಯತೀರ್ಥ |
| ಆರೋಹಣ ಮಾಡಿಸಿದ ಪೀಠ |
ಬಾರ್ಕೂರಿನ ಭಂಡಾರಕೇರಿಮಠದ ೩೪ನೇ ಯತಿಗಳಾಗಿ ಪೀಠಾರೋಹಣ |
| ಯತಿಗಳಾದ ಬಳಿಕ ವಿದ್ಯಾಭ್ಯಾಸ |
ನಾಲ್ಕು ತಿಂಗಳು ಉಡುಪಿಯಲ್ಲಿ (ಪರ್ಯಾಯದ ಉಳಿದ ಅವಧಿ) ನಂತರ ಮೂರು ವರ್ಷ ಘಟಿಕಾಚಲದಲ್ಲಿ ಅದಮಾರು ಪೀಠದ ಶ್ರೀ ಶ್ರೀವಿಬುಧಪ್ರಿಯತೀರ್ಥರಲ್ಲಿ |
| ಮುಂದಿನ ವಿದ್ಯಾಭ್ಯಾಸ |
ನ್ಯಾಯ, ವೇದಾಂಘನ ವಿದ್ವಾಂಸರಾಗಿದ್ದ ಇನ್ನ
ವಾಸುದೇವಾಚಾರ್ಯರಲ್ಲಿ ಭಂಡಾರಿಕೇರಿಮಠದಲ್ಲಿ ದಶಪ್ರಕರಣಗಳು, ದಶೋಪನಿಷತ್ತುಗಳು ಹಾಗೂ
ತತ್ತ್ವಪ್ರಕಾಶಾಕಾ ಇವುಗಳ ಅದ್ಗ್ಯಯನ |
| ಪ್ರೌಢಗ್ರಂಥಗಳ ಅಧ್ಯಯನ |
ಉತ್ತರಾದಿಮಠದ ಶ್ರೀ ಶ್ರೀ ಸತ್ಯಧ್ಯಾನತೀರ್ಥರಲ್ಲಿ |
| ಸುಧಾಧ್ಯಯನ ನಡೆದ ಸ್ಠಳ |
ತಿರುಪತಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಮೂಲಕ |
| ಸುಧಾಮಂಗಳ ನಡೆದ ಸ್ಠಳ |
ಬಳ್ಳಾರಿಯಲ್ಲಿ ಪೆನುಗೊಂಡೆ ನರಸಿಂಗರಾಯರ ಮನೆಯಲ್ಲಿ |
| ಶ್ರೀಗಳವರ ಮೊದಲಶಿಷ್ಯ |
ಪಿ.ಕೆ.ಹರಿದಾಸಾಚಾರ್ಯರು (ಸುಧಾಧ್ಯಯನ ಸಮಯದಲ್ಲಿ - ತತ್ತ್ವಪ್ರಕಾಶಿಕಾ) |
| ತತ್ತ್ವಪ್ರಕಾಶಿಕಾ ಮಂಗಲ |
ಶ್ರೀ ಶ್ರೀ ಸತ್ಯಧ್ಯಾನತೀರ್ಥರು ವಿಜಾಪುರದಲ್ಲಿ ಚಾತುರ್ಮಾಸ್ಯದಲ್ಲಿದ್ದಾಗ ಶ್ರೀಪರ್ವತೀಕರ್ ಗೃಹದಲ್ಲಿ |
| ಸುಧಾಪಾಠದ ಉಪಕ್ರಮ |
ಶ್ರೀ ಶ್ರೀ ಸತ್ಯಧ್ಯಾನತೀರ್ಥರಿಂದ ನ್ಯಾಯಾಮೃತ
ಕೇಳುತ್ತಿರುವಾಗಲೇ ಶ್ರೀಗಳವರು ಹರಿದಾಸಾಚಾರ್ಯರು, ವಾದಿರಾಜಾಚಾರ್ಯರು ಮತ್ತು
ಲಕ್ಷ್ಮೀನಾರಾಯಣ ಕೊಡಂಚ ಮೊದಲಾದವರಿಗೆ ಸುಧಾಪಾಠ ಹೇಳಲು ಉಪಕ್ರಮಿಸಿದರು |
| ಮೊದಲ ಸುಧಾಪ್ರವಚನ ಮಂಗಲೋತ್ಸವ |
ತಿರುಪತಿಯಲ್ಲಿ ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಸಮಕ್ಷಮದಲ್ಲಿ |
| ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಜೊತೆಗೆ ಇದ್ದು ಅಧ್ಯಯನ ಮಾಡಿದ ಗ್ರಂಥಗಳು |
ನಾಲ್ಕು ವರ್ಷಗಳ ಅವಧಿಯಲ್ಲಿ ನ್ಯಾಯಸುಧಾ, ನ್ಯಾಯಾಮೃತ, ತರ್ಕತಾಂಡವ ಚಂದ್ರಿಕಾಗಳನ್ನಲ್ಲದೆ ನ್ಯಾಯಶಾಸ್ತ್ರವನ್ನೂ ಅದ್ಯಯನ ಮಾಡಿದ್ದರು |
| ಶ್ರೀ ಶ್ರೀ ಸತ್ಯಧ್ಯಾನತೀರ್ಥರು ಶ್ರೀಪಾದರಿಗೆ ಅನುಗ್ರಹಿಸಿದ ಪ್ರಶಸ್ತಿ |
ವಿದ್ಯಾಭ್ಯಾಸವನ್ನು ಪೂರೈಸಿ ಹೊರಟ
ಸಂದರ್ಬದಲ್ಲಿ ಶ್ರೀಗಳನ್ನು ಶ್ರೀ ಶ್ರೀ ಸತ್ಯಧ್ಯಾನತೀರ್ಥರು ಬಿಗಿದಪ್ಪಿ
ಗದ್ಗದಿತ ಕಂಠರಾಗಿ ಕೊಟ್ಟ ಪ್ರಶಸ್ತಿ 'ನೀವು ವಿದ್ಯಾಭಂಡಾರ ಆಗಿರುವಿರಿ' |
| ಎರಡನೇ ಸುಧಾಪ್ರವಚನ ಮಂಗಲೋತ್ಸವ |
ಶ್ರೀರಂಗದಲ್ಲಿ ಚಾತುರ್ಮಾಸ್ಯ ಕೈಗೊಂಡಿದ್ದಾಗ (ಕಲಕೇರಿ ರಾಮಾಚಾರ್ಯರಿಗೆ) ಎರಡನೇ ಸುಧಾಪ್ರವಚನ ಮಂಗಲೋತ್ಸವ ನಡೆಸಿದರು |
| ಮೊದಲ ಬದರಿಯಾತ್ರೆ |
ಕಾಶಿಯಿಂದ ಹರಿದ್ವಾರಕ್ಕೆ ತೆರಳಿದ ಶ್ರೀಪಾದರು
ಅಲ್ಲಿಂದ ೧೫೦ ಮೈಲು ಕಾಲುನಡಿಗೆಯಿಂದ ಭಾಷ್ಯಪಾರಾಯಣ ಮಾಡುತ್ತಾ ಬದರಿ ತಲುಪಿ ಒಂದು
ವಾರಕಾಲ ಸಾಧನೆ ನೆಡಿಸಿದರು. |
| ಗಯೆಯಲ್ಲಿ ಚಾತುರ್ಮಾಸ್ಯ ವ್ರತ |
ಬದರಿಯಾತ್ರೆ ಪೂರೈಸಿದ ಶ್ರೀಪಾದರು ಗಯೆಯಲ್ಲಿ ಚಾತುರ್ಮಾಸ್ಯ ಕೈಗೊಂಡರು |
| ಗಯೆಯಲ್ಲಿ ಪವಾಡ |
ಗಯೆಯಲ್ಲಿ ಶ್ರೀವಿಷ್ಣುಪಾದಕ್ಕೆ ಪವಮಾನ ಸೂಕ್ತದ
ಪಠನಪೂರ್ವಕ ಅಭಿಷೇಕ ನಡೆಸುತ್ತಿರಲು, ಫಲ್ಗುನದಿಯಲ್ಲಿ ಪ್ರವಾಹ ಹಿರಿಯುವಷ್ಟೂ
ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯಿತು |
| ಶ್ರೀಗಳವರ ವಾದದ ಮೊದಲ ವಿಜಯ |
೧೯೪೦ನೇ ಇಸವಿ ಕಾರ್ತೀಕ ಮಾಸದಲ್ಲಿ ವಿಜಯನಗರದ ಸಂಸ್ಥಾನದಲ್ಲಿ ಮಹಾಮಹೋಪಾದ್ಯಾಯ ಶ್ರೀತಾತಾ ಸುಬ್ರಾಯಶಾಸ್ತ್ರಿಗಳ ಜೊತೆಗೆ ವಾದ ನಡೆಸಿ ವಿಜಯಿಗಳಾಗಿದ್ದರು |
| ಚಂದ್ರಿಕಾ, ನ್ಯಾಯಸುಧಾದಿಗಳ ೪ನೇ ಮಂಗಳ |
ಭಂಡಾರಕೇರಿಯಲ್ಲಿ ಶ್ರೀಕಾಣಿಯೂರು ವಿದ್ಯಾಸಮುದ್ರತೀರ್ಥರ ನೇತೃತ್ವದಲ್ಲಿ ಚಂದ್ರಿಕಾ, ಶ್ರೀಮನ್ನ್ಯಾಯಸುಧಾ ಗ್ರಂಥಗಳ ಪ್ರವಚನದ ೪ನೇ ಮಂಗಳೋತ್ಸವ |
| ಮಾದ್ವರಾದ್ಧಾಂತ ಸಂವರ್ಧಕ ಸಭೆಯ ಶುಭಾರಂಭ |
ಸ್ವರ್ಭಾನು ಸಂವತ್ಸರದ ಮಾಘಶುದ್ಧ ನವಮಿಯಂದು (೧೯೪೩, ಫೆಬ್ರವರಿ) ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ |
| ಪೇಜಾವರಮಠದ ಶ್ರೀವಿಶ್ವೇಶ್ವತೀರ್ಥರ ಮೊದಲ ಸಂಪರ್ಕ |
ಸ್ವರ್ಭಾನು ಸಂವತ್ಸರದ ಮಾಘಶುದ್ಧ ನವಮಿಯಂದು
, ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ಮಾದ್ವರಾದ್ಧಾಂತ ಸಂವರ್ಧಕ ಸಭೆಯ ಮೊದಲ
ಅಧಿವೇಶನದಲ್ಲಿ ಶ್ರೀಗಳಿಗೆ ಅಧ್ಯಕ್ಷಗಿರಿಯನ್ನು ಅನುಗ್ರಹಿಸಿದ ಶುಭ ಸನ್ನಿವೇಶದಲ್ಲಿ |
| ಪೇಜಾವರದ ಶ್ರೀಗಳವರಿಗೆ ಪಾಠ ಪ್ರಾರಂಭಿಸಿದ ಸ್ಥಳ |
ಏರಕೀಮಠದ ಶ್ರೀಮದಾಚಾರ್ಯ ಕರಾರ್ಚಿತ
ಶ್ರೀಭೂಸಹಿತ ಕೇಶವನ ಸನ್ನಿಧಿಯಲ್ಲಿ, ವೇದಾಂತದ ತತ್ವಸಂಖ್ಯಾನ ಹಾಗೂ ನ್ಯಾಯಶಾಸ್ತ್ರದ
ತರ್ಕ ಸಂಗ್ರಹಗಳ ಪಾಠದ ಶುಭಾರಂಭ (ಇತರ ವಿದ್ಯಾರ್ಥಿಗಳು, ಕಾಪು ಹಯಗ್ರೀವಾಚಾರ್ಯರು,
ವೇಂಕಟರಮಣ ಐತಾಳರು, ಗುರುರಾಜ ಬಲ್ಲಾಳ ಮುಂತಾದವರು) |
| ಪೇಜಾವರ ಶ್ರೀಗಳಿಗೆ ನಡೆಸಿದ ಸುಧಾಪಾಠದ ಮಂಗಳೋತ್ಸವ |
ಉಡುಪಿ ಪೇಜಾವರಮಠದಲ್ಲಿ ಪುತ್ತಿಗೆ ಮಠದ ಶತಾಯುಷಿ ಶ್ರೀ ಸುಧೀಂದ್ರತೀರ್ಥರ ಅಧ್ಯಕ್ಷತೆಯಲ್ಲಿ ಅಷ್ಠಮಠಾದೀಶರ ಸಮುಪಸ್ಠಿತಿಯಲ್ಲಿ |
| ಪೇಜಾವರ ಶ್ರೀಗಳಿಗೆ ಅಧ್ಯಾಪನ ನಡಿಸಿದ ಅವಧಿ |
ಸುಮಾರು ಎಂಟು ವರ್ಷಗಳು |
| ಭಂಡಾರಕೇರಿಯ ಗುರುಕುಲ |
ಪೇಜಾವರ ಶ್ರೀಗಳವರು ಬಾರ್ಕೂರಿನ ಭಂಡಾರಕೇರಿ
ಮಠದಲ್ಲಿ ಅಧ್ಯಯನ ನಡೆಸುತ್ತಿದ್ದ ಶುಭ ಅವಧಿಯಲ್ಲಿ ಶ್ರೀ ಶ್ರೀವಿದ್ಯಾಮಾನ್ಯತೀರ್ಥರ
ಕುಲಪತಿತನದಲ್ಲಿ ಗುರುಕುಲ ಮೆರಿದಿತ್ತು |
| ಸರ್ವಜ್ಞಪೀಠಾರೋಹಣ ರಜತೋತ್ಸವ |
೧೯೫೦ ರಲ್ಲಿ ಉಡುಪಿಯಲ್ಲಿ ಪೇಜಾವರಮಠದಲ್ಲಿ ಶ್ರೀ ಶ್ರೀವಿಶ್ವೇಶತೀರ್ಥರ ನೇತೃತ್ವದಲ್ಲಿ ನಡೆಯಿತು |
| ಬದರಿಕ್ಷೇತ್ರದಲ್ಲಿ ಕಾಷ್ಠಮೌನವ್ರತ ಮತ್ತು ಶಿಷ್ಯನ ಸುಧಾಮಂಗಲೋತ್ಸವ |
೧೯೫೨ ರಲ್ಲಿ ೪೮ ದಿನಗಳ ಕಾಲ
ಕಾಷ್ಠಮೌನ ವ್ರತ ವನ್ನು ಶ್ರೀಪಾದರು ನೆಡಿಸಿದರು. ೧೯೫೩ ರಲ್ಲಿ ಶಿಷ್ಯ
ಶ್ರೀವಿಶ್ವೇಶತೀರ್ಥರು ಗುರುಗಳ ಸಮುಪಸ್ಠಿತಿಯಲ್ಲಿ ಸುಧಾಮಂಗಲೋತ್ಸವವನ್ನು ನೆಡಿಸಿದರು |
| ಶ್ರೀವಿಶ್ವೇಶತೀರ್ಥರಿಗೆ ಪ್ರೇರಣೆ |
೪.೧.೧೯೫೩ರಲ್ಲಿ ಶ್ರೀವಿಶ್ವೇಶತೀರ್ಥರ
ನೇತೃತ್ವದಲ್ಲಿ ನಡೆದ ಅಖಿಲ ಭಾರತ ಮಾಧ್ವತತ್ವಜ್ಞಾನ ಸಮ್ಮೇಳನಕ್ಕೆ ಪ್ರೇರಣೆ ನೀಡಿದವರು
ಶ್ರೀ ಶ್ರೀವಿದ್ಯಾಮಾನ್ಯತೀರ್ಥರು |
| ಕಾಂಚಿಪುರದಲ್ಲಿ ನೆಡೆದ ವಾದದಲ್ಲಿ ವಿಜಯ |
ಮನ್ಮಥ ಸಂತ್ಸರದಲ್ಲಿ ಫಾಲ್ಗುಣಶುದ್ಧ
ತ್ರಯೋದಶಿಯಂದು ಕಾಂಚೀಪುರದಲ್ಲಿ ಕುಂಭಕೋಣದ ಕಾಮಕೋಟಿ ಶಂಕರಾಚಾರ್ಯರ ಅಧ್ಯಕ್ಷತೆಯಲ್ಲಿ
ನಡೆದ ಅದ್ವೈತಸಭೆಯಲ್ಲಿ ಮಹಾಮಹೋಪಾದ್ಯಾಯ ಅನಂತಕೃಷ್ಣಶಾಸ್ತ್ರಿ,
ಶ್ರೀಸುಬ್ರಹ್ಮಣ್ಯಶಾಸ್ತ್ರಿ, ಸುಂದರಶಾಸ್ತ್ರಿ ಮುಂತಾದವರ ಪೂರ್ವಪಕ್ಷಗಳಿಗೆ
ಸಮಾಧಾನಿಸಿ ದ್ವೈತಕ್ಕೆ ಅಪೂರ್ವತ್ವವನ್ನು ಸಮರ್ಥಿಸಿ ಶ್ರೀಪಾದರು ಜಯಿಸಿದ್ದರು. |
| ಮುಷ್ಠಿ ಅಕ್ಕಿದಾನ ಯೋಜನೆ |
ಬೆಂಗಳೂರಿನ ಶ್ರೀಪೂರ್ಣವಿದ್ಯಾಪೀಠದ ವಿದ್ಯಾರ್ಥಿಗಳ ಭೋಜನ ವ್ಯವಸ್ಥೆ ಗಾಗಿ 'ಮುಷ್ಠಿ ಅಕ್ಕಿ ದಾನ ಯೋಜನೆ' ಎಂಬ ಸುಲಭ ಯೋಜನೆಯನ್ನು ರೂಪಿಸಿದವರು ಶ್ರೀಪಾದರು |
| ದಿ|| ರಾಜೇಂದ್ರಪ್ರಸಾದರನ್ನು ಆಕರ್ಷಿಸಿದ ಭಾಷಣ |
೧೯೫೮ರಲ್ಲಿ ಹೈದರಾಬಾದಿನಲ್ಲಿ ನಡೆದ ಮೂರನೆಯ
ಮಾಧ್ವತತ್ವ ಸಮ್ಮೇಳನ ದಲ್ಲಿ ಪಾಲ್ಗೊಂಡಿದ್ದ ಶ್ರೀಪಾದರ ಭಾಷಣ ಆ ಸಮ್ಮೇಳನದ
ಉದ್ಘಾಟಕರಾಗಿದ್ದ ಡಾ|| ರಾಜೇಂದ್ರಪ್ರಸಾದರನ್ನು ಆಕರ್ಷಿಸಿತ್ತು. ಇವರ ಪತ್ನಿ ಹಾಗೂ
ಅಕ್ಕ ಶ್ರೀಗಳವರಿಂದ ಶ್ರೀ ಕೃಷ್ಣ ಮಂತ್ರದ ಉಪದೇಶವನ್ನು ಪಡೆದರು |
| ಕಾಶಿಯಲ್ಲಿ ವಿದ್ವತ್ ಸಭೆಯಲ್ಲಿ ಮೆರೆದುದು |
೧೯೫೮ನೇ ನವೆಂಬರ್ ೩೦ನೇ ದಿನ ದಂದು
ಕಾಶಿಯಲ್ಲಿ ಮಹಾಮಹೋಪಾಧ್ಯಾಯ ಗಿರಿಧರಶರ್ಮಾ ಚತುರ್ವೇದಿ ಇವರ ಅಧ್ಯಕ್ಷತೆಯಲ್ಲಿ ನಡೆದ
ಅದ್ವೈತ ವಿದ್ವಾಂಸರ ಸಭೆಯಲ್ಲಿ ಶ್ರೀಪಾದರ ವೈದುಷ್ಯವನ್ನು ಮೆಚ್ಚಿಕೊಂಡ ವಿದ್ವಾಂಸರು
ಶ್ರೀಪಾದರಿಗೆ ಮಾನಪತ್ರ ಸಮರ್ಪಿಸಿ ಗೌರವಿಸಿದರು |
| ದಿಲ್ಲಿಯಲ್ಲಿ ನಡದ ವೇದಶಾಖಾ ಪ್ರತಿನಿಧಿ ಸಮ್ಮೇಳನದಲ್ಲಿ ಭಾಗವಹಿಸಿದುದು |
ಶ್ರೀಶಂಕರಪತ್ರಜಿ ಸ್ವಾಮಿಯವರು ದಿಲ್ಲಿಯಲ್ಲಿ
ಕರೆದ ವೇದಶಾಖಾ ಪ್ರತಿನಿಧಿ ಸಮ್ಮೇಳನದಲ್ಲಿ ವೈಷ್ಣವ ಪೀಠಾಧಿಪತಿಗಳ ಪರವಾಗಿ ಶ್ರೀಪಾದರು
ಪಾಲ್ಗೊಂಡು ಉದ್ಭೋದಕ ಭಾಷಣ ನೀಡಿದರು |
| ಅದ್ವೈತತತ್ವಸುಧಾ ಸಮೀಕ್ಷಾ ಗ್ರಂಥ ನಿರ್ಮಾಣ |
ಶ್ರೀಅನಂತಕೃಷ್ಣಶಾಸ್ತ್ರಿಗಳು ಬರೆದ
'ಅದ್ವೈತತಸುಧಾ' ಎಂಬ ಶೀಮನ್ನ್ಯಾಯಸುಧಾ ಖಂಡನಾಭಾಸಕ್ಕೆ ಖಂಡನ ರೂಪದಲ್ಲಿ 'ಅದ್ವೈತತತ್ವ
ಸುಧಾ ಸಮೀಕ್ಷಾ' ಎಂಬ ಪ್ರೌಢಹ್ರಂಥವನ್ನು ಶ್ರೀಪಾದರು ರಚಿಸಿದರು |
| ಹೈದರಾಬಾದ್ ಬಾಗಲಿಂಗಪಲ್ಲಿಯಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ವೃಂದಾವನ ಪ್ರತಿಷ್ಠಾಪನೆ |
೭.೨.೧೯೫೯ ರಂದು ಹೈದರಾಬಾದ್ ಬಾಗಲಿಂಗಪಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರತಿಷ್ಠಾಪನೆ |
| ಬದರಿಕ್ಷೇತ್ರದಲ್ಲಿ ಕಾಷ್ಠಮೌನವ್ರತ |
೧೯೬೧ (ಮೇ ತಿಂಗಳು) ಅಧಿಕ ಜ್ಯೇಷ್ಠ ಪ್ರತಿಪತ್ ನಿಂದ ನಿಜ ಜ್ಯೇಷ್ಠ ಚತುರ್ದಶಿಯವರೆಗೆ ೪೮ ದಿನಗಳವರೆಗೆ ಕಾಷ್ಠಮೌನವ್ರತ ಶ್ರೀಪಾದರು ಆಚರ್ಸಿದರು |
| ದಿಲ್ಲಿಯಲ್ಲಿ ವಾತುರ್ಮಾಸ್ಯ |
೧೯೬೧ನೇ ಇಸವಿಯಲ್ಲಿ ಭಕ್ತರ ಕೋರಿಕೆಯಂತೆ ಶ್ರೀಪಾದರು ದಿಲ್ಲಿಯಲ್ಲಿ ಚಾತುರ್ಮಾಸ್ಯ ವ್ರತ ಕೈಕೊಂಡಿದ್ದರು |
| ದಿಲ್ಲಿಯಲ್ಲಿ ರಾಮನವಮೀ ಮಹೋತ್ಸವ |
ಪ್ರತಿವರ್ಷ ನಡೆಸುವಂತೆ ದಿಲ್ಲಿಯಲ್ಲಿ
ಚಾತುರ್ಮಾಸ್ಯ ಕೈಗೊಂಡ ಸಂದರ್ಭದಲ್ಲೂ ಶ್ರೀಪಾದರು ಬಹುವಿಜೃಂಭಣೆಯಿಂದ ಶ್ರೀರಾಮನವಮಿ
ಮಹೋತ್ಸವವನ್ನು ನಡೆಸಿದ್ದು, ಶ್ರೀಗಳವರ ಉಪನ್ಯಾಸದಿಂದ ಆಗಿನ ರಾಷ್ಟ್ರಾಧ್ಯಕ್ಷರಾಗಿದ್ದ
ಬಾಬು ರಾಜೇಂದ್ರಪ್ರಸಾದ್, ಉಪರಾಷ್ಟ್ರಾಧ್ಯಕ್ಷರಾಗಿದ್ದ ಶ್ರೀ ರಾಧಾಕೃಷ್ಣನ್,
ಶ್ರೀನಂದಾ, ಶ್ರೀ ಅನಂತಶಯನ ಅಯ್ಯಂಗಾರ್ ಮುತಾದವರು ಪ್ರಭಾವಿತರಾಗಿದ್ದರು |
| ದಿಲ್ಲಿಯಲ್ಲಿ ಶ್ರೀಪಾದರ ನೇತೃತ್ವದಲ್ಲಿ ನಡೆದ 'ವಿಶ್ವಕಲ್ಯಾಣಯಾಗ |
ಶ್ರೀಪಾದರು ದಿಲ್ಲಿಯಲ್ಲಿದ್ದಾಗ ಅಷ್ಟಗ್ರಹಯೋಗದ
ದುಷ್ಪರಿಣಾಮದ ಪರಿಹಾರಕ್ಕಾಗಿ, ಶ್ರೀಪಾದರ ನೇತೃತ್ವದಲ್ಲಿ ರೂಪಗೊಂಡ 'ವಿಶ್ವಕಲ್ಯಾಣಯಾಗ
ಸಮಿತಿ' ಯ ಮೂಲಕ ೬ ಲಕ್ಷ ರೂ ವೆಚ್ಚದಲ್ಲಿ ೧೨ ದಿನಗಳ ಅವಧಿಯಲ್ಲಿ ಯಮುನಾ ನದಿಯ ತೀರದ
ತುದಿಯ ಘಾಟಿನ ಬಯಲಿನಲ್ಲಿ ೭೦೦ ಉತ್ತರ ದಕ್ಷಿಣ ಭಾರತದ ಋತ್ವಿಜರು ಪಾಲ್ಗೋಂಡು
'ವಿಶ್ವಕಲ್ಯಾಣಯಾಗ' ವನ್ನು ಯಶಸ್ವಿಯಾಗಿ ನಡೆಸಿದರು. |
| ದಿಲ್ಲಿಯಲ್ಲಿ ವಿದ್ವತ್ ಸಭೆಯಲ್ಲಿ ಜಯ |
ದಿಲ್ಲಿಯಲ್ಲಿ ನಡೆದ ವಿಶ್ವಕಲ್ಯಾಣಯಾಗದ
ಸಂದರ್ಭದಲ್ಲಿ ಆಯೋಜಿಸಲಾದ ದ್ವೈತಾದ್ವೈತಚರ್ಚೆಯ ಸಭೆಯಲ್ಲಿ ಶ್ರೀರಾಮಚಂದ್ರಶಾಸ್ತ್ರಿ
ಷಡಂಗ ಮುಂತಾದವರ ವಿರುದ್ಧವಾಗಿ ವಕ್ಯಾರ್ಥ ನಡೆಸಿ ದ್ವೈತಸಿದ್ಧಾಂತವನ್ನು
ಸಮರ್ಥಿಸಲಾಯಿತು. |
| ಮಳೆಯ ವಿಘ್ನ ಸಂಭವಿಸಿದಂತೆ ತಡೆದ ಪವಾಡ |
ದಿಲ್ಲಿಯಲ್ಲಿ ವಿಶ್ವಕಲ್ಯಾಣಯಾಗದ ಸಂದರ್ಭದಲ್ಲಿ
ಮಳೆಯಾಗುವ ಸಾಧ್ಯತೆ ಇದ್ದು ,ಶ್ರೀಪಾದರು ಮಳೆಯಾಗಲಾರದು ಎಂದು ನೀಡಿದ
ಆಶ್ವಾಸನೆಗೆ ಅನುಗುಣವಾಗಿ ಮೋಡವೆಲ್ಲ ಚದುರಿ ಹೋಗಿ ಆಕಾಶ ಶುಭ್ರವಾಗಿತ್ತು. ಶ್ರೀಪಾದರ
ಪ್ರಾರ್ಥನೆಯ, ಇಚ್ಛಾಶಕ್ತಿಯ ಸಾಮರ್ಥ್ಯವನ್ನು ಕಂಡು ಎಲ್ಲರೂ ಅಚ್ಚರಿಗೊಂಡರು.
'ಇಂಡಿಯನ್ ಎಕ್ಸ್ ಪ್ರೆಸ್ 'ನಂತಹ ಪತ್ರಿಕೆಗಳೂ ಶ್ರೀಪಾದರ ಈ ಪವಾಡವನ್ನು
ಪ್ರಶಂಸಿಸಿದ್ದವು |
| ಸನಾತನ ಧರ್ಮಪ್ರತಿನಿಧಿಗೆ ಮೂರು ವರ್ಷಕಾಲ ಅಧ್ಯಕ್ಷರಾಗಿ ಆಯ್ಕೆ |
೬೦೦ ಶಾಖೆಗಳನ್ನು ಹೊಂದಿದ್ದು ಹೊಸದಿಲ್ಲಿಯಲ್ಲಿ ಕೇಂದ್ರದ ಕಛೇರಿಯನ್ನು ಪಡೆದಿದ್ದ ೫೦ ವರ್ಷಗಳಿಂದ ಸನಾತನ ಧರ್ಮವನ್ನು ಪ್ರಚಾರ ಮಾಡುತ್ತ
ಬಂದಿದ್ದ ಸನಾತನ ಧರ್ಮಪ್ರತಿನಿಧಿ ಸಭಾಕ್ಕೆ ೧೯೬೨ ರಿಂದ ಮೂರು ವರ್ಷಗಳ ಕಾಲ
ಅಧ್ಯಕ್ಷರಾಗಿ ಶ್ರೀಪಾದರು ಆಯ್ಕೆಗೊಂಡಿದ್ದರು |
| ಮಾಧ್ವತತ್ವಜ್ಞಾನ, ಸಮ್ಮೇಳನದ ಉದ್ಘಾಟನೆ |
ಬೆಂಗಳೂರಿನಲ್ಲಿ ೧೯೬೩ರಲ್ಲಿ ನಡೆದ ಐದನೇ ಮಾಧ್ವತತ್ವಜ್ಞಾನ ಸಮ್ಮೇಳನದ ಉದ್ಘಾಟನೆಯನ್ನು ಶ್ರೀಪಾದರು ನಡೆಸಿದ್ದರು |
| ಗೋಹತ್ಯೆ ನಿಷೇಧಿಸಲು ಉಪವಾಸ |
ಗೋಹತ್ಯಾ ನಿಷೇಧದ ಕಾನೂನನ್ನು ಜಾರಿಗೊಳಿಸ ಬೇಕೆಂದು ಶ್ರೀಪೇಜಾವರ ಶ್ರೀಗಳ ಜೊತೆ ೧೯ ಮತ್ತು .೨೦.೧೧.೧೯೬೬ ರ ಎರಡುದಿನ ನಿರಶನ ವ್ರತ |
| ಉಡುಪಿಯ ಪಲಿಮಾರು ಮಠದ ಆಧಿಪತ್ಯ |
ಅದುವರೆಗೆ ಭಂಡಾರಕೇರಿ ಮಠಕ್ಕಷ್ಟೇ
ಅಧಿಪತಿಗಳಾಗಿದ್ದ ಶ್ರೀಪಾದರು ೩.೨.೧೯೬೯ರಂದು ಉಡುಪಿ ಪಲಿಮಾರುಮಠಕ್ಕೂ ಅಧಿಪತಿಗಳಾಗಿ
ಉಡುಪಿ ಶ್ರೀಕೃಷ್ಣನನ್ನು ಮುಟ್ಟಿ ಆರಾಧಿಸುವ ಅಧಿಕಾರವನ್ನು ಪಡೆದರು |
| ಮೊದಲ ಪರ್ಯಾಯ |
೧೮.೧.೧೯೭೦ ರಿಂದ ೧೭.೧.೭೨ರವರೆಗೆ ಶ್ರೀಪಾದರ ಪ್ರಥಮ ಪರ್ಯಾಯ |
| ಉಡುಪಿ ಶ್ರೀಕೃಷ್ಣನ ಸಮಕ್ಷಮದಲ್ಲಿ ಸರ್ವಮೂಲಪಾಠ |
ಶ್ರೀಪಾದರ ಪ್ರಥಮ ಪರ್ಯಾಯಾವಧಿಯಲ್ಲಿ ಕೃಷ್ಣಮಠದ ಚಂದ್ರಶಾಲೆಯಲ್ಲಿ ಶ್ರೀಕೃಷ್ಣನ ಸಮಕ್ಷಮದಲ್ಲಿ ಸರ್ವಮೂಲಪಾಠವನ್ನು ಶ್ರೀಪಾದರು ನಡೆಸಿದ್ದರು |
| ಪ್ರವಚನದ ಮಂಗಳದಂದು ಚಿನ್ನದ ತೋಟ್ಟಿಲ ಅರ್ಪಣೆ |
ಪರ್ಯಾಯದ ಕೊನೆಯ ಅವಧಿಯಲ್ಲಿ ನಡೆದ ಪ್ರವಚನದ ಮಂಗಳೋತ್ಸವದಂದು ಉಡುಪಿ ಶ್ರೀಕೃಷ್ಣನಿಗೆ ಚಿನ್ನದ ತೊಟ್ಟಿಲ ಸಮರ್ಪಣೆ |
| ಪ್ರಕರಣ ಗ್ರಂಥಗಳ ಪ್ರಕಟಣೆ |
ಮಾಧ್ವರಾದ್ಧಾಂತ ಸಂವರ್ಧಕ ಸಭೆಯ ವತಿಯಿಂದ
ನಾಲ್ಕು ಸಂಪುಟಗಳಲ್ಲಿ ಪ್ರಕಟಗೊಂಡ (೧೯೬೯ ರಿಂದ ೧೯೭೨ ರವರೆಗೆ) ಆಚಾರ್ಯರ ಪ್ರಕರಣ
ಗ್ರಂಥಗಳ ಪ್ರಕಾಶನದಲ್ಲಿ ಪ್ರಮುಖಪಾತ್ರ |
| ಸರ್ವಮೂಲ ಗ್ರಂಥಗಳ ಪ್ರಕಟಣೆ |
ಅಖಿಲಭಾರತ ಮಾಧ್ವಮಹಾಮಂಡಲದಿಂದ ಐದು
ಸಂಪುಟಗಳಲ್ಲಿ ಪ್ರಕಟಗೊಂಡ (೧೯೬೮ ರಿಂದ ೧೯೭೪ ರವರೆಗೆ) ಹೃಷೀಕೇಶತೀರ್ಥೀಯ ಪಾಠಾನುಸಾರವಾದ ಸರ್ವಮೂಲ ಗ್ರಂಥಗಳ ಪ್ರಕಾಶನದಲ್ಲಿ ಪ್ರಮುಖಪಾತ್ರ |
| ಅದಮಾರಿನ 'ಆದರ್ಶಗುರುಕುಲ' ದ ಕುಲಪತಿತ್ವ |
೧೯೭೪ ರಿಂದ ೧೯೮೪ ರವರೆಗೆ ನಡೆದ ಅದಮಾರಿನ
'ಆದರ್ಶ ಗುರುಕುಲ' ದ ಕುಲಪತಿಗಳಾಗಿ ಶ್ರೀವಿಶ್ವಪ್ರಿಯತೀರ್ಥರಿಗೂ (ಅದಮಾರುಮಠ),
ಶ್ರೀಸುಗಣೇಂದ್ರತೀರ್ಥರಿಗೂ (ಪುತ್ತಿಗೆಮಠ), ಶ್ರೀವಿದ್ಯಾಧೀಶತೀರ್ಥರಿಗೂ (ಪಲಿಮಾರು
ಕಿರಿಯಪಟ್ಟ), ಶ್ರೀವಿದ್ಯೇಶತೀರ್ಥರಿಗೂ (ಭಂಡಾರಕೇರಿ ಕಿರಿಯಪಟ್ಟ)
ನ್ಯಾಯವೇದಾಂತಶಾಸ್ತ್ರಗಳ ಅಧ್ಯಾಪನ ಶ್ರೀಪಾದರಿಂದ |
| ಪಲಿಮಾರುಮಠಕ್ಕೆ ಉತ್ತರಾಧಿಕಾರಿ ನಿಯೋಜನೆ |
೧೦.೬.೧೯೭೯ ರಂದು ಅದಮಾರಿನಲ್ಲಿ ರಮೇಶತಂತ್ರಿ
ಎಂಬುವರಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿ ಶ್ರೀವಿದ್ಯಾಧೀಶತೀರ್ಥ ಎಂಬ ನಾಮಕರಣ ಮಾಡಿ
ಶ್ರೀಪಲಿಮಾರುಮಠಕ್ಕೆ ಉತ್ತರಾಧಿಕಾರಿಯಾಗಿ ನಿಯೋಜಿಸಿದರು |
| ಭಂಡಾರಕೇರಿಮಠಕ್ಕೆ ಉತ್ತರಾಧಿಕಾರಿ ನಿಯೋಜನೆ |
೨೧.೪.೮೦ ರಂದು ಬಾರ್ಕೂರಿನ ಭಂಡಾರಕೇರಿಯಲ್ಲಿ ಹರಿಕೃಷ್ಣ ಎಂಬುವರಿಗೆ ಸಂನ್ಯಾಸ ದೀಕ್ಷೆಯನ್ನು
ನೀಡಿ ಶ್ರೀವಿದ್ಯೇಶತೀರ್ಥ ಎಂಬ ನಾಮಕರಣ ಮಾಡಿ ಶ್ರೀಭಂಡಾರಕೇರಿ ಮಠಕ್ಕೆ
ಉತ್ತರಾಧಿಕಾರಿಯಾಗಿ ನಿಯೋಜಿಸಿದರು |
| ಪಲಿಮಾರು ಮಠಾಧಿಪತ್ಯ ಕಾನೂನು ಸಮ್ಮತ ಉಡುಪಿ ಸಿವಿಲ್ ಜಡ್ಜ್ ಕೋರ್ಟಿನ ತೀರ್ಪು |
ಸುಮಾರು ಹತ್ತು ವರ್ಷಗಳಿಂದ
ವಿವಾದಗ್ರಸ್ತವಾಗಿದ್ದ ಶ್ರೀವಿದ್ಯಾಮಾನ್ಯತೀರ್ಥರ ಪಲಿಮಾರು ಮಠಾಧಿಪತ್ಯ ಕಾನೂನು
ಸಮ್ಮತವೆಂದು ಉಡುಪಿ ಸಿವಿಲ್ ಜಡ್ಜ್ ಕೋರ್ಟಿನ ನ್ಯಾಯಮೂರ್ತಿ ಎನ್.ಎಸ್.ಸಂಗೊಳ್ಳಿಯವರು
೩೦.೧೦.೧೯೮೦ ರಂದು ತೀರ್ಪು ನೀಡಿದರು |
| ಪಾಜಕಕ್ಷೇತ್ರದಲ್ಲಿ ಶ್ರೀಮಧ್ವ ಜಯಂತಿಯ ಆಚರಣೆ |
೧೫.೧೦.೧೯೮೦ ರಿಂದ ೧೯.೧೦.೧೯೮೦ ರವರೆಗೆ ಐದುದಿನ ಕಾಲ ಪಾಜಕಕ್ಶೇತ್ರದಲ್ಲಿ ಅತಿವೈಭವದಿಂದ ಶ್ರೀಮಧ್ವಜಯಂತೀ ಆಚರಣೆಯ ಪ್ರಧಾನನೇತೃತ್ವ ಶ್ರೀಪಾದರದ್ದು |
| ಪ್ರಯಾಗದಲ್ಲಿ ಶ್ರೀಮಧ್ವನವಮೀ ಮಹೋತ್ಸವ |
೩೧.೧.೧೯೮೨ ರಿಂದ ೨.೨.೧೯೮೨ ರವರೆಗೆ ಪ್ರಯಾಗದಲ್ಲಿ ನಡೆದ ಶ್ರೀಮಧ್ವನವಮಿ ಮಹೋತ್ಸವದಲ್ಲಿ ಹಿರಿಯ ಪಾತ್ರ |
| ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಕೃಷ್ಣಪ್ರತಿಷ್ಠೆ |
೪.೭.೧೯೮೩ ರಂದು ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀಕೃಷ್ಣದೇವಾಲಯದಲ್ಲಿ ಶ್ರೀಕೃಷ್ಣನ ಪ್ರತಿಷ್ಠೆ ಶ್ರೀಪಾದರಿಂದ |
| ಶ್ರೀಪಾದರ ಎರಡನೇ ಪರ್ಯಾಯ |
೧೮.೧.೧೯೮೬ ರಿಂದ ೧೭.೧.೧೯೮೮ ರವರೆಗೆ ಶ್ರೀಪಾದರ ಎರಡನೇ ವೈಭವದ ಪರ್ಯಾಯ |
| ಜ್ಞಾನಯಜ್ಞ-ನಿರಂತರ ಪ್ರವಚನ |
ಶ್ರೀಪಾದರ ಎರಡನೇ ಪರ್ಯಾಯಾವಧಿಯಲ್ಲಿ ೧೨.೫.೧೯೮೬ ರಿಂದ
೧೭.೧.೧೯೮೮ ರವರೆಗೆ ಊರ ಹಾಗೂ ಪರವೂರ ನಲ್ವತ್ತಕ್ಕಿಂತಲೂ ಅದಿಕ ವಿದ್ವ್ಂಸರು
ರಾಮಾಯಣಾದ್ಗಳ ಪ್ರವಚನ ನೆಡ್ಸಿದ್ದರು |
| ಜಪ-ಪಾರಾಯಣಗಳ ಸುರಿಮಳೆ |
ಎರಡನೇ ಪರ್ಯಾಯದ ಅವಧಿಯಲ್ಲಿ ೭೫೦ ನೇ ಮಧ್ವಜಯಂತಿ
ಸಂಭವಿಸಿದ್ದು, ಆಪ್ರಯುಕ್ತ ೭೪೦ ಬಾರಿ ಸರ್ವಮೂಲ ಪಾರಾಯಣಗಳನ್ನೂ,
ಲೋಕಕಲ್ಯಾಣಕ್ಕಾಗಿಕೋಟಿ ಗಾಯತ್ರಿಜಪವನ್ನೂ, ಕೋಟಿಕೃಷ್ಣಮಂತ್ರವನ್ನೂ ವಿದ್ವಾಂಸರಿಗೆ,
ಪುರೋಹಿತರಿಗೆ ಸಂಭಾವನೆಕೊಟ್ಟು ನಡೆಸಲಾಯಿತು |
| ವ್ಯಾಪಕ ಸನ್ಮಾನ |
ಎರಡನೇ ಪರ್ಯಾಯಕ್ಲದಲ್ಲಿ ನೂರಕ್ಕಿಂತಲೂ ಹೆಚ್ಚು ವಿದ್ವಾಂಸರನ್ನೂ,
ಐವತ್ತಕ್ಕಿಂತಲೂ ಹೆಚ್ಚು ಪುರೋಹಿತರನ್ನೂ ಸಮ್ಮಾನಿಸಿ ಅವರಿಂದ ಇನ್ನಷ್ಟು ಸಾಧನೆ, ಸೇವೆ
ನೆಡೆಯುವಂತೆ ಪ್ರೋತ್ಸಾಹಿಸಲಾಗಿತ್ತು |
| ೭೫ ದಿನಗಳ ಕಾಲ ಸುವರ್ಣ ರರ್ಥೋತ್ಸವ |
೭೫೦ ನೆ ಮಧ್ವಜಯಂತ್ ಪ್ರಯುಕ್ತ ನಿರಂತರವಾಗಿ ೭೫ದಿನಗಳಲ್ಲಿ ಶ್ರೀಕೃಷ್ಣನಿಗೆ ಸುವರ್ಣರಥೋತ್ಸವ ನಡೆಸಲಾಗಿತ್ತು |
| ವೇಧದ ಪರಿಗಣನೆಯಲ್ಲಿ ಈಗ ದೃಗ್ಗಣಿತವೂ ಗ್ರಾಹ್ಯ |
೧೭.೪.೧೯೮೬ ರಂದು ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀಪಾದರು ಏಕಾದಶೀ-ಅನುಷ್ಠಾನದ ಬಗ್ಗೆ ಈ ನಿಲುವನ್ನು ಮಂಡಿಸಿದ್ದರು |
| ಪ್ರಯಾಗದಲ್ಲಿ 'ಮಾಧ್ವಪೀಠ' ದ ಸ್ಠಾಪನೆ |
೧೯೮೬ ವೈಶಾಖ ಶುದ್ಧ ಪಂಚಮಿಯಂದು ಪರ್ಯಾಯ
ಪೀಠಾರೂಢರಾದ ಶ್ರೀಪಾದರು ಪ್ರಯಾಗದಲ್ಲಿ 'ಮಾಧ್ವಪೀಠ'ವನ್ನು ಸ್ಥಾಪಿಸಿ, ಗಡಚಿಂತಿ
ರಾಮಾಚಾರ್ಯರಿಗೆ ಸಂನ್ಯಾಸದೀಕ್ಷೆ ನೀಡಿ, ಶ್ರೀವಿದ್ಯಾವಲ್ಲಭತೀರ್ಥರನ್ನಾಗಿ
ಪರಿವರ್ತಿಸಿ, ಆಪೀಠಕ್ಕೆ ಅವರನ್ನೇ ಅಧಿಪತಿಯನ್ನಾಗಿ ನಿಯೋಜಿಸಿದ್ದರು |
| ಸುವರ್ಣರಥದ ಸಮರ್ಪಣೆ |
೨೫ ಕೆ.ಜಿ. ಚಿನ್ನದ ೧೪ ಅಡಿ ಎತ್ತರದ ೮೫
ಲಕ್ಷ ರೂ. ಬೆಲೆಬಾಳುವ ಸುವರ್ಣರಥವನ್ನು ೧೨.೬.೮೬ ರಿಂದ ೫.೭.೮೬ ರ ಅವಧಿ ಒಳಗೆ ಸಿದ್ಧಪಡಿಸಿ,
೫.೭.೮೬ ರ ಶುಭದಿನದಂದು ಶ್ರೀಕೃಷ್ಣನಿಗೆ ಸಮರ್ಪಿಸಲಾಗಿದೆ |