ಭಂಡಾರಕೇರಿ ಮಠ,ಉಡುಪಿ



ಶ್ರೀ ಭಂಡಾರಕೇರಿಮಠದ ಪರಂಪರೆ
ಶ್ರೀ ವಿದ್ಯಾಮಾನ್ಯತೀರ್ಥರು
ಶ್ರೀ ವಿದ್ಯೇಶತೀರ್ಥರು
ಶ್ರೀಮನ್ಮಾಧ್ವರಾದ್ಧಾಂತ ಸಂವರ್ಧಕ ಸಭಾ



ಶ್ರೀ ಭಂಡಾರಕೇರಿಮಠದ ಗುರು ಪರಂಪರೆ
ಉಡುಪಿ ರಾಮನಾಥ ಆಚಾರ್ಯ

ಆಚಾರ್ಯ ಮದ್ವರ ಆಶ್ರಮ ಗುರುಗಳು ಅಚ್ಯುತಪ್ರಜ್ಞರು. ಇವರ ಪರಂಪರೆಯೇ ಭಂಡಾರಕೇರಿ ಮಠ. ಭಂಡಾರಕೇರಿ ಉಡುಪಿಯಿಂದ ಉತ್ತರಕ್ಕೆ ೨೦ ಕಿ.ಮೀ. ದೂರದ ಬಾರಕೂರಿನಲ್ಲಿದೆ. ಈ ಮಠದ ಆರಾದ್ಯ ಮೂರುತಿ - ಪಟ್ಟದ ದೇವರು ಶ್ರೀರಾಮ. ಆಚಾರ್ಯಮಧ್ವರು ವೇದವ್ಯಾಸರ ಆಶ್ರಮಕ್ಕೆ ಹೊರಟಾಗ ಅವರ ಬೆನ್ನು ಹಿಡಿದು ಸಾಗಿದ ಸತ್ಯತೀರ್ಥರು ಈ ಮಠದ ಅಧಿಪತಿಗಳಾಗಿದ್ದರು. ಆಚಾರ್ಯರ ಹಿಂದೆ ಹೊರಟ ಸುಯೊಗದಿಂದ ಇವರು ಆಚಾರ್ಯರ ಸೂತ್ರಭಾಷ್ಯದ ಮೊದಲ ಲಿಪಿಕಾರರದರು. ಭಾಷ್ಯದ ಒಂದಕ್ಷರ ಬರೆದಲ್ಲಿ ಗಂಗಾನದಿ ತಟದಲ್ಲ್ಲಿ ವಿಷ್ಣುದೇವಾಲಯ ನಿರ್ಮಿಸಿದ ಫಲವನ್ನು ಪದೆಯುತ್ತಾರೆ. ಇಂತಹ ವಿಶೇಷಪುಣ್ಯಕ್ಕೆ ಪಾತ್ರರಾದವರು ಸತ್ಯತೀರ್ಥರು. ಇವರು ಶ್ರೀಮನ್ಮಧ್ವರಿಂದ ಮೂರು ಸಲ ಋಕ್ ಶಾಖೆಯ ಪಾಠವನ್ನು ಹೇಳಿಸಿಕೊಂಡವರು
ಅಚ್ಯುತಪ್ರಜ್ಞರಿಂದ ಇಂದಿನವರೆಗೂ ಮೂವತ್ತನಾಲ್ಕು ಮಂದಿ ಪಟ್ಟವನ್ನಾಳಿದವರು
೧. ಅಚ್ಯುತ ಪ್ರಜ್ಞರು ೧೩. ರಘುವರತೀರ್ಥರು ೨೫. ರಾಜವಂದ್ಯತೀರ್ಥರು
೨. ಆನಂದತೀರ್ಥರು ೧೪. ದಾಮೋದರತೀರ್ಥರು ೨೬. ವಿದ್ಯಾರಾಜತೀರ್ಥರು
೩. ಸತ್ಯತೀರ್ಥರು ೧೫. ರಘುವಲ್ಲಭತೀರ್ಥರು ೨೭. ವಿದ್ಯಾಧಿರಾಜತೀರ್ಥರು
೪. ಸತ್ಯವ್ರತತೀರ್ಥರು ೧೬. ಸುರೋತ್ತಮತೀರ್ಥರು ೨೮. ವಿದ್ಯಾಸಾಗರತೀರ್ಥರು
೫. ವಿಶ್ವಾಧೀಶತೀರ್ಥರು ೧೭. ವಿಶ್ವೋತ್ತಮತೀರ್ಥರು ೨೯. ವಿದ್ಯಾಪತಿತೀರ್ಥರು
೬. ಗದಾಧರತೀರ್ಥರು ೧೮. ರಾಜಾಧಿರಾಜತೀರ್ಥರು ೩೦. ವಿದ್ಯಾನಿಧಿತೀರ್ಥರು
೭. ವೇದಾಂತತೀರ್ಥರು ೧೯. ರಾಘವೇಂದ್ರತೀರ್ಥರು ೩೧. ವಿದ್ಯಾವಾರಿಧಿತೀರ್ಥರು
೮. ವಿದ್ಯಾಧೀಶತೀರ್ಥರು ೨೦. ರಘುಭೂಷಣತೀರ್ಥರು ೩೨. ವಿದ್ಯಾರ್ಣವತೀರ್ಥರು
೯..ವಿಶ್ವಮೂರ್ಥಿತೀರ್ಥರು ೨೧. ರಘುರಾಜತೀರ್ಥರು ೩೩. ವಿದ್ಯಾಮಾನ್ಯತೀರ್ಥರು
೧೦. ರಘುವೇದಾಂತತೀರ್ಥರು ೨೨. ರಘುಪುಂಗವತೀರ್ಥರು ೩೪. ವಿದ್ಯೇಶತೀರ್ಥರು - ಈಗಿನ ಪೀಠಾಧಿಪತಿಗಳು.
೧೧. ರಘುನಾಥತೀರ್ಥರು ೨೩. ರಘುವರ್ಯತೀರ್ಥರು
೧೨. ಹಿರಣ್ಯಗರ್ಭತೀರ್ಥರು ೨೪. ರಘುರಾಜತೀರ್ಥರು
 

ಶ್ರೀ ವಿದ್ಯಾಮಾನ್ಯತೀರ್ಥರು
ಮಹತ್ವದಘಟನೆಗಳು ಮತ್ತು ಸಾಧನೆಗಳು
ಪ್ರಶಂಸೆ-ಪ್ರಭಾವ-ಪವಾಡಗಳು


ಶ್ರೀ ಶ್ರೀ ವಿದ್ಯಾಮಾನ್ಯತೀರ್ಥರ
ಬದುಕಿನ 
ಮಹತ್ವದಘಟನೆಗಳು ಮತ್ತು ಸಾಧನೆಗಳು
ತಂದೆ ತಾಯಿ ಶ್ರೀ ಕುಪ್ಪಣ್ಣ ತಂತ್ರಿಗಳು ಹಾಗೂ ಶ್ರೀಮತಿ ರಾಧಮ್ಮ
ಹುಟ್ಟಿದ ಊರು ಎರ್ಮಾಳು
ಹುಟ್ಟಿದ ದಿನ ಪ್ರಮಾದಿ ಸಂವತ್ಸರ ಆಷಾಡಮಾಸ ಕೃಷ್ಣಪಕ್ಷ ನವಮಿ ಭರಣಿ ನಕ್ಷತ್ರ ರವಿವಾರ - ೨೭.೭.೧೯೧೩
ಪೂರ್ವಾಶ್ರಮದ ಹೆಸರು ನಾರಾಯಣ
ಉಪನಯನ ಎಂಟನೇ ವರ್ಷ ವಯಸ್ಸಿನಲ್ಲಿ ಪುತ್ತಿಗೆ ಮಠದ ಶತಾಯುಷಿ ಶ್ರೀ ಶ್ರೀಸುದೀಂದ್ರತೀರ್ಥರು ಎರ್ಮಾಳಿನ ಮನೆಗೆ ಆಗಮಿಸಿದ ಶುಭ ದಿನದಂದು
ಕೃಷ್ಣಾಮಂತ್ರೋಪದೇಶ ಉಪನಯನದಂದು ಶ್ರೀ ಶ್ರೀಸುದೀಂದ್ರತೀರ್ಥರಿಂದ
ಪ್ರಾಥಮಿಕ ಶಿಕ್ಷಣ ಎರ್ಮಾಳಿನಲ್ಲಿ ತಂದೆ ಶ್ರೀ ಕುಪ್ಪಣ್ಣ ತಂತ್ರಿಗಳಿಂದಲೇ
ಮುಂದಿನ ವಿದ್ಯಾಭ್ಯಾಸ ಉಡುಪಿ ಅನಂತೇಶ್ವರದೇವಾಲಯದಲ್ಲಿ ನೆಡೆಯುತ್ತಿದ್ದ ಶ್ರೀಮನ್ವಧ್ವಸಿದ್ಧಾಂತಪ್ರಬೋಧಿನೀಸಂಸ್ಕೃತ ಮಹಾಪಾಠಶಾಲೆಯಲ್ಲಿ
ಆಶ್ರಮಗುರುಗಳು ಅದಮಾರು ಯತಿಪರಂಪರೆಯಲ್ಲಿ ೨೧ನೆ ಯತಿಗಳಾಗಿದ್ದ ಶ್ರೀ ಶ್ರೀವಿಬುಧಪ್ರಿಯತೀರ್ಥರು
ಸನ್ಯಾಸದ ದಿನ ಕ್ರೋಧನ ಸಂವತ್ಸರದ ಕಾರ್ತೀಕ ಕೃಷ್ಣ ಪಂಚಮಿ - ೫.೧೧.೧೯೨೫
ಆಶ್ರಮದೀಕ್ಷೆ ನಡೆದಸ್ಠಳ ಉಡುಪಿ ಶ್ರೀಕೃಷ್ಣಮಠದ ಸರ್ವಜ್ಞ ಸಿಂಹಾಸನದ ಸಮಕ್ಷಮದಲ್ಲಿ
ಆಶ್ರಮನಾಮ ಶ್ರೀ ವಿದ್ಯಾಮಾನ್ಯತೀರ್ಥ
ಆರೋಹಣ ಮಾಡಿಸಿದ ಪೀಠ ಬಾರ್ಕೂರಿನ ಭಂಡಾರಕೇರಿಮಠದ ೩೪ನೇ ಯತಿಗಳಾಗಿ ಪೀಠಾರೋಹಣ
ಯತಿಗಳಾದ ಬಳಿಕ ವಿದ್ಯಾಭ್ಯಾಸ ನಾಲ್ಕು ತಿಂಗಳು ಉಡುಪಿಯಲ್ಲಿ (ಪರ್ಯಾಯದ ಉಳಿದ ಅವಧಿ) ನಂತರ ಮೂರು ವರ್ಷ ಘಟಿಕಾಚಲದಲ್ಲಿ  ಅದಮಾರು ಪೀಠದ ಶ್ರೀ ಶ್ರೀವಿಬುಧಪ್ರಿಯತೀರ್ಥರಲ್ಲಿ
ಮುಂದಿನ ವಿದ್ಯಾಭ್ಯಾಸ ನ್ಯಾಯ, ವೇದಾಂಘನ ವಿದ್ವಾಂಸರಾಗಿದ್ದ ಇನ್ನ ವಾಸುದೇವಾಚಾರ್ಯರಲ್ಲಿ ಭಂಡಾರಿಕೇರಿಮಠದಲ್ಲಿ ದಶಪ್ರಕರಣಗಳು, ದಶೋಪನಿಷತ್ತುಗಳು ಹಾಗೂ ತತ್ತ್ವಪ್ರಕಾಶಾಕಾ ಇವುಗಳ ಅದ್ಗ್ಯಯನ 
ಪ್ರೌಢಗ್ರಂಥಗಳ ಅಧ್ಯಯನ ಉತ್ತರಾದಿಮಠದ ಶ್ರೀ ಶ್ರೀ ಸತ್ಯಧ್ಯಾನತೀರ್ಥರಲ್ಲಿ
ಸುಧಾಧ್ಯಯನ ನಡೆದ ಸ್ಠಳ ತಿರುಪತಿಯಲ್ಲಿ ಒಂದು ವರ್ಷದ ಅವಧಿಯಲ್ಲಿ  ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಮೂಲಕ
ಸುಧಾಮಂಗಳ ನಡೆದ ಸ್ಠಳ ಬಳ್ಳಾರಿಯಲ್ಲಿ ಪೆನುಗೊಂಡೆ ನರಸಿಂಗರಾಯರ ಮನೆಯಲ್ಲಿ
ಶ್ರೀಗಳವರ ಮೊದಲಶಿಷ್ಯ ಪಿ.ಕೆ.ಹರಿದಾಸಾಚಾರ್ಯರು (ಸುಧಾಧ್ಯಯನ ಸಮಯದಲ್ಲಿ - ತತ್ತ್ವಪ್ರಕಾಶಿಕಾ)
ತತ್ತ್ವಪ್ರಕಾಶಿಕಾ ಮಂಗಲ ಶ್ರೀ ಶ್ರೀ ಸತ್ಯಧ್ಯಾನತೀರ್ಥರು ವಿಜಾಪುರದಲ್ಲಿ ಚಾತುರ್ಮಾಸ್ಯದಲ್ಲಿದ್ದಾಗ ಶ್ರೀಪರ್ವತೀಕರ್ ಗೃಹದಲ್ಲಿ
ಸುಧಾಪಾಠದ ಉಪಕ್ರಮ ಶ್ರೀ ಶ್ರೀ ಸತ್ಯಧ್ಯಾನತೀರ್ಥರಿಂದ ನ್ಯಾಯಾಮೃತ ಕೇಳುತ್ತಿರುವಾಗಲೇ ಶ್ರೀಗಳವರು ಹರಿದಾಸಾಚಾರ್ಯರು, ವಾದಿರಾಜಾಚಾರ್ಯರು ಮತ್ತು ಲಕ್ಷ್ಮೀನಾರಾಯಣ ಕೊಡಂಚ ಮೊದಲಾದವರಿಗೆ ಸುಧಾಪಾಠ ಹೇಳಲು ಉಪಕ್ರಮಿಸಿದರು 
ಮೊದಲ ಸುಧಾಪ್ರವಚನ ಮಂಗಲೋತ್ಸವ ತಿರುಪತಿಯಲ್ಲಿ ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಸಮಕ್ಷಮದಲ್ಲಿ 
ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಜೊತೆಗೆ ಇದ್ದು ಅಧ್ಯಯನ ಮಾಡಿದ ಗ್ರಂಥಗಳು ನಾಲ್ಕು ವರ್ಷಗಳ ಅವಧಿಯಲ್ಲಿ ನ್ಯಾಯಸುಧಾ, ನ್ಯಾಯಾಮೃತ, ತರ್ಕತಾಂಡವ ಚಂದ್ರಿಕಾಗಳನ್ನಲ್ಲದೆ ನ್ಯಾಯಶಾಸ್ತ್ರವನ್ನೂ ಅದ್ಯಯನ ಮಾಡಿದ್ದರು
ಶ್ರೀ ಶ್ರೀ ಸತ್ಯಧ್ಯಾನತೀರ್ಥರು ಶ್ರೀಪಾದರಿಗೆ ಅನುಗ್ರಹಿಸಿದ ಪ್ರಶಸ್ತಿ ವಿದ್ಯಾಭ್ಯಾಸವನ್ನು ಪೂರೈಸಿ ಹೊರಟ ಸಂದರ್ಬದಲ್ಲಿ ಶ್ರೀಗಳನ್ನು ಶ್ರೀ ಶ್ರೀ ಸತ್ಯಧ್ಯಾನತೀರ್ಥರು ಬಿಗಿದಪ್ಪಿ ಗದ್ಗದಿತ ಕಂಠರಾಗಿ ಕೊಟ್ಟ ಪ್ರಶಸ್ತಿ 'ನೀವು ವಿದ್ಯಾಭಂಡಾರ ಆಗಿರುವಿರಿ'
ಎರಡನೇ ಸುಧಾಪ್ರವಚನ ಮಂಗಲೋತ್ಸವ ಶ್ರೀರಂಗದಲ್ಲಿ ಚಾತುರ್ಮಾಸ್ಯ ಕೈಗೊಂಡಿದ್ದಾಗ (ಕಲಕೇರಿ ರಾಮಾಚಾರ್ಯರಿಗೆ) ಎರಡನೇ ಸುಧಾಪ್ರವಚನ ಮಂಗಲೋತ್ಸವ ನಡೆಸಿದರು
ಮೊದಲ ಬದರಿಯಾತ್ರೆ ಕಾಶಿಯಿಂದ ಹರಿದ್ವಾರಕ್ಕೆ ತೆರಳಿದ ಶ್ರೀಪಾದರು ಅಲ್ಲಿಂದ ೧೫೦ ಮೈಲು ಕಾಲುನಡಿಗೆಯಿಂದ ಭಾಷ್ಯಪಾರಾಯಣ ಮಾಡುತ್ತಾ ಬದರಿ ತಲುಪಿ ಒಂದು ವಾರಕಾಲ ಸಾಧನೆ ನೆಡಿಸಿದರು.
ಗಯೆಯಲ್ಲಿ ಚಾತುರ್ಮಾಸ್ಯ ವ್ರತ ಬದರಿಯಾತ್ರೆ ಪೂರೈಸಿದ ಶ್ರೀಪಾದರು ಗಯೆಯಲ್ಲಿ ಚಾತುರ್ಮಾಸ್ಯ ಕೈಗೊಂಡರು
ಗಯೆಯಲ್ಲಿ ಪವಾಡ ಗಯೆಯಲ್ಲಿ ಶ್ರೀವಿಷ್ಣುಪಾದಕ್ಕೆ ಪವಮಾನ ಸೂಕ್ತದ ಪಠನಪೂರ್ವಕ  ಅಭಿಷೇಕ ನಡೆಸುತ್ತಿರಲು, ಫಲ್ಗುನದಿಯಲ್ಲಿ ಪ್ರವಾಹ ಹಿರಿಯುವಷ್ಟೂ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯಿತು
ಶ್ರೀಗಳವರ ವಾದದ ಮೊದಲ ವಿಜಯ ೧೯೪೦ನೇ ಇಸವಿ ಕಾರ್ತೀಕ ಮಾಸದಲ್ಲಿ ವಿಜಯನಗರದ ಸಂಸ್ಥಾನದಲ್ಲಿ ಮಹಾಮಹೋಪಾದ್ಯಾಯ ಶ್ರೀತಾತಾ ಸುಬ್ರಾಯಶಾಸ್ತ್ರಿಗಳ ಜೊತೆಗೆ ವಾದ ನಡೆಸಿ ವಿಜಯಿಗಳಾಗಿದ್ದರು
ಚಂದ್ರಿಕಾ, ನ್ಯಾಯಸುಧಾದಿಗಳ ೪ನೇ ಮಂಗಳ ಭಂಡಾರಕೇರಿಯಲ್ಲಿ ಶ್ರೀಕಾಣಿಯೂರು ವಿದ್ಯಾಸಮುದ್ರತೀರ್ಥರ ನೇತೃತ್ವದಲ್ಲಿ ಚಂದ್ರಿಕಾ, ಶ್ರೀಮನ್ನ್ಯಾಯಸುಧಾ ಗ್ರಂಥಗಳ ಪ್ರವಚನದ ೪ನೇ ಮಂಗಳೋತ್ಸವ
ಮಾದ್ವರಾದ್ಧಾಂತ ಸಂವರ್ಧಕ ಸಭೆಯ ಶುಭಾರಂಭ ಸ್ವರ್ಭಾನು ಸಂವತ್ಸರದ ಮಾಘಶುದ್ಧ ನವಮಿಯಂದು (೧೯೪೩, ಫೆಬ್ರವರಿ) ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ
ಪೇಜಾವರಮಠದ ಶ್ರೀವಿಶ್ವೇಶ್ವತೀರ್ಥರ ಮೊದಲ ಸಂಪರ್ಕ ಸ್ವರ್ಭಾನು ಸಂವತ್ಸರದ ಮಾಘಶುದ್ಧ ನವಮಿಯಂದು , ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ಮಾದ್ವರಾದ್ಧಾಂತ ಸಂವರ್ಧಕ ಸಭೆಯ ಮೊದಲ ಅಧಿವೇಶನದಲ್ಲಿ ಶ್ರೀಗಳಿಗೆ ಅಧ್ಯಕ್ಷಗಿರಿಯನ್ನು ಅನುಗ್ರಹಿಸಿದ ಶುಭ ಸನ್ನಿವೇಶದಲ್ಲಿ
ಪೇಜಾವರದ ಶ್ರೀಗಳವರಿಗೆ ಪಾಠ ಪ್ರಾರಂಭಿಸಿದ ಸ್ಥಳ ಏರಕೀಮಠದ ಶ್ರೀಮದಾಚಾರ್ಯ ಕರಾರ್ಚಿತ ಶ್ರೀಭೂಸಹಿತ ಕೇಶವನ ಸನ್ನಿಧಿಯಲ್ಲಿ, ವೇದಾಂತದ ತತ್ವಸಂಖ್ಯಾನ ಹಾಗೂ ನ್ಯಾಯಶಾಸ್ತ್ರದ ತರ್ಕ ಸಂಗ್ರಹಗಳ ಪಾಠದ ಶುಭಾರಂಭ (ಇತರ ವಿದ್ಯಾರ್ಥಿಗಳು, ಕಾಪು ಹಯಗ್ರೀವಾಚಾರ್ಯರು, ವೇಂಕಟರಮಣ ಐತಾಳರು, ಗುರುರಾಜ ಬಲ್ಲಾಳ ಮುಂತಾದವರು)
ಪೇಜಾವರ ಶ್ರೀಗಳಿಗೆ ನಡೆಸಿದ ಸುಧಾಪಾಠದ ಮಂಗಳೋತ್ಸವ ಉಡುಪಿ ಪೇಜಾವರಮಠದಲ್ಲಿ ಪುತ್ತಿಗೆ ಮಠದ ಶತಾಯುಷಿ ಶ್ರೀ ಸುಧೀಂದ್ರತೀರ್ಥರ ಅಧ್ಯಕ್ಷತೆಯಲ್ಲಿ ಅಷ್ಠಮಠಾದೀಶರ ಸಮುಪಸ್ಠಿತಿಯಲ್ಲಿ
ಪೇಜಾವರ ಶ್ರೀಗಳಿಗೆ ಅಧ್ಯಾಪನ ನಡಿಸಿದ ಅವಧಿ ಸುಮಾರು ಎಂಟು ವರ್ಷಗಳು
ಭಂಡಾರಕೇರಿಯ ಗುರುಕುಲ ಪೇಜಾವರ ಶ್ರೀಗಳವರು ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ಅಧ್ಯಯನ ನಡೆಸುತ್ತಿದ್ದ ಶುಭ ಅವಧಿಯಲ್ಲಿ ಶ್ರೀ ಶ್ರೀವಿದ್ಯಾಮಾನ್ಯತೀರ್ಥರ ಕುಲಪತಿತನದಲ್ಲಿ ಗುರುಕುಲ ಮೆರಿದಿತ್ತು 
ಸರ್ವಜ್ಞಪೀಠಾರೋಹಣ ರಜತೋತ್ಸವ ೧೯೫೦ ರಲ್ಲಿ ಉಡುಪಿಯಲ್ಲಿ ಪೇಜಾವರಮಠದಲ್ಲಿ ಶ್ರೀ ಶ್ರೀವಿಶ್ವೇಶತೀರ್ಥರ ನೇತೃತ್ವದಲ್ಲಿ ನಡೆಯಿತು
ಬದರಿಕ್ಷೇತ್ರದಲ್ಲಿ ಕಾಷ್ಠಮೌನವ್ರತ ಮತ್ತು ಶಿಷ್ಯನ ಸುಧಾಮಂಗಲೋತ್ಸವ ೧೯೫೨ ರಲ್ಲಿ  ೪೮ ದಿನಗಳ ಕಾಲ ಕಾಷ್ಠಮೌನ ವ್ರತ ವನ್ನು ಶ್ರೀಪಾದರು ನೆಡಿಸಿದರು. ೧೯೫೩ ರಲ್ಲಿ ಶಿಷ್ಯ ಶ್ರೀವಿಶ್ವೇಶತೀರ್ಥರು ಗುರುಗಳ ಸಮುಪಸ್ಠಿತಿಯಲ್ಲಿ ಸುಧಾಮಂಗಲೋತ್ಸವವನ್ನು ನೆಡಿಸಿದರು
ಶ್ರೀವಿಶ್ವೇಶತೀರ್ಥರಿಗೆ ಪ್ರೇರಣೆ ೪.೧.೧೯೫೩ರಲ್ಲಿ ಶ್ರೀವಿಶ್ವೇಶತೀರ್ಥರ ನೇತೃತ್ವದಲ್ಲಿ ನಡೆದ ಅಖಿಲ ಭಾರತ ಮಾಧ್ವತತ್ವಜ್ಞಾನ ಸಮ್ಮೇಳನಕ್ಕೆ ಪ್ರೇರಣೆ ನೀಡಿದವರು ಶ್ರೀ ಶ್ರೀವಿದ್ಯಾಮಾನ್ಯತೀರ್ಥರು
ಕಾಂಚಿಪುರದಲ್ಲಿ ನೆಡೆದ ವಾದದಲ್ಲಿ ವಿಜಯ ಮನ್ಮಥ ಸಂತ್ಸರದಲ್ಲಿ ಫಾಲ್ಗುಣಶುದ್ಧ ತ್ರಯೋದಶಿಯಂದು ಕಾಂಚೀಪುರದಲ್ಲಿ ಕುಂಭಕೋಣದ ಕಾಮಕೋಟಿ ಶಂಕರಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಅದ್ವೈತಸಭೆಯಲ್ಲಿ ಮಹಾಮಹೋಪಾದ್ಯಾಯ ಅನಂತಕೃಷ್ಣಶಾಸ್ತ್ರಿ, ಶ್ರೀಸುಬ್ರಹ್ಮಣ್ಯಶಾಸ್ತ್ರಿ, ಸುಂದರಶಾಸ್ತ್ರಿ ಮುಂತಾದವರ ಪೂರ್ವಪಕ್ಷಗಳಿಗೆ ಸಮಾಧಾನಿಸಿ ದ್ವೈತಕ್ಕೆ ಅಪೂರ್ವತ್ವವನ್ನು ಸಮರ್ಥಿಸಿ ಶ್ರೀಪಾದರು ಜಯಿಸಿದ್ದರು.
ಮುಷ್ಠಿ ಅಕ್ಕಿದಾನ ಯೋಜನೆ ಬೆಂಗಳೂರಿನ ಶ್ರೀಪೂರ್ಣವಿದ್ಯಾಪೀಠದ ವಿದ್ಯಾರ್ಥಿಗಳ ಭೋಜನ ವ್ಯವಸ್ಥೆ ಗಾಗಿ 'ಮುಷ್ಠಿ ಅಕ್ಕಿ ದಾನ ಯೋಜನೆ' ಎಂಬ ಸುಲಭ ಯೋಜನೆಯನ್ನು ರೂಪಿಸಿದವರು ಶ್ರೀಪಾದರು
ದಿ|| ರಾಜೇಂದ್ರಪ್ರಸಾದರನ್ನು ಆಕರ್ಷಿಸಿದ ಭಾಷಣ ೧೯೫೮ರಲ್ಲಿ ಹೈದರಾಬಾದಿನಲ್ಲಿ ನಡೆದ ಮೂರನೆಯ ಮಾಧ್ವತತ್ವ ಸಮ್ಮೇಳನ ದಲ್ಲಿ ಪಾಲ್ಗೊಂಡಿದ್ದ ಶ್ರೀಪಾದರ ಭಾಷಣ ಆ ಸಮ್ಮೇಳನದ ಉದ್ಘಾಟಕರಾಗಿದ್ದ ಡಾ|| ರಾಜೇಂದ್ರಪ್ರಸಾದರನ್ನು ಆಕರ್ಷಿಸಿತ್ತು. ಇವರ ಪತ್ನಿ ಹಾಗೂ ಅಕ್ಕ ಶ್ರೀಗಳವರಿಂದ ಶ್ರೀ ಕೃಷ್ಣ ಮಂತ್ರದ ಉಪದೇಶವನ್ನು ಪಡೆದರು
ಕಾಶಿಯಲ್ಲಿ ವಿದ್ವತ್ ಸಭೆಯಲ್ಲಿ ಮೆರೆದುದು ೧೯೫೮ನೇ ನವೆಂಬರ್ ೩೦ನೇ ದಿನ ದಂದು ಕಾಶಿಯಲ್ಲಿ ಮಹಾಮಹೋಪಾಧ್ಯಾಯ ಗಿರಿಧರಶರ್ಮಾ ಚತುರ್ವೇದಿ ಇವರ ಅಧ್ಯಕ್ಷತೆಯಲ್ಲಿ ನಡೆದ ಅದ್ವೈತ ವಿದ್ವಾಂಸರ ಸಭೆಯಲ್ಲಿ ಶ್ರೀಪಾದರ ವೈದುಷ್ಯವನ್ನು ಮೆಚ್ಚಿಕೊಂಡ ವಿದ್ವಾಂಸರು ಶ್ರೀಪಾದರಿಗೆ ಮಾನಪತ್ರ ಸಮರ್ಪಿಸಿ ಗೌರವಿಸಿದರು
ದಿಲ್ಲಿಯಲ್ಲಿ ನಡದ ವೇದಶಾಖಾ ಪ್ರತಿನಿಧಿ ಸಮ್ಮೇಳನದಲ್ಲಿ ಭಾಗವಹಿಸಿದುದು ಶ್ರೀಶಂಕರಪತ್ರಜಿ ಸ್ವಾಮಿಯವರು ದಿಲ್ಲಿಯಲ್ಲಿ ಕರೆದ ವೇದಶಾಖಾ ಪ್ರತಿನಿಧಿ ಸಮ್ಮೇಳನದಲ್ಲಿ ವೈಷ್ಣವ ಪೀಠಾಧಿಪತಿಗಳ ಪರವಾಗಿ ಶ್ರೀಪಾದರು ಪಾಲ್ಗೊಂಡು ಉದ್ಭೋದಕ ಭಾಷಣ ನೀಡಿದರು
ಅದ್ವೈತತತ್ವಸುಧಾ ಸಮೀಕ್ಷಾ ಗ್ರಂಥ ನಿರ್ಮಾಣ ಶ್ರೀಅನಂತಕೃಷ್ಣಶಾಸ್ತ್ರಿಗಳು ಬರೆದ 'ಅದ್ವೈತತಸುಧಾ' ಎಂಬ ಶೀಮನ್ನ್ಯಾಯಸುಧಾ ಖಂಡನಾಭಾಸಕ್ಕೆ ಖಂಡನ ರೂಪದಲ್ಲಿ 'ಅದ್ವೈತತತ್ವ ಸುಧಾ ಸಮೀಕ್ಷಾ' ಎಂಬ ಪ್ರೌಢಹ್ರಂಥವನ್ನು ಶ್ರೀಪಾದರು ರಚಿಸಿದರು
ಹೈದರಾಬಾದ್ ಬಾಗಲಿಂಗಪಲ್ಲಿಯಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ವೃಂದಾವನ ಪ್ರತಿಷ್ಠಾಪನೆ ೭.೨.೧೯೫೯ ರಂದು ಹೈದರಾಬಾದ್ ಬಾಗಲಿಂಗಪಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರತಿಷ್ಠಾಪನೆ
ಬದರಿಕ್ಷೇತ್ರದಲ್ಲಿ ಕಾಷ್ಠಮೌನವ್ರತ ೧೯೬೧ (ಮೇ ತಿಂಗಳು) ಅಧಿಕ ಜ್ಯೇಷ್ಠ ಪ್ರತಿಪತ್ ನಿಂದ ನಿಜ ಜ್ಯೇಷ್ಠ ಚತುರ್ದಶಿಯವರೆಗೆ ೪೮ ದಿನಗಳವರೆಗೆ ಕಾಷ್ಠಮೌನವ್ರತ ಶ್ರೀಪಾದರು ಆಚರ್ಸಿದರು
ದಿಲ್ಲಿಯಲ್ಲಿ ವಾತುರ್ಮಾಸ್ಯ ೧೯೬೧ನೇ ಇಸವಿಯಲ್ಲಿ ಭಕ್ತರ ಕೋರಿಕೆಯಂತೆ ಶ್ರೀಪಾದರು ದಿಲ್ಲಿಯಲ್ಲಿ ಚಾತುರ್ಮಾಸ್ಯ ವ್ರತ ಕೈಕೊಂಡಿದ್ದರು
ದಿಲ್ಲಿಯಲ್ಲಿ ರಾಮನವಮೀ ಮಹೋತ್ಸವ ಪ್ರತಿವರ್ಷ ನಡೆಸುವಂತೆ ದಿಲ್ಲಿಯಲ್ಲಿ ಚಾತುರ್ಮಾಸ್ಯ ಕೈಗೊಂಡ ಸಂದರ್ಭದಲ್ಲೂ ಶ್ರೀಪಾದರು ಬಹುವಿಜೃಂಭಣೆಯಿಂದ ಶ್ರೀರಾಮನವಮಿ ಮಹೋತ್ಸವವನ್ನು ನಡೆಸಿದ್ದು, ಶ್ರೀಗಳವರ ಉಪನ್ಯಾಸದಿಂದ ಆಗಿನ ರಾಷ್ಟ್ರಾಧ್ಯಕ್ಷರಾಗಿದ್ದ ಬಾಬು ರಾಜೇಂದ್ರಪ್ರಸಾದ್, ಉಪರಾಷ್ಟ್ರಾಧ್ಯಕ್ಷರಾಗಿದ್ದ ಶ್ರೀ ರಾಧಾಕೃಷ್ಣನ್, ಶ್ರೀನಂದಾ, ಶ್ರೀ ಅನಂತಶಯನ ಅಯ್ಯಂಗಾರ್ ಮುತಾದವರು ಪ್ರಭಾವಿತರಾಗಿದ್ದರು
ದಿಲ್ಲಿಯಲ್ಲಿ ಶ್ರೀಪಾದರ ನೇತೃತ್ವದಲ್ಲಿ ನಡೆದ 'ವಿಶ್ವಕಲ್ಯಾಣಯಾಗ ಶ್ರೀಪಾದರು ದಿಲ್ಲಿಯಲ್ಲಿದ್ದಾಗ ಅಷ್ಟಗ್ರಹಯೋಗದ ದುಷ್ಪರಿಣಾಮದ ಪರಿಹಾರಕ್ಕಾಗಿ, ಶ್ರೀಪಾದರ ನೇತೃತ್ವದಲ್ಲಿ ರೂಪಗೊಂಡ 'ವಿಶ್ವಕಲ್ಯಾಣಯಾಗ ಸಮಿತಿ' ಯ ಮೂಲಕ ೬ ಲಕ್ಷ ರೂ ವೆಚ್ಚದಲ್ಲಿ ೧೨ ದಿನಗಳ ಅವಧಿಯಲ್ಲಿ ಯಮುನಾ ನದಿಯ ತೀರದ ತುದಿಯ ಘಾಟಿನ ಬಯಲಿನಲ್ಲಿ ೭೦೦ ಉತ್ತರ ದಕ್ಷಿಣ ಭಾರತದ ಋತ್ವಿಜರು ಪಾಲ್ಗೋಂಡು 'ವಿಶ್ವಕಲ್ಯಾಣಯಾಗ' ವನ್ನು  ಯಶಸ್ವಿಯಾಗಿ ನಡೆಸಿದರು.
ದಿಲ್ಲಿಯಲ್ಲಿ ವಿದ್ವತ್ ಸಭೆಯಲ್ಲಿ ಜಯ ದಿಲ್ಲಿಯಲ್ಲಿ ನಡೆದ ವಿಶ್ವಕಲ್ಯಾಣಯಾಗದ ಸಂದರ್ಭದಲ್ಲಿ ಆಯೋಜಿಸಲಾದ ದ್ವೈತಾದ್ವೈತಚರ್ಚೆಯ ಸಭೆಯಲ್ಲಿ ಶ್ರೀರಾಮಚಂದ್ರಶಾಸ್ತ್ರಿ ಷಡಂಗ ಮುಂತಾದವರ ವಿರುದ್ಧವಾಗಿ ವಕ್ಯಾರ್ಥ ನಡೆಸಿ ದ್ವೈತಸಿದ್ಧಾಂತವನ್ನು ಸಮರ್ಥಿಸಲಾಯಿತು.
ಮಳೆಯ ವಿಘ್ನ ಸಂಭವಿಸಿದಂತೆ ತಡೆದ ಪವಾಡ ದಿಲ್ಲಿಯಲ್ಲಿ ವಿಶ್ವಕಲ್ಯಾಣಯಾಗದ ಸಂದರ್ಭದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು ,ಶ್ರೀಪಾದರು ಮಳೆಯಾಗಲಾರದು ಎಂದು ನೀಡಿದ ಆಶ್ವಾಸನೆಗೆ ಅನುಗುಣವಾಗಿ ಮೋಡವೆಲ್ಲ ಚದುರಿ ಹೋಗಿ ಆಕಾಶ ಶುಭ್ರವಾಗಿತ್ತು. ಶ್ರೀಪಾದರ ಪ್ರಾರ್ಥನೆಯ, ಇಚ್ಛಾಶಕ್ತಿಯ ಸಾಮರ್ಥ್ಯವನ್ನು ಕಂಡು ಎಲ್ಲರೂ ಅಚ್ಚರಿಗೊಂಡರು. 'ಇಂಡಿಯನ್ ಎಕ್ಸ್ ಪ್ರೆಸ್ 'ನಂತಹ ಪತ್ರಿಕೆಗಳೂ ಶ್ರೀಪಾದರ ಈ ಪವಾಡವನ್ನು ಪ್ರಶಂಸಿಸಿದ್ದವು
ಸನಾತನ ಧರ್ಮಪ್ರತಿನಿಧಿಗೆ ಮೂರು ವರ್ಷಕಾಲ ಅಧ್ಯಕ್ಷರಾಗಿ ಆಯ್ಕೆ ೬೦೦ ಶಾಖೆಗಳನ್ನು ಹೊಂದಿದ್ದು ಹೊಸದಿಲ್ಲಿಯಲ್ಲಿ ಕೇಂದ್ರದ ಕಛೇರಿಯನ್ನು ಪಡೆದಿದ್ದ ೫೦ ವರ್ಷಗಳಿಂದ ಸನಾತನ ಧರ್ಮವನ್ನು ಪ್ರಚಾರ ಮಾಡುತ್ತ ಬಂದಿದ್ದ ಸನಾತನ ಧರ್ಮಪ್ರತಿನಿಧಿ ಸಭಾಕ್ಕೆ ೧೯೬೨ ರಿಂದ ಮೂರು ವರ್ಷಗಳ ಕಾಲ ಅಧ್ಯಕ್ಷರಾಗಿ ಶ್ರೀಪಾದರು ಆಯ್ಕೆಗೊಂಡಿದ್ದರು
ಮಾಧ್ವತತ್ವಜ್ಞಾನ, ಸಮ್ಮೇಳನದ ಉದ್ಘಾಟನೆ ಬೆಂಗಳೂರಿನಲ್ಲಿ ೧೯೬೩ರಲ್ಲಿ ನಡೆದ ಐದನೇ ಮಾಧ್ವತತ್ವಜ್ಞಾನ ಸಮ್ಮೇಳನದ ಉದ್ಘಾಟನೆಯನ್ನು ಶ್ರೀಪಾದರು ನಡೆಸಿದ್ದರು
ಗೋಹತ್ಯೆ ನಿಷೇಧಿಸಲು ಉಪವಾಸ ಗೋಹತ್ಯಾ ನಿಷೇಧದ ಕಾನೂನನ್ನು ಜಾರಿಗೊಳಿಸ ಬೇಕೆಂದು ಶ್ರೀಪೇಜಾವರ ಶ್ರೀಗಳ ಜೊತೆ ೧೯ ಮತ್ತು .೨೦.೧೧.೧೯೬೬ ರ ಎರಡುದಿನ ನಿರಶನ ವ್ರತ 
ಉಡುಪಿಯ ಪಲಿಮಾರು ಮಠದ ಆಧಿಪತ್ಯ ಅದುವರೆಗೆ ಭಂಡಾರಕೇರಿ ಮಠಕ್ಕಷ್ಟೇ ಅಧಿಪತಿಗಳಾಗಿದ್ದ ಶ್ರೀಪಾದರು ೩.೨.೧೯೬೯ರಂದು ಉಡುಪಿ ಪಲಿಮಾರುಮಠಕ್ಕೂ ಅಧಿಪತಿಗಳಾಗಿ ಉಡುಪಿ ಶ್ರೀಕೃಷ್ಣನನ್ನು ಮುಟ್ಟಿ ಆರಾಧಿಸುವ ಅಧಿಕಾರವನ್ನು ಪಡೆದರು
ಮೊದಲ ಪರ್ಯಾಯ ೧೮.೧.೧೯೭೦ ರಿಂದ ೧೭.೧.೭೨ರವರೆಗೆ ಶ್ರೀಪಾದರ ಪ್ರಥಮ ಪರ್ಯಾಯ
ಉಡುಪಿ ಶ್ರೀಕೃಷ್ಣನ ಸಮಕ್ಷಮದಲ್ಲಿ ಸರ್ವಮೂಲಪಾಠ ಶ್ರೀಪಾದರ ಪ್ರಥಮ ಪರ್ಯಾಯಾವಧಿಯಲ್ಲಿ ಕೃಷ್ಣಮಠದ ಚಂದ್ರಶಾಲೆಯಲ್ಲಿ ಶ್ರೀಕೃಷ್ಣನ ಸಮಕ್ಷಮದಲ್ಲಿ ಸರ್ವಮೂಲಪಾಠವನ್ನು ಶ್ರೀಪಾದರು ನಡೆಸಿದ್ದರು
ಪ್ರವಚನದ ಮಂಗಳದಂದು ಚಿನ್ನದ ತೋಟ್ಟಿಲ ಅರ್ಪಣೆ ಪರ್ಯಾಯದ ಕೊನೆಯ ಅವಧಿಯಲ್ಲಿ ನಡೆದ ಪ್ರವಚನದ ಮಂಗಳೋತ್ಸವದಂದು ಉಡುಪಿ ಶ್ರೀಕೃಷ್ಣನಿಗೆ ಚಿನ್ನದ ತೊಟ್ಟಿಲ ಸಮರ್ಪಣೆ
ಪ್ರಕರಣ ಗ್ರಂಥಗಳ ಪ್ರಕಟಣೆ ಮಾಧ್ವರಾದ್ಧಾಂತ ಸಂವರ್ಧಕ ಸಭೆಯ ವತಿಯಿಂದ ನಾಲ್ಕು ಸಂಪುಟಗಳಲ್ಲಿ ಪ್ರಕಟಗೊಂಡ (೧೯೬೯ ರಿಂದ ೧೯೭೨ ರವರೆಗೆ) ಆಚಾರ್ಯರ ಪ್ರಕರಣ ಗ್ರಂಥಗಳ ಪ್ರಕಾಶನದಲ್ಲಿ ಪ್ರಮುಖಪಾತ್ರ
ಸರ್ವಮೂಲ ಗ್ರಂಥಗಳ ಪ್ರಕಟಣೆ ಅಖಿಲಭಾರತ ಮಾಧ್ವಮಹಾಮಂಡಲದಿಂದ ಐದು ಸಂಪುಟಗಳಲ್ಲಿ ಪ್ರಕಟಗೊಂಡ (೧೯೬೮ ರಿಂದ ೧೯೭೪ ರವರೆಗೆ) ಹೃಷೀಕೇಶತೀರ್ಥೀಯ ಪಾಠಾನುಸಾರವಾದ ಸರ್ವಮೂಲ ಗ್ರಂಥಗಳ ಪ್ರಕಾಶನದಲ್ಲಿ ಪ್ರಮುಖಪಾತ್ರ
ಅದಮಾರಿನ 'ಆದರ್ಶಗುರುಕುಲ' ದ ಕುಲಪತಿತ್ವ ೧೯೭೪ ರಿಂದ ೧೯೮೪ ರವರೆಗೆ ನಡೆದ ಅದಮಾರಿನ 'ಆದರ್ಶ ಗುರುಕುಲ' ದ ಕುಲಪತಿಗಳಾಗಿ ಶ್ರೀವಿಶ್ವಪ್ರಿಯತೀರ್ಥರಿಗೂ (ಅದಮಾರುಮಠ), ಶ್ರೀಸುಗಣೇಂದ್ರತೀರ್ಥರಿಗೂ (ಪುತ್ತಿಗೆಮಠ), ಶ್ರೀವಿದ್ಯಾಧೀಶತೀರ್ಥರಿಗೂ (ಪಲಿಮಾರು ಕಿರಿಯಪಟ್ಟ), ಶ್ರೀವಿದ್ಯೇಶತೀರ್ಥರಿಗೂ (ಭಂಡಾರಕೇರಿ ಕಿರಿಯಪಟ್ಟ) ನ್ಯಾಯವೇದಾಂತಶಾಸ್ತ್ರಗಳ ಅಧ್ಯಾಪನ ಶ್ರೀಪಾದರಿಂದ
ಪಲಿಮಾರುಮಠಕ್ಕೆ ಉತ್ತರಾಧಿಕಾರಿ ನಿಯೋಜನೆ ೧೦.೬.೧೯೭೯ ರಂದು ಅದಮಾರಿನಲ್ಲಿ ರಮೇಶತಂತ್ರಿ ಎಂಬುವರಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿ ಶ್ರೀವಿದ್ಯಾಧೀಶತೀರ್ಥ ಎಂಬ ನಾಮಕರಣ ಮಾಡಿ ಶ್ರೀಪಲಿಮಾರುಮಠಕ್ಕೆ ಉತ್ತರಾಧಿಕಾರಿಯಾಗಿ ನಿಯೋಜಿಸಿದರು
ಭಂಡಾರಕೇರಿಮಠಕ್ಕೆ ಉತ್ತರಾಧಿಕಾರಿ ನಿಯೋಜನೆ ೨೧.೪.೮೦ ರಂದು ಬಾರ್ಕೂರಿನ ಭಂಡಾರಕೇರಿಯಲ್ಲಿ ಹರಿಕೃಷ್ಣ ಎಂಬುವರಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿ ಶ್ರೀವಿದ್ಯೇಶತೀರ್ಥ ಎಂಬ ನಾಮಕರಣ ಮಾಡಿ ಶ್ರೀಭಂಡಾರಕೇರಿ ಮಠಕ್ಕೆ ಉತ್ತರಾಧಿಕಾರಿಯಾಗಿ ನಿಯೋಜಿಸಿದರು
ಪಲಿಮಾರು ಮಠಾಧಿಪತ್ಯ ಕಾನೂನು ಸಮ್ಮತ ಉಡುಪಿ ಸಿವಿಲ್ ಜಡ್ಜ್ ಕೋರ್ಟಿನ ತೀರ್ಪು ಸುಮಾರು ಹತ್ತು ವರ್ಷಗಳಿಂದ ವಿವಾದಗ್ರಸ್ತವಾಗಿದ್ದ ಶ್ರೀವಿದ್ಯಾಮಾನ್ಯತೀರ್ಥರ ಪಲಿಮಾರು ಮಠಾಧಿಪತ್ಯ ಕಾನೂನು ಸಮ್ಮತವೆಂದು ಉಡುಪಿ ಸಿವಿಲ್ ಜಡ್ಜ್ ಕೋರ್ಟಿನ ನ್ಯಾಯಮೂರ್ತಿ ಎನ್.ಎಸ್.ಸಂಗೊಳ್ಳಿಯವರು ೩೦.೧೦.೧೯೮೦ ರಂದು ತೀರ್ಪು ನೀಡಿದರು
ಪಾಜಕಕ್ಷೇತ್ರದಲ್ಲಿ ಶ್ರೀಮಧ್ವ ಜಯಂತಿಯ ಆಚರಣೆ ೧೫.೧೦.೧೯೮೦ ರಿಂದ ೧೯.೧೦.೧೯೮೦ ರವರೆಗೆ ಐದುದಿನ ಕಾಲ ಪಾಜಕಕ್ಶೇತ್ರದಲ್ಲಿ ಅತಿವೈಭವದಿಂದ ಶ್ರೀಮಧ್ವಜಯಂತೀ ಆಚರಣೆಯ ಪ್ರಧಾನನೇತೃತ್ವ ಶ್ರೀಪಾದರದ್ದು
ಪ್ರಯಾಗದಲ್ಲಿ ಶ್ರೀಮಧ್ವನವಮೀ ಮಹೋತ್ಸವ ೩೧.೧.೧೯೮೨ ರಿಂದ ೨.೨.೧೯೮೨ ರವರೆಗೆ ಪ್ರಯಾಗದಲ್ಲಿ ನಡೆದ ಶ್ರೀಮಧ್ವನವಮಿ ಮಹೋತ್ಸವದಲ್ಲಿ ಹಿರಿಯ ಪಾತ್ರ
ಬೆಂಗಳೂರು ಪೂರ್ಣಪ್ರಜ್ಞ  ವಿದ್ಯಾಪೀಠದಲ್ಲಿ ಶ್ರೀಕೃಷ್ಣಪ್ರತಿಷ್ಠೆ ೪.೭.೧೯೮೩ ರಂದು ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀಕೃಷ್ಣದೇವಾಲಯದಲ್ಲಿ ಶ್ರೀಕೃಷ್ಣನ ಪ್ರತಿಷ್ಠೆ ಶ್ರೀಪಾದರಿಂದ
ಶ್ರೀಪಾದರ ಎರಡನೇ ಪರ್ಯಾಯ ೧೮.೧.೧೯೮೬ ರಿಂದ ೧೭.೧.೧೯೮೮ ರವರೆಗೆ ಶ್ರೀಪಾದರ ಎರಡನೇ ವೈಭವದ ಪರ್ಯಾಯ
ಜ್ಞಾನಯಜ್ಞ-ನಿರಂತರ ಪ್ರವಚನ ಶ್ರೀಪಾದರ ಎರಡನೇ ಪರ್ಯಾಯಾವಧಿಯಲ್ಲಿ ೧೨.೫.೧೯೮೬ ರಿಂದ ೧೭.೧.೧೯೮೮ ರವರೆಗೆ ಊರ ಹಾಗೂ ಪರವೂರ ನಲ್ವತ್ತಕ್ಕಿಂತಲೂ ಅದಿಕ ವಿದ್ವ್ಂಸರು ರಾಮಾಯಣಾದ್ಗಳ ಪ್ರವಚನ ನೆಡ್ಸಿದ್ದರು
ಜಪ-ಪಾರಾಯಣಗಳ ಸುರಿಮಳೆ ಎರಡನೇ ಪರ್ಯಾಯದ ಅವಧಿಯಲ್ಲಿ ೭೫೦ ನೇ ಮಧ್ವಜಯಂತಿ ಸಂಭವಿಸಿದ್ದು, ಆಪ್ರಯುಕ್ತ ೭೪೦ ಬಾರಿ ಸರ್ವಮೂಲ ಪಾರಾಯಣಗಳನ್ನೂ, ಲೋಕಕಲ್ಯಾಣಕ್ಕಾಗಿಕೋಟಿ ಗಾಯತ್ರಿಜಪವನ್ನೂ, ಕೋಟಿಕೃಷ್ಣಮಂತ್ರವನ್ನೂ ವಿದ್ವಾಂಸರಿಗೆ, ಪುರೋಹಿತರಿಗೆ ಸಂಭಾವನೆಕೊಟ್ಟು ನಡೆಸಲಾಯಿತು
ವ್ಯಾಪಕ ಸನ್ಮಾನ ಎರಡನೇ ಪರ್ಯಾಯಕ್ಲದಲ್ಲಿ ನೂರಕ್ಕಿಂತಲೂ ಹೆಚ್ಚು ವಿದ್ವಾಂಸರನ್ನೂ, ಐವತ್ತಕ್ಕಿಂತಲೂ ಹೆಚ್ಚು ಪುರೋಹಿತರನ್ನೂ ಸಮ್ಮಾನಿಸಿ ಅವರಿಂದ ಇನ್ನಷ್ಟು ಸಾಧನೆ, ಸೇವೆ ನೆಡೆಯುವಂತೆ ಪ್ರೋತ್ಸಾಹಿಸಲಾಗಿತ್ತು
೭೫ ದಿನಗಳ ಕಾಲ ಸುವರ್ಣ ರರ್ಥೋತ್ಸವ ೭೫೦ ನೆ ಮಧ್ವಜಯಂತ್ ಪ್ರಯುಕ್ತ ನಿರಂತರವಾಗಿ ೭೫ದಿನಗಳಲ್ಲಿ ಶ್ರೀಕೃಷ್ಣನಿಗೆ ಸುವರ್ಣರಥೋತ್ಸವ ನಡೆಸಲಾಗಿತ್ತು
ವೇಧದ ಪರಿಗಣನೆಯಲ್ಲಿ ಈಗ ದೃಗ್ಗಣಿತವೂ ಗ್ರಾಹ್ಯ ೧೭.೪.೧೯೮೬ ರಂದು ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀಪಾದರು ಏಕಾದಶೀ-ಅನುಷ್ಠಾನದ ಬಗ್ಗೆ ಈ ನಿಲುವನ್ನು ಮಂಡಿಸಿದ್ದರು
ಪ್ರಯಾಗದಲ್ಲಿ 'ಮಾಧ್ವಪೀಠ' ದ ಸ್ಠಾಪನೆ ೧೯೮೬ ವೈಶಾಖ ಶುದ್ಧ ಪಂಚಮಿಯಂದು ಪರ್ಯಾಯ ಪೀಠಾರೂಢರಾದ ಶ್ರೀಪಾದರು ಪ್ರಯಾಗದಲ್ಲಿ 'ಮಾಧ್ವಪೀಠ'ವನ್ನು ಸ್ಥಾಪಿಸಿ, ಗಡಚಿಂತಿ ರಾಮಾಚಾರ್ಯರಿಗೆ ಸಂನ್ಯಾಸದೀಕ್ಷೆ ನೀಡಿ, ಶ್ರೀವಿದ್ಯಾವಲ್ಲಭತೀರ್ಥರನ್ನಾಗಿ ಪರಿವರ್ತಿಸಿ, ಆಪೀಠಕ್ಕೆ ಅವರನ್ನೇ ಅಧಿಪತಿಯನ್ನಾಗಿ ನಿಯೋಜಿಸಿದ್ದರು
ಸುವರ್ಣರಥದ ಸಮರ್ಪಣೆ ೨೫ ಕೆ.ಜಿ. ಚಿನ್ನದ ೧೪ ಅಡಿ ಎತ್ತರದ ೮೫ ಲಕ್ಷ ರೂ. ಬೆಲೆಬಾಳುವ ಸುವರ್ಣರಥವನ್ನು ೧೨.೬.೮೬ ರಿಂದ ೫.೭.೮೬ ರ ಅವಧಿ ಒಳಗೆ ಸಿದ್ಧಪಡಿಸಿ, ೫.೭.೮೬ ರ ಶುಭದಿನದಂದು ಶ್ರೀಕೃಷ್ಣನಿಗೆ ಸಮರ್ಪಿಸಲಾಗಿದೆ