ಹೀಗೆ ಭಗವಂತನಿಗೆ ಅತ್ಯಂತ ಪ್ರಿಯವಾದ ವಾಯುವಿನ ಜೀವೋತ್ತಮತ್ವದ
ತಿಳಿವಳಿಕೆಗೆ ಕಾರಣವಾಗಿರುವುದರಿಂದಲೇ ಪವಮಾನಮಂಡಲ ಅವನಿಗೆ ರಂಜಕವಾಗಿ ' ನಿರಾಜನ'
ಎನಿಸಿದೆ.
ವಾಯುದೇವ ಭಗವಂತನಿಗೆ ಅತ್ಯಂತ ಪ್ರಿಯ
'ಮಾಹಾತ್ಮ್ಯೆ' - ಎಂಬ ಗ್ರಂಥ ಸಾರುತ್ತಿರುವಂತೆ
ವಾಯುದೇವೋತ್ತಮತ್ವಜ್ಞಾನವು ಭಗವಂತನಿಗೆ ಅತ್ಯಂತ ಪ್ರಿಯ ಎನಿಸಬೇಕಾದರೆ, ವಾಯುದೇವನು
ಅವನಿಗೆ ಅತ್ಯಂತ ಪ್ರಿಯನಾಗಿದ್ದಿರಲೇ ಬೇಕು.
ಸರ್ವಮೂಲ ಸೌರಭ:
ವಾಯುದೇವನಾದರೂ ಭಗವಂತನಿಗೆ ಯಾಕೆ ಅತ್ಯಂತ ಪ್ರಿಯ ?
ಭಗವಂತನಿಗೆ ಅತ್ಯಂತ ಪ್ರಿಯನೆನಿಸುವನಾದರೂ ಯಾರು ?
'ವಿಷ್ಣುತತ್ತ್ವವಿನಿರ್ಣಯ' ದಲ್ಲಿ ಉದಾಹರಿಸಿರುವ ಪ್ರಮಾಣವೊಂದು ಹೀಗೆ ಸಾರುತ್ತಿದೆ -
'ನ ತಾದೃಶೀ ಪ್ರೀತಿರೀಡ್ಯಸ್ಯ ವಿಷ್ಣೋಃ ಗುಣೋತ್ಕರ್ಷಜ್ಞಾತರಿಯಾದೃಶೀ ಸ್ಯಾತ್ ....'
ಶ್ರೀವಿಷ್ಣುವಿಗೆ ತನ್ನ ಗುಣಾಧಿಕ್ಯವನ್ನು ಅರುತವನಲ್ಲಿ ಎಷ್ಟು
ಪ್ರೀತಿಯೋ ಅಷ್ಟು ಪ್ರೀತಿ ಇನ್ನಾರಲ್ಲೂ ಇರುವುದಿಲ್ಲ.
ಹಾಗಾದರೆ ವಾಯುದೇವ ಭಗವಂತನಿಗೆ ಅತ್ಯಂತ
ಪ್ರಿಯನೆನಿಸಿರುವುದಕ್ಕೆ ಅವನ ಗುಣಾಧಿಕ್ಯದ ತಿಳಿವಳಿಕೆಯೇ ಕಾರಣವೆಂಬುದು ಸ್ಪಷ್ಟ.
(ಪಲಿಮಾರುಮಠದಲ್ಲಿ ನಡೆದ ಪವಮಾನ ಮಂಗಲೋತ್ಸವದಲ್ಲಿ ಪಾಲ್ಗೊಂಡು...)