ಪ್ರಮೇಯಸಂದೇಶ
''ಪದ್ಮಪುರಾಣವು ಆಕಾರೇಣೋಚ್ಯತೇ ವಿಷ್ಣುಃ.....' ಇತ್ಯಾದಿ ಮಾತಿನಿಂದ ಜೀವಾತ್ಮನು ಪರಮಾತ್ಮ ಮತ್ತು ಲಕ್ಷ್ಮೀದೇವಿಯ ದಾಸನಾಗಿರುವನೆಂಬುದನ್ನು ಓಂಕಾರದ ಅಕಾರ, ಉಕಾರ, ಮಕಾರಗಳಿಂದ ಪ್ರತಿಪಾದಿಸಲ್ಪಟ್ಟಿದೆ ಎಂಬುದನ್ನು ತಿಳಿಸಿದೆ. ಸಮಗ್ರ ವೈದಿಕ ವಾಙ್ಮಯವೂ ಓಂಕಾರದಿಂದಲೇ ಅಭಿವ್ಯಕ್ತವಾಗಿರುವುದರಿಂದ ಓಂಕಾರದಿಂದ ಪ್ರತಿಪಾದಿತವಾದ ಜೀವಾತ್ಮರ ದಾಸ್ಯ ಸಮಗ್ರ ವೈದಿಕ ವಾಙ್ಮಯದಿಂದಲೂ ಪ್ರತಿಪಾದಿಸಲ್ಪಟ್ಟಿದೆ ಎಂದೇ ತಿಳಿಸಿದಂತಾಗಿದೆ".

                                        ಭಗವಂತನ ಸ್ವಾತಂತ್ರ್ಯಕ್ಕೊಂದು ಪ್ರಾತ್ಯಕ್ಷಿಕೆ
                                ಸ್ಠಳಶುದ್ಧಿಗಾಗಿ ವಾಮನನ ಉಪಾಸನೆ
                                ಬ್ರಹ್ಮಮೀಮಾಂಸಾಶಾಸ್ತ್ರದಿಂದ ಶೋಧನೆ
                                ಪ್ರಣವದಲ್ಲಿ ದಾಸ್ಯದ ಸಂದೇಶ
                                ಸಂಸಾರದ ಸತ್ಯತ್ವ ಪ್ರಮಾಣತ್ರಯಸಿದ್ಧ
                                ಶರೀರಕ ನಾಮದ ಔಚಿತ್ಯ
                                ಪ್ರತಿಪಾದನೆಯ ಪ್ರಕಾರವೂ ಸೂಚಿತ
                                ಗಾಯತ್ರಿಮಂತ್ರಪ್ರತಿಪಾದ್ಯ ನಾರಾಯಣನೇ
                                ತಾಪತ್ರಯಪರಿಹಾರಕ ತಿಳಿವಳಿಕೆ
                                ಶ್ರೀ ಟೀಕಾಚಾರ್ಯರ 'ಜಯತೀರ್ಥ'

ಭಗವಂತನ ಸ್ವಾತಂತ್ರ್ಯಕ್ಕೊಂದು ಪ್ರಾತ್ಯಕ್ಷಿಕೆ
        'ನಾರಾಯಣಂ ಸುರುಗುರುಂ....' ಎಂಬುದಾಗಿ ಮಹಾಭಾರತದ ಮೊದಲ ಮಂಗಲಪದ್ಯದಲ್ಲಿ ನಾರಾಯಣನನ್ನು 'ಸುರುಗುರು' ವನ್ನಾಗಿ ದೇವತೆಗಳಿಗೆ ಗುರುವನ್ನಾಗಿ ಸ್ತುತಿಸಲಾಗಿದೆ.
        ಕೃಷ್ಣಾವತಾರದ ಸಂದರ್ಭದಲ್ಲಿ ವಾಯುದೇವನೇ ಮುಂತಾದ ಸುರರು ಭೀಮಸೇನ ಇತ್ಯಾದಿ ವ್ಯಕ್ತಿಗಳಾಗಿ ಅವತರಿಸಿದ್ದು ಅವರಿಗೆ ನಾರಾಯಣನು ಕೃಷ್ಣರೂಪದಲ್ಲೂ, ವೇದವ್ಯಾಸರೂಪದಲ್ಲೂ, ಪರಶುರಾಮರೂಪದಲ್ಲೂ ಬೇರೆ ಬೇರೆ ಸಂಸರ್ಭದಲ್ಲಿ ಉಪದೇಶ ನೀಡಿ ಗುರು ಎನಿಸಿರುವನು.
ಸರ್ವಮೂಲದ ಸೌರಭ
        ಇಅದಲ್ಲದೆ, ಪಾಂಡವರಿಗೆ ಶ್ರೀ ವೇದವ್ಯಾಸರು ಭಗವಂತನ ಸ್ವಾತಂತ್ರ್ಯದ, ಪ್ರಕೃತ್ಯಾದಿಗಳ ಅಸ್ವಾತಂತ್ರ್ಯದ ಪ್ರಾತ್ಯಕ್ಷಿಕೆಯನ್ನು ಆಗಾಗ್ಗೆ ಹಲವು ಬಾರಿ ನೀಡಿ ಆ ತತ್ವವನ್ನು ಮನವರಿಕೆ ಮಾಡಿಸಿದ ಪರಮಗುರುಗಳು.

        ಯುಧಿಷ್ಠಿರನ ಎದುರು, 'ಪೌರುಷವಾದ' ವನ್ನು ಮಂಡಿಸುತ್ತಿದ್ದ ಭೀಮಸೇನ ಈ ವಿಚಾರವನ್ನು ಹೀಗೆ ಪ್ರಸ್ತುತಪಡಿಸಿರುವನು-

ಬ್ರಹ್ಮಾದೀನಾಂ ಪ್ರಕೃತೇಸ್ತದ್ವಶತ್ವಂ
ದೃಷ್ಟಂ ಹಿ ನೋ ಬಹುಧಾ ವ್ಯಾಸದೇಹೇ |
ಪಾರಾಶರ್ಯೋ ದಿವ್ಯದೃಷ್ಟಿಂ ಪ್ರದಾಯ
ಸ್ವಾತಂತ್ರ್ಯಂ ನೋ ದರ್ಶಯಾಮಾಸ ಲೋಕೇ ||
- ಮ.ಭಾರ.ತಾ.ನಿ. ೨೨-೧೧೪
        ಶ್ರೀ ವೇದವ್ಯಾಸರು ಅನೇಕ ಬಾರಿ ದಿವ್ಯದೃಷ್ಟಿಯನ್ನು ನೀಡಿ ತಮ್ಮ ದೇಶದಲ್ಲಿ ಚಿತ್ ಪ್ರಕೃತಿಗೂ ಚತುರ್ಮುಖಾದಿಗಳಿಗೂ ಭಗವಧೀನತ್ವವನ್ನೂ ಭಗವಂತನ ಸ್ವಾತಂತ್ರ್ಯವನ್ನೂ ತೋರಿಸಿಕೊಟ್ಟಿರುವರು.
        ಭೀಮಸೇನನ ಈ ಮಾತು 'ಸ್ವತಂತ್ರೋ ಭಗವಾನ್ ವಿಷ್ಣುಃ ಅಸ್ವತಂತ್ರಂ ದ್ವಿಧೇತರತ್' ಎಂಬ ಪ್ರಮುಖ ಪ್ರಮೇಯದ ವಿಷಯದಲ್ಲಿ ಪಾಡವರ ಪಾಲಿಗೆ ಶ್ರೀ ವೇದವ್ಯಾಸರು ಹೇಗೆ ಗುರುಗಳಾಗಿರುವರೆಂಬುದನ್ನು ಸಾರಬಲ್ಲದು.
(ಪಲಿಮಾರು ಶ್ರೀಗಳವರ ಪರ್ಯಾಯಾವಧಿಯಲ್ಲಿ ಶ್ರೀಕೃಷ್ಣಮಠದಲ್ಲಿ ನೀಡಿದ ಪ್ರವಚನದಲ್ಲಿ....)

 ಸ್ಠಳಶುದ್ಧಿಗಾಗಿ ವಾಮನನ ಉಪಾಸನೆ
        'ಸ್ಥಲೇ ಚ ಮಾಯಾವಟುವಾಮನೋವ್ಯಾತ್' ಎಂದು ನಾರಾಯಣವರ್ಮದಲ್ಲಿ ಉಲ್ಲೇಖಗೊಂಡಂತೆ ಸ್ಥಳದ ವಿಷಯದಲ್ಲಿ ವಾಮನರೂಪಿ ಪರಮಾತ್ಮನು ರಕ್ಷಣೆ ನೀಡುವನು.
        ಸ್ಥಳದ ವಿಷಯದ ರಕ್ಷಣೆಯಲ್ಲಿ, ಸ್ಥಳದಲ್ಲಿ ಬರಬಹುದಾದ ಆಪತ್ತುಗಳ ಪರಿಹಾರ ವಷ್ಟೇ ಅಲ್ಲದೆ, ಸ್ಥಳದಲ್ಲಿ ಭೂತಪ್ರೇತಾದಿ ದುಷ್ಟಶಕ್ತಿಗಳ ಆಕ್ರಮಣದಿಂದಾಗಿಯೋ; ಎಲಬು, ಮೂಳೆ, ತಲೆಗೂದಲು ಇತ್ಯಾದಿ ದುಷ್ಟವಸ್ತುಗಳ ಸಂಪರ್ಕದಿಂದಾಗಿಯೋ; ಕೊಲೆ, ಹಿಂಸೆ ಮುಂತಾದ ಕೆಟ್ಟ ಚಟುವಟಿಕೆಗಳ ಸಂಬಂಧದಿಂದಾಗಿಯೋ - ಅಶುದ್ಧಿ, ಅಪಾವಿತ್ರ್ಯ ಸಂಭವಿಸಿದ್ದರೆ, ಅದರ ಪರಿಹಾರವೂ ಸ್ಥಳದ ಇಷಯದ ರಕ್ಷಣೆ ಎನಿಸಿದ್ದು, ಇದನ್ನೂ ವಾಮನರೂಪಿ ಪರಮಾತ್ಮನು ಅನುಗ್ರಹಿಸುವನು.

ಸರ್ವಮೂಲದ ಸೌರಭ
        ವಾಮನನಲ್ಲಿಯ ಆ ಬಗೆಯ ಸಾಮರ್ಥ್ಯವನ್ನು 'ವಾಮನಪುರಾಣ' (ಬ್ರ.ಸೂ.ಭಾ. ೨-೧೪) ಹೀಗೆ ಉದ್ಘೋಷಿಸಿದೆ -
ಯತ್ ಸ್ಥಾನತ್ವಾದಿದಂ ಚಕ್ಷುರಸಂಗಂ ಸರ್ವವಸ್ತುಭಿಃ |
ಸ ವಾಮನಃ ಪರೋಸ್ಮಾಕಂ ಗತಿರಿತ್ಯೇವ ಚಿಂತಯೇತ್ |
        ವಾಮನರೂಪಿ ಪರಮಾತ್ಮನು ಕಣ್ಣಿನಲ್ಲಿ ನೆಲೆಸಿರುವುದರಿಂದ ಕಣ್ಣು ತುಪ್ಪವೇ ಮುಂತಾದ ಯಾವುದೇ ಜಿಡ್ಡು ಪದಾರ್ಥದ ಸಂಪರ್ಕಕ್ಕೆ ಒಳಗಾಗದೆ, ನಿರ್ಲಿಪ್ತವಾಗಿ ಶುದ್ಧವಾಗಿ ಇರುವುದು. ಅಂತಹ ವಾಮನನು ನಮಗೆ ಮುಖ್ಯ ಆಸರೆ ಎಂದು ಧ್ಯಾನಮಾಡಬೇಕು.
        ಹೀಗೆ ಕಣ್ಣಿಗೆ ಶುದ್ಧಿಯನ್ನು ನೀಡುವ ವಾಮನನು ನಮ್ಮ ಮನೆ, ಮನೆಯ ಪರಿಸರ ಮುಂತಾದ ಸ್ಥಳಗಳಿಗೂ ಶುದ್ಧಿಯನ್ನು ನೀಡುವನು. ಆದ್ದರಿಂದ ವಾಸ್ತುಶಸ್ತ್ರ ಪ್ರಕಾರ ಮನೆ ಕಟ್ಟಬೇಕಾದ ಅಥವಾ ಮನೆಯನ್ನು ಆಗಾಗಲೇ ಕಟ್ಟಿದ ಸ್ಥಳಕ್ಕೆ ಯಾವುದೇ ಬಗೆಯ ಅಶುದ್ಧಿ ಇದೆ ಎಂದು ತಿಳಿದು ಬಂದಲ್ಲಿ ವಾಮನನನ್ನು ವಸ್ತುಗಳಿಗೆ ಪರಿಶುದ್ಧಿಯನ್ನು ಅನುಗ್ರಹಿಸುವ ಅವನ ವ್ಯಕ್ತಿತ್ವದ ಅನುಸಂಧಾನದೊಂದಿಗೆ ಉಪಾಸನೆ ನಡೆಸಬೇಕು.
(ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ವಾಮನಪುರಾಣದ ಬಗ್ಗೆ ನೀಡಿದ ಪ್ರವಚನದಲ್ಲಿ)

ಬ್ರಹ್ಮಮೀಮಾಂಸಾಶಾಸ್ತ್ರದಿಂದ ಶೋಧನೆ
        ನಖಸ್ತುತಿಯಲ್ಲಿ 'ಲಕ್ಷ್ಮೀಕಾಂತ ಸಮಂತತೋ ವಿಕಲಯನ್ ನೈವೇಶಿತುಸ್ತೇ ಸಮಂ | ಪಶ್ಯಾಮಿ....' ಎಂಬುದಾಗಿ ಶ್ರೀಮದಾಚಾರ್ಯರು 'ಸಮಂತತಃ' ಎಲ್ಲೆಡೆಯಲ್ಲಿ ಹುಡುಕಿದರೂ ನಿನಗೆ ಸದೃಶನಾದವನನ್ನು ಕಂಡಿಲ್ಲ ಎಂದು ನರಸಿಂಹನನ್ನು ಸ್ತುತಿಸಿರುವರು.
ಸರ್ವಮೂಲದ ಸೌರಭ
        ಆದರೆ ನರಸಿಂಹನಿಗೆ ಸದೃಶನಾದವನಿಗಾಗಿ ಎಲ್ಲೆಡೆ ಶೋಧನೆ ಮಾಡಿದರೆ ಉಪಯೋಗವಿಲ್ಲ. ಯಾಕೆಂದರೆ ಅವನು ಹಾಗೆ ಎಲ್ಲೆಲ್ಲೋ ಸಿಗುವವನಲ್ಲ.
        ಆದ್ದರಿಂದ 'ಸಮಂತತಃ' - ಎಂಬುದಕ್ಕೆ ಎಲ್ಲೆಡೆ ಎಂಬ ಅರ್ಥ ಅಷ್ಟೊಂದು ಔಚಿತ್ಯಪೂರ್ಣವೆನಿಸದು. ಅದಕ್ಕಾಗಿ 'ಸಮಂತತಃ' ಎಂಬುದಕ್ಕೆ ವೇದಾರ್ಥನಿರ್ಣಾಯಕ ಬ್ರಹ್ಮಮೀಮಾಂಸಾ ಶಸ್ತ್ರದಿಂದ ಎಂಬ ಅರ್ಥವನ್ನು ಹೇಳಬೇಕು.
        ಅಂತ ಎಂದರೆ ನಿರ್ಣಯ. 'ಅಂತೋ ನಿರ್ಣಯಃ' (ಗೀತಾಭಾಷ್ಯ ೨-೧೬) 'ಸಂ' - ಸಮೀಚೀನಗಳಾದ 'ಅಂತ' ನಿರ್ಣಯಗಳನ್ನು ನೀಡುವ ಬ್ರಹ್ಮಮೀಮಾಂಸಾಶಾಸ್ತ್ರ 'ಸಮಂತಮ್' (ಸಂ ಅಂತಾಃ ಯಸ್ಮಾತ್ ತತ್ ಸಮಂತಮ್) ತೃತೀಯಾವಿಭಕ್ತ್ಯರ್ಥದಲ್ಲಿ ತಸಿಲ್ ಪ್ರತ್ಯಯ ಎಂದಿಟ್ಟುಕೊಂಡಲ್ಲಿ 'ಸಮಂತತಃ' ಎಂಬುದಕ್ಕೆ ಬ್ರಹ್ಮಮೀಮಾಂಸಾ ಶಾಸ್ತ್ರದಿಂದ ಎಂಬ ಅರ್ಥ ಹೊರಡುವುದು. ವೇದದ ಬಗ್ಗೆ, ಭಗವಂತನ ಬಗ್ಗೆ ನಿರ್ಣಯ ನೀಡಲು ಹೊರಟಿರುವ ಬ್ರಹ್ಮಮೀಮಾಂಸಾಶಾಸ್ತ್ರ್ 'ಬ್ರಹ್ಮನಿಗೆ ಸದೃಶನಾಗಿರುವವನು ಇರುವನೇ? ಎಂಬ ಶೋಧನೆಗೆ ಮುಖ್ಯ ಸಾಧನ ವಾಗಿರುವುದರಿಂದ ಅಂತಹ ಬ್ರಹ್ಮ ಮೀಮಾಂಸಾಶಾಸ್ತ್ರದಿಂದ ಲಕ್ಷ್ಮೀಕಾಂತನಿಗೆ ಸಮಾನನಾದವನು ಇರುವನೇ ಎಂದು ಶೋಧಿಸುವುದು ಹಾಗೂ ಶೋಧಿಸಿ, ಸಮಾನನಾದವನು ಇಲ್ಲ ಎಂದು ನಿರ್ಧರಿಸುವುದು ಸಮುಚಿತವೆನಿಸುವುದು.
(ಪಾಜಕದಲ್ಲಿ ನಡೆದ ಮಧ್ವನವರಾತ್ರೋತ್ಸವದಲ್ಲಿ ಪಾಲ್ಗೊಂಡು....)
ಹನುಮಂತನೇ ಜಯಕ್ಕೆ ಕಾರಣ
        ಜಯಕ್ಕೆ ಕಾರಣನಾದ ವಾಯುರೂಪೀ ಹನುಮಂತನು ಅರ್ಜುನನರಥದ ಧ್ವಜದಲ್ಲಿ ಸನ್ನಿಹಿತನಾದುದರಿಂದಲೇ ಅರ್ಜುನನು ವಿಜಯಶಾಲಿಯಾಗುತ್ತಿದ್ದನೆಂದು ಶ್ರೀಮದಾನಂದತೀರ್ಥರು 'ವಿಶೇಷತೋ ಧ್ವಜಸಂಸ್ಥೇ ಹನೂಮತ್ಯಜೇಯತಾಸ್ಯಾತ್ ಜಯರೂಪೋ ಯತೋಸೌ (೨೦-೨೨೭) ಎನ್ನುವ ಭಾರತ ತಾತ್ಪರ್ಯನಿರ್ಣಯ ವಚನದಿಂದ ಸ್ಪಷ್ಟಪಡಿಸಿದ್ದಾರೆ.
-ಶ್ರೀ ಶ್ರೀ ವಿದ್ಯೇಶತೀರ್ಥರು


ಪ್ರಣವದಲ್ಲಿ ದಾಸ್ಯದ ಸಂದೇಶ
        ಜೀವೇಶ್ವರರ ಮಧ್ಯೆ ಐಕ್ಯವನ್ನಿಟ್ಟುಕೊಂಡು ನಡೆಸಲಾಗುತ್ತಿದ್ದ 'ಸೋಹಂ' ಉಪಾಸನೆಯನ್ನು ನಿರಾಕರಿಸಿ, 'ದಾಸೋಹಂ' ಎಂಬ ಉಪಾಸನೆಯ ಸಂದೇಶವನ್ನು ನೀಡಿರುವವರು ಶ್ರೀ ಮಧ್ವರು. ಈ ಉಪಾಸನೆಯ ಹಿನ್ನೆಲೆಯ ಜೀವೇಶ್ವರರ ನಡುವೆ ಸ್ವಾಮಿಸ್ವಾಮ್ಯಭಾವಸಂಬಂಧಕ್ಕೆ ಕುರಿತಾದ ತತ್ತ್ವ ಶ್ರೀಮದಾಚಾರ್ಯರ ಸಿಸ್ಶಾಂತದ ಪ್ರಧಾನತತ್ತ್ವವಾಗಿದ್ದು, ಅದು ಪ್ರಣವದಿಂದಲೂ ಪ್ರತಿಪಾದ್ಯವಾಗಿದೆ ಎಂದು 'ಪದ್ಮಪುರಾಣ' ಸಂದೇಶಿಸಿದೆ -
ಆಕಾರೇಣೋಚ್ಯತೇ ವಿಷ್ಣುಃ ಶ್ರೀರುಕಾರೇಣೋಚ್ಯತೇ |
ಮಕಾರೇಣ ತಯೋರ್ದಾಸಃ ಪಂಚವಿಂಶ ಇತಿ ಸ್ಮೃತಃ |
ದಾಸತ್ವಮತೋಸ್ಯ ಮಧ್ಯಮೇನಾವಧಾರ್ಯತೇ ||
        ಓಂಕಾರದಲ್ಲಿ ಅಕಾರ, ಉಕಾರ ಹಾಗೂ ಮಕಾರಗಳಿದ್ದು, ಅವುಗಳಲ್ಲಿಯ ಆಕಾರದಿಂದ ವಿಷ್ಣುವೂ; ಉಕಾರದಿಂದ ಶ್ರೀದೇವಿಯೂ; ಮಕಾರದಿಂದ ಅವರಿಬ್ಬರ ದಾಸನಾದ ಇಪ್ಪತ್ತೈದನೇ ತತ್ತ್ವ ಎನಿಸುವ ಜೀವನೂ ಹೇಳಲ್ಪಡುವರು. ಮಧ್ಯದ ಉಕಾರಕ್ಕೆ ಅವಧಾರಣೆಯೇ ಅರ್ಥವಾಗಿದ್ದು ಜೀವಾತ್ಮನ ದಾಸ್ಯವನ್ನು ಅದು ಒತ್ತಿಹೇಳುವುದು. ಜೀವಾತ್ಮನ ದಾಸತ್ವವು ಯಾವುದೇ ದೇಶದಲ್ಲಿ ಯಾವುದೇ ಕಾಲದಲ್ಲಿ ಬದಲಾಗುವುದಿಲ್ಲ ಎಂಬ ದಾರ್ಢ್ಯವು ಸೂಚಿತವಾಗುವುದು.
ಸರ್ವ ಮೂಲದ ಸೌರಭ
        ಹೀಗೆ ಸರ್ವಮೂಲಗ್ರಂಥಗಳಲ್ಲಿ ವ್ಯಾಪಕವಾಗಿ ಪ್ರತಿಪಾದಿಸಲ್ಪಟ್ಟಿರುವ ಜೀವಾತ್ಮರ ದಾಸ್ಯವು ಓಂಕಾರದಲ್ಲಿ ದಾರ್ಢ್ಯಪೂರ್ವಕವಾಗಿ ಪ್ರತಿಪಾದಿಸಲ್ಪಟ್ಟಿದೆ. ಎಂದರೆ ಸಮಗ್ರ ವೈದಿಕವಾಙ್ಮಯದಲ್ಲಿಯೇ ಅದರ ಪ್ರತಿಪಾದನೆ ನಡೆದಿದೆ ಎಂದಂತೆಯೇ ಯಾಕೆಂದರೆ ಸಮಗ್ರವೈದಿಕವಾಙ್ಮಯವೂ ಓಂಕಾರದಿಂದಲೇ ಅಭಿವ್ಯಕ್ತವಾದುದು. ಓಂಕಾರದ ವ್ಯಾಖ್ಯಾನ ರೂಪದಲ್ಲಿ ಇರುವಂತಹದ್ದು. ವ್ಯಾಖ್ಯೇಯದಲ್ಲಿ, ಮೂಲದಲ್ಲಿ ಪ್ರಸ್ತುತವಾದ ಪ್ರಮೇಯ ವ್ಯಾಖ್ಯಾನದಲ್ಲಿ ಪ್ರತಿಪಾದಿಸಲ್ಪಟ್ಟಿದ್ದಿರಲೇಬೇಕು ತಾನೇ?
(ಉಡುಪಿಯಲ್ಲಿ ನಡೆದ ಮಧ್ವನವಮಿ ಉತ್ಸವದಲ್ಲಿ ಪಾಲ್ಗೊಂಡು....)

ಸಂಸಾರದ ಸತ್ಯತ್ವ ಪ್ರಮಾಣತ್ರಯಸಿದ್ಧ
        'ಊರ್ಧ್ವಮೂಲೋವಾಕ್ ಶಾಖಃ....' ಎಂದು ಸಂಸಾರವೃಕ್ಷದ ಬೇರನ್ನೂ, ಗೆಲ್ಲನ್ನೂ ತಿಳಿಸುವ ಮೂಲಕ ಸಂಸಾರವೃಕ್ಷದ ಪರಿಚಯವನ್ನು ನೀಡಿರುವ ಹಾಠಕೋಪನಿಷತ್ತು, ಅಂತಹ ಸಂಸಾರ ಸತ್ಯತ್ವದ ವಿಷಯದಲ್ಲಿ ಪ್ರತ್ಯಕ್ಷ, ಅನುಮಾನ ಹಾಗೂ ಆಗಮಗಳನ್ನು ಪ್ರಮಾಣಗಳನ್ನಾಗಿ ಸೂಚಿಸಿದೆ - 'ಏಷೋಶ್ವತ್ಥಃ ಸನಾತನಃ - ಎಂಬುದಾಗಿ.
ಸರ್ವಮೂಲ ಸೌರಭ
        ಏಷಃ- ಇದು ಅಂದರೆ ಕಣ್ಣು ಮುಂತಾದ ಇಂದ್ರಿಯಗಳಿಗೆ ಗೋಚರಿಸುವಂತಹದ್ದೆಂದು ನಿರ್ದೇಶಿಸುವಮೂಲಕ ಸಂಸಾರವು ಪ್ರತ್ಯಕ್ಷಗೋಚರ ಎಂದಂತಾಗುವುದು.
        ಅಶ್ವತ್ಥ ಶಬ್ದಕ್ಕೆ,
'....ಸೋಶ್ವ ಆಶುಗತೋ ಹರಿಃ |
ತದ್ವ್ಯಾಪ್ತತ್ವಾತ್ ತದನ್ನತ್ವಾದಶ್ವತ್ಥೋಯಂ ಪ್ರಕೀರ್ತಿತಃ....||
        ಎಂದು ಪ್ರಾಮಾಣ (ಕಾಠಕ ಭಾಷ್ಯ) ಸಾರುತ್ತಿರುವಂತೆ ಬೇಗ ಸಾಗುವ ಭಗವಂತನು ಅಶ್ವ ಎನಿಸಿದ್ದು, ಅಂತಹ ಭಗವಂತನಿಂದ ವ್ಯಾಪಿಸಲ್ಪಟ್ಟಿರುವುದರಿಂದ, ಹಾಗೂ ಅವನಿಗೆ 'ಅನ್ನ' ಆಗಿರುವುದರಿಂದ ಸಂಸಾರವು ಅಶ್ವತ್ಥ ಎನಿಸುವುದು ಎಂದು ವ್ಯಾಖ್ಯಾನಿಸಲಾಗಿದೆ.
        ಇದರಿಂದಾಗಿ ಸಂಸಾರವು ಸತ್ಯ ಎಂಬುದಕ್ಕೆ ಅನುಮಾನಪ್ರಮಾಣವನ್ನು ತೋರಿಸಿದಂತಾಗಿದೆ. ಭಗವಂತನಿಂದ ವ್ಯಾಪಿಸಲ್ಪಟ್ಟಿರುವುದರಿಂದ ಹಾಗೂ ಪ್ರಲಯಕಾಲದಲ್ಲಿ ಅವನ ಅನ್ನ ಆಗಿರುವದರಿಂದ ಸಂಸಾರ ಸತ್ಯ ಆಗಿರಲೇ ಬೇಕು ತಾನೆ? ರಜ್ಜು ಸರ್ಪದಂತೆ ಮಿಥ್ಯಾ ಎನಿಸಿದಲ್ಲಿ ಅಂತಹ ಸಂಸಾರವನ್ನು ವ್ಯಾಪಿಸುವುದಾದರೂ ಹೇಗೆ? ಅದು ಅನ್ನ ಆಗುವುದಾದರೂ ಹೇಗೆ?
        ಸನಾತನ ಎಂಬುದಕ್ಕೆ ಸನಾದನ - ವಿಧಿನಿಷೇಧರೂಪವಾದ ಶಬ್ದಗಳಿಗೆ ಪಾತ್ರವಾದುದು ಎಂಬ ಅರ್ಥ. ಭಗವದ್ಗೀತೆಯ (೨-೨೪) '....ಅಯಂ ಸನಾತನಃ' ಎಂಬ ಮಾತಿನ ಸನಾತನ ಶಬ್ದವನ್ನು ಶ್ರೀ ಮಧ್ವರು ಮಹಾವಿಷ್ಣುಪುರಾಣದ ಮುಲಕ ಹೀಗೆಯೇ ವ್ಯಾಖ್ಯಾನಿಸಿರುವರು - 'ನಿಷೇಧವಿಧ ಿಪಾತ್ರತ್ವಾತ್ ಸನಾತನ ಇತಿ ಸ್ಮೃತಃ'
        ಹೀಗೆ ಸಂಸಾರಕ್ಕೆ ನೀಡಲಾದ ಸನಾತನ ಎಂಬ ವಿಶೇಷಣವು ಸಂಸಾರವು ವೈದಿಕ ಶಬ್ಧಗಳಿಗೆ ಗೋಚರಿಸುವಂತಹದ್ದೆಂದು ಅರ್ಥ ನೀಡುವ ಮೂಲಕ ಸಂಸಾರದ ವಿಷಯದಲ್ಲಿ ಆಗಮ ಪ್ರಮಾಣವನ್ನು ಸೂಚಿಸಿಕೊಡಬಲ್ಲದು.
        ಈ ರೀತಿಯಾಗಿ ಸಂಸಾರದ ಸ್ವರೂಪವನ್ನು ಪರಿಚಯಿಸಹೊರಟ ಕಾಠಕದ ಮಾತಿನಿಂದ, ಅಂತಹ ಸಂಸಾರದ ಸ್ತ್ಯತ್ವದ ವಿಷಯದಲ್ಲಿ ಪ್ರತ್ಯಕ್ಷ, ಅನುಮಾನ ಹಾಗೂ ಆಗಮ ಈ ಮೂರು ಪ್ರಮಾಣಗಳೂ ಸೂಚಿಸಲ್ಪಟ್ಟಿವೆ.
(ಕೊಡಂಗಳ ವಿಷ್ಣುಮೂರ್ತಿಯ ಸನ್ನಿಧಿಯಲ್ಲಿ ನೀಡಿದ ಪ್ರವಚನದಲ್ಲಿ.....)

ಶಾರೀರಕ ನಾಮದ ಔಚಿತ್ಯ

ವಸುದೇವಾದಿರೂಪೇಣ ಚತುರ್ಮೂರ್ತಿಶ್ಚ ಸರ್ವಶಃ |
ಅಥವಾ ಪಂಚಮೂರ್ತಿಃ ಸ ಪ್ರೋಕ್ತೋಧಿಕರಣಂ ಪ್ರತಿ |
ಪ್ರತಿಸೂತ್ರಂ ಪ್ರತಿಪದಂ ಪ್ರತ್ಯಕ್ಷರಮಥಾಪಿ ವಾ ||
        ಬ್ರಹ್ಮಸೂತ್ರದ ಪ್ರತಿಯೊಂದು ಅಧಿಕರಣದಲ್ಲೂ, ಪ್ರತಿಯೊಂದು ಸೂತ್ರದಲ್ಲೂ, ಪ್ರತಿಯೊಂದು ಶಬ್ದದಲ್ಲೂ ಪ್ರತಿಯೊಂದು ಅಕ್ಷರದಲ್ಲೂ ಭಗವಂತನ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ದ ಎಂಬ ಚತುರ್ಮೂರ್ತಿಗಳಾಗಲೀ, ನಾರಾಯಣ-ವಾಸುದೇವ-ಸಂಕರ್ಷಣ-ಪ್ರದ್ಯುಮ್ನ ಹಾಗೂ ಅನಿರುದ್ಧ ಎಂಬ ಪಂಚಮೂರ್ತಿಗಳಾಗಲೀ ಪ್ರತಿಪಾದಿಸಲ್ಪಟ್ಟಿವೆ ಎಂದು ಶ್ರೀಮದಾಚಾರ್ಯರು ಅನುವ್ಯಾಖ್ಯಾನದಲ್ಲಿ (೧-೧-೨೪೯) ತಿಳಿಸಿದರು.
ಸರ್ವಮೂಲ ಸೌರಭ
        ಬ್ರಹ್ಮಸೂತ್ರಗಳಿಗೆ ಶಾರೀರಕ ಸೂತ್ರಗಳೆಂಬ ಹೆಸರು ಬಂದಿರುವಂತಹದ್ದು ಅವುಗಳಲ್ಲಿ ಭಗವಂತನ ವಾಸುದೇವಾದಿ ರೂಪಗಳ ಪ್ರ್ತಿಪಾದನೆ ನಡೆದಿರುವುದರಿಂದಲೇ ಹೊರತು ಕೆಲವರು ಭಾವಿಸುವಂತೆ ಜೀವೇಸ್ವರರ ಅಭೇದದ ಪ್ರತಿಪಾದನೆ ನಡೆದಿರುವುದರಿಂದ ಬ್ರಹ್ಮಸೂತ್ರಗಳು ಶರೀರಕ ಎನಿಸಿರುವುದಲ್ಲ. ಶರೀರಕ ಶ್ಬ್ದದಿಂದ ಜೀವನನ್ನೇ ಹೇಳುವಂತಹದಿದ್ದರೆ ಶಾರೀರ ಎಂದೇ ಉಲ್ಲೇಖಿಸಬಹುದಿತ್ತು. ಶಾರೀರಕ ಎಂಬ ಪ್ರಯೋಗ ಸಲ್ಲ. 'ಅನುಪಪತ್ತೇಸ್ತು ನ ಶಾರೀರಃ' ಮುಂತಾದ ಸೂತ್ರಗಳಲ್ಲಿ ಶರೀರಶಬ್ದದಿಂದಲೇ ಜೀವನ ಪರಾಮರ್ಶೆ ನಡೆದಿದೆ.
        'ಶಾರೀರಶ್ಚೋಭಯೇಪಿ ಹಿ ಭೇದೇನೈನಮಧೀಯತೇ' - ಎಂಬ ಬ್ರಹ್ಮಸೂತ್ರದಲ್ಲಿ ಭಗವಂತನನ್ನು ಈ ಜಗತ್ತನ್ನು ಶರೀರವನ್ನೆಂಬಂತೆ ಹೊಂದಿರುವವನೆಂಬ ಅಭಿಪ್ರಾಯದಲ್ಲಿ ಶಾರೀರಕ ಎಂದು ಕರೆಯಲಾಗಿದೆ. ಜಗತ್ತು ಭಗವಂತನಿಗೆ ಶರೀರದಂತೆಯೇ ಹೊರತು ಶರೀರವಲ್ಲ ಎಂಬ ಆಶಯದಲ್ಲಿ ಕುತ್ಸನಾರ್ಥಕವಾದ ಕಪ್ರತ್ಯಯವನ್ನು ಪ್ರಯೀಗಿಸಿ 'ಶಾರೀರಕ' ಎನ್ನಲಾಗುವುದು.
        ಹಾಗೆಯೇ 'ಯಸ್ಯಾತ್ಮಾ ಶರೀರಮ್....' ಎಂಬ ಶ್ರುತಿಯಲ್ಲಿ ಜೀವನು ಪರಮಾತ್ಮನ ಶರೀರ ಎನ್ನಲಾಗಿದೆ. ಶರೀರ ಹೇಗೆ ಶರೀರಿಗೆ ಅಧೀನವಾಗಿರುವುದೋ ಹಾಗೆ ಅಧೀನತ್ವವಿಷಯದಲ್ಲಿ ವಿಷ್ಣುವಿನ ಶರೀರದ ಸಾದೃಶ್ಯ ಹೊಂದಿರುವುದರಿಂದ ಜೀವನು ಅವನ ಶರೀರ ಎಂದು ವ್ಯವಹರಿಸಲ್ಪಡುವನೆಂದು ಶ್ರೀ ಮಧ್ವರು ಸ್ಪಷ್ಟಪಡಿಸಿರುವರು - ಸಾದೃಶ್ಯಾದ್ ದೇಹವಜ್ಜೀವೋ ವಿಷ್ಣೋಃ.....' (ಷ.ಉ. ೪-೧-೭) ಅಂತಹ ಶರೀರನಿಗೆ ಸಂಬಂಧಿಸುವ (ಶರೀರಸ್ಯೇದಂ ಶಾರೀರಂ) ಕಂ - ಸುಖವು ಯಾರಿಂದಲೋ ಅಂತಹ ಭಗವಂತನ ವಾಸುದೇವ ರೂಪವು ಶರೀರಕ ಭಗವಂತನ ವಾಸುದೇವ ರೂಪವು ತಾನೇ ಭಕ್ತರಿಗೆ ಮುಕ್ತಿ ನೀಡಿ ಆನಂದವನ್ನು ಅನುಭವಿಸುವಂತೆ ಮಾಡುವಂತಹದ್ದು?
        ಅಲ್ಲದೆ ಬ್ರಹ್ಮಸೂತ್ರದ ಪ್ರತಿಯೊಂದು ಸೂತ್ರ, ಅಧಿಕರಣ, ಶಬ್ದ, ಅಕ್ಷರ - ಇವುಗಳಲ್ಲಿ ಪ್ರತಿಪಾದ್ಯಗಳಾಗಿರುವ ನಾರಾಯಣ, ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ಧ ರೂಪಗಳು ಆನಂದಮಯ, ವಿಜ್ಞಾನಮಯ, ಮನೋಮಯ, ಪ್ರಾಣಮಯ ಹಾಗೂ ಅನ್ನಮಯ ಎನಿಸಿದ್ದು ಅನ್ನಮಯನಾಮಕ ಅನಿರುದ್ಧನು ಈ ಅನ್ನಮಯಕೋಶಕ್ಕೆ ಶರೀರಯಂತೆ ಇದ್ದರೆ, ಅಂತಹ ಅನ್ನಮಯನಿಗೆ ಪ್ರಾಣಮಯ ನಾಮಕ ಪ್ರದ್ಯುಮ್ನನು ಶರೀರಿಯಂತೆ ಇರುವನು.ಪ್ರಾಣಮಯ ಪ್ರದ್ಯುಮ್ನನಿಗೆ ಮನೋಮಯನಾಮಕ ಸಂಕರ್ಷಣನು ಶರೀರಿಯಂತೆ ಇರುವನು. ಮನೋಮಯನಾಮಕ ಸಂಕರ್ಷಣನಿಗೆ ವಿಜ್ಞಾನಮಯನೆನಿಸುವ ವಾಸುದೇವನು ಶರೀರಿಯಂತೆ ಇರುವನು. ವಿಜ್ಞಾನಮಯನಾಮಕ ವಾಸುದೇವನಿಗಾದರೂ ಆನಂದಮಯನಾಮಕ ನಾರಾಯಣನು ಶರೀರಿಯಂತೆ ಇರುವನು - ಎಂದು ತೈತ್ತಿರೀಯೋಪನಿಷತ್ತು (೨-೨....೯) ನಿರೂಪಿಸಿದೆ.ಯಜುಃಸಂಹಿತೆ (ತೈ.ಉ.ಭಾ) ಸ್ಪಷ್ಟಪಡಿಸುತ್ತಿರುವಂತೆ ಭಗವದೂಪಗಳ ನಡುವೆ ಪರಸ್ಪರವಾಗಿ ಇರುವ ಶರೀರ - ಶರೀರಿಭಾವ ಸಂಬಂಧವು ತೀರಾ ಅಮುಖ್ಯವಾದುದು.
ಬಹಿಸ್ಥೋ ದೇಹವಿದ್ವಿಷ್ಣುರಂತಸ್ಥೋ ದೇಹಿವತ್ ಸ್ಮೃತಃ |
ಅಂತರ್ವ್ಯಾಪ್ತಿವಿಶೇಷೇಣ ನ ತ್ವಶಕ್ತತ್ವತೋ ಬಹಿಃ ||
    ಹೊರಗಿರುವ ಭಗವದ್ರೂಪವು ದೇಹದಂತೆ ಹೊರಗಿರುವಷ್ಟೇ ಒಳಗಿರುವ ಭಗವದ್ರೂಪಕ್ಕೆ ಶರೀರವೆಂದೂ ಒಳಗಿರುವ ಭಗವದ್ರೂಪವು ಆತ್ಮದಂತೆ ಇಳಗಿರುವುದರಿಂದ, ಹಾಗೂ ಒಳಗೆ ವ್ಯಾಪಿಸಿರುವುದರಿಂದ ಆತ್ಮಾ ಎಂದು ಎನಿಸುವುದು. ಹೊರತು ಬೇರೆ ಶರೀರ-ಶರೀರಿಗಳಂತೆ ಇರುವವುಗಳಲ್ಲ. ಶಾರೀರಭಾವದಲ್ಲಿರುವ ಈ ಬಗೆಯ ಅಮುಖ್ಯತ್ವವನ್ನು ಕುತ್ಸನಾರ್ಥಕವಾದ ಕ ಪ್ರತ್ಯಯವು ಸೂಚಿಸಿಕೊಡುವುದು.
    ಹೀಗೆ ಪ್ರತಿಯೊಂದು ಬ್ರಹ್ಮಸೂತ್ರದಲ್ಲೂ ಪರಸ್ಪರವಾಗಿ ಶಾರೀರ ಎನಿಸುವ ಅನಿರುದ್ಧಾದಿಗಳ ಪ್ರತಿಪಾದನೆ ನಡೆದಿರುವುದರಿಂದ ಬ್ರಹ್ಮಸೂತ್ರ ಶಾರೀರಕ ಸೂತ್ರ್ ಎನಿಸಿರುವುದೆಂಬುದೇ ಔಚಿತ್ಯಪೂರ್ಣವಾದುದು.
(೧೯೮೭ ರ ಮಧ್ವನವಮಿ ಅವಸರದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ಯಾರ್ಥಿಗಳಗೆ ನಡೆದ ಸುಧಾಮಂಗಲದಲ್ಲಿ ಪಾಲ್ಗೊಂಡು)

ಪ್ರತಿಪಾದನೆಯ ಪ್ರಕಾರವೂ ಸೂಚಿತ
        'ವೇದ್ಯಶ್ಚ ಸರ್ವೈರಹಮೇವ ವೇದ್ಯಃ - ಸಕಲ ವೇದಗಳಿಂದಲೂ ತಾನೇ ಪ್ರತಿಪಾದ್ಯನಾಗಿರುವನೆಂದು ಉದ್ಘೋಷಿಸಿರುವ ಗೀತಾಚಾರ್ಯನ ಈ ಮಾತಿನಲ್ಲಿಯೇ ಅದರ ಪ್ರತಿಪಾದನೆಯ ಪ್ರಕಾರವೂ ಸೂಚಿತವಾಗಿದೆ.
        'ಅಹಮೇವ ವೇದ್ಯಃ' - ನಾನೇ ಪ್ರತಿಪಾದ್ಯ ನಾಗಿರುವವನೆಂದು ಏವಕಾರಕ್ಕೆ ಅನ್ಯ - ಯೋಗವ್ಯವಚ್ಛೇದ ಎಂಬ ಅರ್ಥವನ್ನು ಒಪ್ಪಿಕೊಂಡಲ್ಲಿ ಭಗವಂತನಲ್ಲದೆ ಬೇರೆ ಯಾವ ವಸ್ತುವಿನ ಪ್ರತಿಪಾದನೆಯೂ ವೇದದಲ್ಲಿ ನಡೆದಿಲ್ಲ ಎಂಬ ಅರ್ಥ ಹೊರಡುವುದು.

ಸರ್ವಮೂಲ ಸೌರಭ
        ಆದರೆ ವೇದದಲ್ಲಿ ಯಜ್ಞಾದಿ ಧರ್ಮಗಳ, ಇತರ ದೇವತೆಗಳ ಪ್ರತಿಪಾದನೆಯೂ ನಡೆದಿದೆ. ಅದಕ್ಕಾಗಿ ಏವಕಾರಕ್ಕೆ 'ಅನ್ಯಯೋಗವ್ಯವಚ್ಛೇದ' ಎಂಬ ಅರ್ಥದ ಬದಲು, ಪ್ರಧಾನ ಎಂಬ ಅರ್ಥವನ್ನು ಇಟ್ಟುಕೊಳ್ಳಬೇಕು. ಸಾಮೀಪ್ಯೇ ಚ ಪ್ರಧಾನೇ ಚ ಏವ ಶಬ್ದೋವಧಾರಣೇ' - ಎಂಬ ಶಬ್ದನಿರ್ಣಯ (ಭಾಗ.ತಾ.ನಿ. ೩-೩೧-೨೯) ತಿಳಿಸುತ್ತಿರುವಂತೆ ಏಕಶಬ್ದಕ್ಕೆ ಪ್ರಧಾನ ಎಂಬ ಅರ್ಥವೂ ಇದ್ದೇ ಇದೆ.
        ಆದುದರಿಂದ 'ಅಹಮೇವ ವೇದ್ಯಃ' ಎಂಬುದಕ್ಕೆ ನಾನು ಪ್ರಧಾನವಾಗಿ ವೇದ್ಯ ನಾಗುವವನು. ಯಜ್ಞಾದಿಗಳು ಅಪ್ರಧಾನವಾಗಿಯಷ್ಟೇ ಪ್ರತಿಪಾದ್ಯಗಳಾಗಿರುವವು ಎಂಬ ಅರ್ಥ ಹೊರಡುವುದು.
        ಅಲ್ಲದೆ 'ಅಹಮೇವ ವೇದ್ಯಃ' ಎಂಬಲ್ಲಿಯ ಅಹಂ ಶಬ್ದವನ್ನು ಆವೃತ್ತಿ ಮಾಡಿಕೊಂಡು 'ಅಹಮೇವ ಅಹಂವೇದ್ಯಃ' ಎಂದು ಅನ್ವಯ ಮಾಡಿಕೊಳ್ಳಬೇಕು. ಸಕಲವೇದಗಳಲ್ಲೂ ನಾನೇ ;ಅಹೇಯನಾಗಿ' ಎಂದೂ ಬಿಡದೆ ವೇದ್ಯನಾಗಿರುವನು ಎಂಬ ಅರ್ಥ ಹೊರಡುವುದು. 'ಅಹೇಯತ್ವಾದಹಂನಾಮಾ...' ಎಂದಿರುವಂತೆ ಭಗವಂತನು ಅಹೇಯನಾಗಿರುವುದರಿಂದ, ತ್ಯಜಿಸಲು ಅಶಕ್ಯನಾಗಿರುವುದರಿಂದ 'ಅಹಂ' ಎನಿಸಿವವನು. 'ಅಹಂ ವೇದ್ಯಃ' ಅಹೇಯನಾಗಿ ವೇದ್ಯ ಎಂಬಲ್ಲಿ ಅವನ ವೇದವೇದ್ಯತ್ವವು ಹೇಯ ಆಗುವುದಿಲ್ಲ ಎಂದೂ ತ್ಯಜಿಸಲು ಬರುವುದಿಲ್ಲ ಎಂದು ಫಲಿಸುವುದು. ಅಂದರೆ ಭಗವಂತನು ಎಂದೂ ವೇದವೇಸ್ಯತ್ವವು ತನ್ನಲ್ಲಿ ತ್ಯಜಿಸಲು ಬರದಂತೆ ವೇದದಲ್ಲಿ ಪ್ರತಿಪಾದ್ಯ ನಾಗಿರುವವನು.
    ಉಳಿದ ಇಂದ್ರಾದಿ ದೇವತೆಗಳಾಗಲೀ, ಜ್ಯೋತಿಷ್ಟೋಮಾದಿ ಕರ್ಮಗಳಾಗಲೀ ಸ್ಥಿತಿ ಕಾಲದಲ್ಲಷ್ಟೇ ವೇದವೇದ್ಯಗಳಾಗಬಲ್ಲವು. ಪ್ರಲಯಕಾಲದಲ್ಲಿ ಯಾವುದೇ ದೇವತೆ, ಯಾವಿದೇ ಕರ್ಮ ಇಲ್ಲದಿರುವುದರಿಂದ ಆಗಿ ವೇದವೇದ್ಯಗಳೆನಿಸುವುದಿಲ್ಲ. ಆದರೆ ಭಗವಂತನು ಶಾಶ್ವತನಾಗಿದ್ದು ಪ್ರಲಯಕಾಲದಲ್ಲೂ ಇರುವುದರಿಂದ ಆಗಲೂ ವೇದವೇದ್ಯನೆನಿಸುವನು ಆದುದರಿಂದ ಅವನ ವೇದವೇದ್ಯತ್ವವು ಆ ಪ್ರಲಯಕಾಲದಲ್ಲೂ ಅಹೇಯ. ಈ ಅಭಿಪ್ರಾಯದಲ್ಲಿಯೇ ಗೀತಾಚಾರ್ಯನು 'ವೇದೈಶ್ಚ ಸರ್ವೈರಹಮೇವ ವೇದ್ಯಃ' ಎಂದು ಸಂದೇಶ ನೀಡಿರುವನು.
        ಹೀಗೆ ಅಹೇಯವಾದ ವೇದವೇದ್ಯತ್ವ ಭಗವಂತನಲ್ಲಿ ಮಾತ್ರ ಇರುವುದರಿಂದ 'ಅಹಮೇವ' ಎಂಬಲ್ಲಿಯ ಏವಕಾರವು ಅನ್ಯಯೋಗವ್ಯವಚ್ಛೇದ ಅರ್ಥವುಳ್ಳದ್ದೂ ಆಗಬಹುದು.
        ಅಹಂಶಬ್ದಾರ್ಥವಾದ ಅಹೇಯ ಎಂಬುದಕ್ಕೆ ಬಿಡಲು ಆಗದಿದ್ದವನು ಎಂಬಂತೆ, ತ್ಯಜಿಸಲು ಯೋಗ್ಯಗಳಾದ ಅಸ್ವಾತಂತ್ರ್ಯವೇ ಮುಂತಾದ ದೋಷಗಳಿಂದ ರಹಿತನಾದವನು ಎಂದೂ ಅರ್ಥ. ಆದುದರಿಂದ ಸಕಲವೇದಗಳಿಂದ ಭಗವಂತನು ಹೇಯಗಳಾದ ಅಸ್ವಾತಂತ್ರ್ಯಾದದೋಷಗಳಿಂದ ರಹಿತನಾಗಿಯೂ ಪ್ರತಿಪಾದ್ಯನಾಗಿರುವನೆಂಬುದೂ ' ಅಹಮೇವ ವೇದ್ಯಃ' ಎಂಬ ಮಾತಿನ ಆಶಯ.
(೧೯೯೫ ರಲ್ಲಿ ನೀಡಿದ ಗೀತಾಪ್ರವಚನದಲ್ಲಿ...)


ಗಾಯತ್ರೀಮಂತ್ರಪ್ರತಿಪಾದ್ಯ ನಾರಾಯಣನೇ
        'ಧ್ಯೇಯಃ ಸದಾ ಸವಿತೃಮಂಡಲಮಧ್ಯವರ್ತೀ...' ಎಂಬ ಶ್ಲೋಕವು ಗಾಯತ್ರೀ ಮಂತ್ರ ಪ್ರತಿಪಾದ್ಯನನ್ನು ತಿಳಿಸುತ್ತಿದೆ. ನೃಸಿಂಹಪುರಾಣದಲ್ಲಿಯ ಶ್ಲೋಕವೆಂದು ಶ್ರೀ ಮಧ್ವರು ಉಲ್ಲೇಖಿಸಿರುವರು. ವಾಚಸ್ಪತ್ಯಕೋಶಕಾರನಿಂದಲೂ ಈ ಶ್ಲೋಕದ ಉಲ್ಲೇಖ ನಡೆದಿದೆ.
        ಆದ್ದರಿಂದ ಗಾಯತ್ರಿಮಂತ್ರದ ಜಪದ ಕಾಲದಲ್ಲಿ ಧ್ಯೇಯನಾದವನು ನಾರಾಯಣನೇ ಹೊರತು ಸೂರ್ಯ ಅಲ್ಲ.
        ವಾಲಖಿಲ್ಯಾದಿಋಷಿಗಳು ಗಾಯತ್ರಿಮಂತ್ರಜಪಪೂರ್ವಕ ಅರ್ಘ್ಯಪ್ರದಾನ ಮಾಡುವುದರಿಂದ ಸೂರ್ಯನ ವಿರುದ್ಧ ನಿತ್ಯವೂ ಹೋರಾಟ ನಡೆಸುವ ಮಂದೇಹ ನಾಮಕ ರಾಕ್ಷಸರು ನಾಶವನ್ನು ಹೊಂದುವರೆಂದು ಪುರಾಣ ತಿಳಿಸಿದೆ. ಆದ್ದರಿಂದ ಸೂರ್ಯನನ್ನು ರಕ್ಷಿಸುವ ಗಾಯತ್ರೀಮಂತ್ರವು ಅವನನ್ನೆ ಕೊಂಡಾಡಲು ಹ್ರ್‍ಗೆ ಸಾಧ್ಯ? ತನ್ನ ಸ್ತೋತ್ರದಿಂದ ತಾನೇ ರಕ್ಷಣೆ ಪಡೆಯಲು ಸಾಧ್ಯವಿಲ್ಲ ತಾನೇ?
(ತತ್ತ್ವವಾದದಲ್ಲಿ ೧೯೮೯ ನೇ ಸೆಪ್ಟೆಂಬರ್ ಜಪದ ಬಗೆಗಿನ ಲೇಖನದಲ್ಲಿ...)


ತಾಪತ್ರ್ಯಪರಿಹಾರಕ ತಿಳಿವಳಿಕೆ
        'ವಾಸುದೇವಃ ಸರ್ವಂ' - ಎಂಬ ತಿಳಿವಳಿಕೆ ಬಹು ಜನ್ಮಗಳ ಸಾಧನೆಯಿಂದಷ್ಟೇ ಬರುವಂತಹದ್ದು. ಆದ್ದರಿಂದಲೇ ಅಂತಹ ತಿಳಿವಳಿಕೆಯನ್ನು ಪಡೆದುಕೊಂಡವ 'ಸಮಹಾತ್ಮಾ ಸುದರ್ಲಭಃ' - ಸುದುರ್ಲಭ - ಬರೇ ದುರ್ಲಭನಲ್ಲ. ಸುದುರ್ಲಭ - ಅತ್ಯಂತ ದುರ್ಲಭ - ಎಂದು ಘೋಷಿಸುವ ಮೂಲಕ ಗೀತಾಚಾರ್ಯನು 'ವಾಸುದೇವಃ ಸರ್ವಂ' - ಎಂಬ ತಿಳಿವಳಿಕೆ ತುಂಬ ಮಹತ್ವವನ್ನು ಸಾರಿದ್ದಾನೆ.
        ಚರಾಚರಾತ್ಮಕವಾದ ಈ ಇಲ್ಲವೂ ವಾಸುದೇವ - ಎಂಬ ಇದರ ಮೇಲ್ನೋಟದ ಅರ್ಥ ಒಪ್ಪಿಕೊಳ್ಳಲಾಗುವುದಿಲ್ಲ. ಚೇತನಸ್ವರೂಪಿ, ಗುಣಸ್ವರೂಪಿ ವಾಸುದೇವ ಅಚೇತನಾತ್ಮಕವಾದ, ದೋಷ ದುಷ್ಟವಾದ ಪ್ರಪಂಚ ಎನಿಸುವುದಾದರೂ ಹೇಗೆ?
        ಸರ್ವಂ ಸಮಾಪ್ನೋಷಿ ತತೋಸಿ ಸರ್ವಃ - ಭಗವದ್ಗೀತೆಯಲ್ಲಿಯೇ ಶ್ರೀಕೃಷ್ಣನಿಂದ ದಿವ್ಯದೃಷ್ಟಿಯನ್ನು ಪಡೆದುಕೊಂಡು ಶ್ರೀಕೃಷ್ಣನ ವಿಶ್ವರೂಪವನ್ನು ಕಂಡು ಅರ್ಜುನ ಶ್ರೀಕೃಷ್ಣನನ್ನು ಯಾವ ಅಭಿಪ್ರಾಯದಲ್ಲಿ 'ಸರ್ವ' ಎಂದು ಕರೆದಿರುವನೆಂಬುದು ಹೆಚ್ಚು ಅಧಿಕೃತವಾಗುತ್ತದೆ -
ಸರ್ವಂ ಸಮಾಪ್ನೋಷಿ ತತೋಸಿ ಸರ್ವಃ |
    ಎಲ್ಲವನ್ನೂ ಚೆನ್ನಾಗಿ ವ್ಯಾಪಿಸಿರುವಿ. ಆದುದರಿಂದಲೇ ನೀನು ಸರ್ವ ಎನಿಸಿರುವಿ.
ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ ಭ್ಅವ್ಯಂ....
        ಎಂಬ ಪುರುಷಸೂಕ್ತದ ಮಾತನ್ನು ಶ್ರುತಿಯೊಂದು ವ್ಯಾಪ್ತ್ಯರ್ಥವನ್ನು ಇಟ್ಟುಕೊಂಡು ಹೀಗೆಯೇ ವ್ಯಾಖ್ಯಾನಿಸಿದೆ -
        'ಪುರುಷ ಏವೇದಂ ಸರ್ವಂ ಯದ್ ಭೂತಂ ಯಚ್ಚ ಭವ್ಯಮಿತಿ ಪುರುಷೇಣೈವೇದಂ ಸರ್ವಂ ವ್ಯಾಪ್ತಂ ಯದ್ ಭೂತಂ ಯಚ್ಚ ಭವ್ಯಮ್ ಆತೃಣಾದಾ ಕರೀಷಾತ್ ಸರ್ವಂ ಭಗವಾನಿತಿ ಮಿಥ್ಯಾದೃಷ್ಟಿರೇಷಾ'
        ತಾಪತ್ರಯ ಪರಿಹಾರ: ಸಂದೇಹ, ರಾಗ, ಪಾಪ - ಪ್ರಯುಕ್ತಗಳಾದ ತಾಪಗಳ ಪರಿಹಾರಕವಾಗಿ ಭಗವಂತನನ್ನು ಪೂರ್ಣತ್ವ - ಆಶಯದಲ್ಲಿ ಸರ್ವ ಎಂದು ತಿಳಿಯಬೇಕೆಂದು ಮತ್ತೊಂದು ಪ್ರಮಾಣ ಸಾರುತ್ತಿದೆ -
'ಸರ್ವಃ ಪೂರ್ಣಃ ಸಮುದ್ಧಿಷ್ಟಃ ತಥಾ ಜ್ಞೇಯೋ ಜನಾಎದನಃ |
ರಾಗಸಂದೇಹಪಾಪಾನಿ ತಥಾ ಜಾನನ್ ತರಿಷ್ಯತಿ'
        ಈ ಪ್ರಮಾಣದಲ್ಲಿ ಅನುರಾಗ, ಸಂದೇಹ ಹಾಗೂ ಪಾಪ - ಈ ಮೂರರ ಪರಿಹಾರ ದೊರಕುವಂತೆ 'ಸರ್ವತ್ವ' ವನ್ನು ತಿಳಿದುಕೊಳ್ಳಬೇಕೆಂದು ತಿಳಿಸಲಾಗಿದೆ.
        ಭಗವಂತನು ಚರಾಚರಾತ್ಮಕವಾದ ಈ ಎಲ್ಲವೂ ಆಗಿರುವನೆಂಬ್ ತಿಳಿವಳಿಕೆ ಸಂದೇಹಾದಿ ತಾಪಗಳ ಪರಿಹಾರಕ್ಕೆ ಹೇಗೂ ಪ್ರಯೋಜಕವೆನಿಸದು. ಭಗವಂತನು ಪರಿಪೂರ್ಣನಾಗಿರುವುದರಿಂದ ಸರ್ವ ಎನಿಸುವನೆಂಬ ತಿಳಿವಳಿಕೆಯಾದರೂ ಪರೋಕ್ಷವಾಗಿ ರಾಗಾದಿ ತಾಪಗಳಿಗೆ ಪರಿಹಾರಕವೆನಿಸಬಲ್ಲದು. ಭಗವಂತನೊಬ್ಬನೇ ಪೂರ್ಣ; ಉಳಿದೆಲ್ಲವೂ ಅಪೂರ್ಣ ಎಂಬ ತಿಳಿವಳಿಕೆ ಉಳಿದ ವಸ್ತುಗಳಲ್ಲಿಯ ರಾಗವನ್ನು ದೂರ ಮಾಡಬಲ್ಲದು. ಭಗವಂತನನ್ನು ಜ್ಞಾನಪೂರ್ಣನಾದವನೆಂದು ತಿಳಿದು, ಉಪಾಸನೆ ನಡೆಸಿದಲ್ಲಿ ಯಥಾಯೋಗ್ಯ ಜ್ಞಾನಪೂರ್ಣತೆ ಸಿದ್ಧಿಸಿ ಸಂದೇಹ, ವಿಪರೀತಜ್ಞಾನಗಳ ತಾಪ ದೂರವಾಗಬಲ್ಲದು. ಪಾಪಗಳು ಎಸಗಲ್ಪಡುವುದು ಕಾಮಾದಿದೋಷಗಳ ಪ್ರಯುಕ್ತ. ಭಗವಂತನು ಗುಣಪೂರ್ಣನಾಗಿರುವುದರಿಂದ ದೋಷರಹಿತ ಎಂದು ಉಪಾಸನೆ ಮಾಡಿದಲ್ಲಿ ದೋಷರಾಹಿತ್ಯ ಸಿದ್ಧಿಸಿ ದೋಷಪ್ರಯುಕ್ತ ಪಾಪಗಳ ಪರಿಹಾರವೂ ದೊರಕಬಲ್ಲದು. ಆದ್ದರಿಂದ ರಾಗ ಸಂದೇಹ ಹಾಗೂ ಪಾಪಗಳ ತಾಪಗಳಿಗೆ ಪರಿಹಾರಕ ವಾಗಿ ತಿಳಿಸಲ್ಪಟ್ಟ ತಿಳಿವಳಿಕೆ ಎಂದರೆ ಭಗವಂತನು ಪೂರ್ಣನಾಗಿರುವುದರಿಂದ 'ಸರ್ವ' ಎನಿಸವನೆಂಬುದೇ ಹೊರತು ಚರಾಚರಾತ್ಮಕ ಪ್ರಪಂಚದಿಂದ ಅಭಿನ್ನನಾಗಿರುವುದರಿಂದ ಸರ್ವ ಎನಿಸುವನೆಂಬುದು ಅಲ್ಲ.
(ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀ ವಿದ್ಯಾಮಾನ್ಯತೀರ್ಥರ ದ್ವಿತೀಯ ಸಮಾರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ನೀಡಿದ ಪ್ರವಚನ)


ಲೋಕಸಂಗ್ರಹದ ವ್ಯಾಪ್ತಿ
        ಶ್ರೀಮದ್ಭಗವದ್ಗೀತೆಯು ಅಜ್ಞ-ಜ್ಞಾನಿಗಳಿಬ್ಬರಿಗೂ ಸ್ವೋಚಿತ ಕರ್ಮವು ಅನಿವಾರ್ಯವೆಂದು ತಿಳಿಸಿದೆ. ಸ್ವತಃ ಶ್ರೀಕೃಷ್ಣನೇ ತಾನು ಕೃತಕೃತ್ಯನಾಗಿದ್ದರೂ ಲೋಕಕ್ಕೆ ಸನ್ಮಾರ್ಗವನ್ನು ತೋರಲು ಕರ್ಮ ಮಾಡುತ್ತಿದ್ದೇನೆಂದು ತಿಳಿಸಿದ್ದಾನೆ. ತನ್ನಂತೆಯೇ ಜ್ಞಾನಿಯೂ ಲೋಕ ಶಿಕ್ಷಣಾರ್ಥವಾಗಿ ಕರ್ಮವನ್ನು ಮಾದಬೇಕೆಂದು ೩ ನೇ ಅಧ್ಯಾಯದ ೨೦ ನೇ ಶ್ಲೋಕದಲ್ಲಿ ಆದೇಶಿಸಿದ್ದಾನೆ.
        ಇಲ್ಲಿ '' ಲೋಕಸಂಗ್ರಹ '' ಎನ್ನುವ ಶಬ್ದಕ್ಕೆ 'ಲೋಕಶಿಕ್ಷಣ ' ಯಾ 'ಲೋಕವನ್ನು ಸ್ವಧರ್ಮದಲ್ಲಿ ತೊಡಗಿಸುವುದು ' ಎಂದಿಷ್ಟೇ ಅರ್ಥವಲ್ಲ. ಸಂಸಾರದಿಂದ ಮುಕ್ತರಾದ ಜೀವರ ಸುಖವೂ 'ಲೋಕ ' ಶಬ್ದದ ಅರ್ಥವೆಂದು ಶ್ರೀ ಮಧ್ವರು ಬೃಹದಾರಣ್ಯಕ ಉಪನಿಷತ್ ಭಾಷ್ಯದಲ್ಲಿ ತಿಳಿಸಿದ್ದಾರೆ. ಆದುದರಿಂದ ' ಲೋಕಸಂಗ್ರಹ ' ಶಬ್ದಕ್ಕೆ ' ಮುಕ್ತಿಸುಖದ ಸಮೀಚೀನಜ್ಞಾನ  - ಅಭಿವ್ಯಕ್ತಿ ' ಎನ್ನುವ ಅರ್ಥವೂ ಸಂದರ್ಭೋಚಿತವಾಗಿದೆ. ಈ ಪ್ರಯೋಜನವನ್ನು ಅಪೇಕ್ಷಿಸಿ ಜ್ಞಾನಿಯಾದ ನೀನೂ (ಅರ್ಜುನನೂ) ಕರ್ಮ ಮಾಡಬೇಕೆಂದು ಶ್ರೀಕೃಷ್ಣನ ಆಶಯವಾಗಿದೆ.
- ಶ್ರೀ ಶ್ರೀ ವಿದ್ಯೇಶತೀರ್ಥರು




ಶ್ರೀ ಟೀಕಾಚಾರ್ಯರ 'ಜಯತೀರ್ಥ'
               'ಪ್ರೀಣಯಾಮೋ ವಾಸುದೇವಮ್'
         ಇದು ಶ್ರೀಪಾದರ ಮೊಟ್ಟಮೊದಲ ಲೇಖನ. ೧೯೮೪ ರ ಜನವರಿ ಹನ್ನೆರಡರಂದು ಶ್ರೀಪಾದರ ಸುಧಾಮಂಗಳ ಅದಿಮಾರಿನಲ್ಲಿ ನಡೆದಿದ್ದು, ಆ ಸಮಾರಂಭದ ಸವಿನೆನಪಿಗಾಗಿ ಪ್ರಕಟಗೊಂಡ ಸ್ಮೃತಿಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನ. ಅಂದು ನೀಡಿದ ಪ್ರವಚನದಲ್ಲೂ ಈ ಲೇಖನದ ಕೆಲವು ವಿಚಾರಗಳ ಸಮರ್ಥನೆಯೇ ನಡೆದಿತ್ತು. ಸರ್ವಮೂಲ ಗ್ರಂಥಗಳ ಸಂದೇಶಗಳ ಅಳವಡಿಕೆಗೇ ತಮ್ಮ ಲೇಖನ ಹಾಗೂ ಪ್ರವಚನಗಳಲ್ಲಿ ಹೆಚ್ಚು ಗಮನ ನೀಡುವ ಶ್ರೀಪಾದರ ಈ ಲೇಖನ ಅವರ ವಿಮರ್ಶನಸಾಮರ್ಥ್ಯವನ್ನು ಸಾರುತ್ತಿದೆ. ಶ್ರೀಪಾದರಿಂದ ಈ ಬಗೆಯ ಲೇಖನ, ಪ್ರವಚನಗಳೂ ಹೆಚ್ಚೆಚ್ಚಾಗಿ ಹೊರಹೊಮ್ಮಲೆಂದು ಪ್ರಾರ್ಥಿಸುತ್ತ ಸುಮಾರು ಎಂಟುವರ್ಷಗಳಕಾಲ ಶಾಸ್ತ್ರಾಧ್ಯಯನ ನಡೆಸಿ, ಅದರ 'ಪೂರ್ಣಾಹುತಿ' ಯಂತೆ ಅಂದು ಪ್ರವಚನ ನೀಡಿದ್ದ, ಲೇಖನದ ರೂಪತಾಳಿದ್ದ ಈ 'ಪ್ರಮೇಯಸಂದೇಶ' ವನ್ನು ಅದಮಾರು ಗ್ರಾಮದ ಮಠದ ಆರಾಧ್ಯನಾದ ವಾಸುದೇವನ ಅಡಿಗೆ ಸಮರ್ಪಿಸಲಾಗುವುದು.

        ಶ್ರೀ ದ್ವೈತಸಿದ್ಧಾಂತದಲ್ಲಿ ಜಯತೀರ್ಥರ ಅನುವ್ಯಾಖ್ಯಾನದ ವ್ಯಾಖ್ಯಾನಭೂತವಾದ ಶ್ರೀಮನ್ನ್ಯಾಯಸುಧಾವು ಮೇರುಕೃತಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಕೃತಿಯು ಅವರ ಬಹುಜ್ಞತೆಗೆ ನಿದರ್ಶನವಾಗುವುದಲ್ಲದೆ, 'ಅವರು ಸಾಕ್ಷಾತ್ ಶ್ರೀಮದಾಚಾರ್ಯರಿಂದ ಶಸ್ತ್ರಶ್ರವಣ ಮಾಡಿದ್ದಾರೆ' ಎಂಬ ಸಂಗತಿಯೂ ಸಾಕ್ಷಿಯಾಗಬಲ್ಲುದು.
        ಅವರು ಅನುವ್ಯಾಖ್ಯಾನದಲ್ಲಿ ಬರತಕ್ಕ ಅಪಿ, ಚ, ತಂ, ಹಿ ಮೊದಲಾದ ಪದಗಳಿಗೆ ಅಪೂರ್ವ ಅರ್ಹಸೂಚಕತ್ವವನ್ನು ಹೇಳಿ ನಾವು ಈ ತೀರ್ಮಾನಕ್ಕೆ ಬರುವಂತೆ ಮಾಡಿದ್ದಾರೆ.

೧. ಟೀಕಾಕೃತ್ ಪಾದರ ಸೂಕ್ಷ್ಮದರ್ಶಿತ್ವ
        ಇದರ ಕಿರುಪರಿಚಯಕ್ಕಾಗಿ ಕೆಲವೊಂದು ಪದಾರ್ಥಗಳಿಗೆ ಅವರು ಮಾಡಿರುವ ವ್ಯಾಖ್ಯಾನದ ವೈಶಿಷ್ಟ್ಯವನ್ನು ಇಲ್ಲಿ ನೀಡುತ್ತೇವೆ.
        ಅ. ಶ್ರೀಮದಾಚಾರ್ಯರು ತಮ್ಮ ಅನುವ್ಯಾಖ್ಯಾನದಲ್ಲಿ ಜನ್ಮಾಧಿಕರಣವನ್ನು ಉಪಸಂಹಾರಮಾಡುತಾ 'ಅತೋನಂತಗುಣಂ ಬ್ರಹ್ಮ ನಿರ್ಭೇದಮಪಿ ಭಣ್ಯತೇ ಏವಂ ಧರ್ಮಾನಿತಿ ಶ್ರುತ್ಯಾ ತದಭೇದೋಪ್ಯುದೀರ್ಯತೇ' ಎಂಬಲ್ಲಿ ಬ್ರಹ್ಮನಿಗೆ ಹಾಗೂ ಆತನ ಗುಣಗಳಿಗೆ ಪರಸ್ಪರ ಭೇದವನ್ನು ನಿಷೇಧಮಾಡಿ ಅಭೇದವನ್ನು 'ಏವಂ ಧರ್ಮಾನ್' ಇತ್ಯಾದಿ ಶ್ರುತಿಬಲದಿಂದ ಸಮರ್ಥಿಸಿದ್ದಾರೆ. ಇಲ್ಲಿ ಶ್ರುತಿಯಿಂದ ಅಭೇದವು ಮಾತ್ರ್ ಸಿದ್ಧ ವಾಗುವುದ ರಿಂದ, 'ತದಭೇದೋಪ್ಯುದೀರ್ಯತೇ' ಎಂಬಲ್ಲಿ 'ಅಪಿ' ಪದವು ವ್ಯರ್ಥ ಎಂಬ ಶಂಕೆ ಸಹಜವಾಗಿ ಬರುತ್ತದೆ.
        ಆದರೆ ಟೀಕಾಕಾರರು 'ಅಪಿ' ಪದಕ್ಕೆ, 'ಅಭೇದ ಇದ್ದರೂ ಭೇದಪ್ರತಿನಿಧಿಯಾಗಿ, ಭೇದದ ಕಾರ್ಯವನ್ನು ನಿರ್ವಹಿಸುವ ವಿಶೇಷ ಎಂಬರ್ಥವನ್ನು ಬರೆದು ಅದರ ಸಾರ್ಥಕ್ಯವನ್ನು ತಿಳಿಸಿದ್ದಾರೆ. 'ಶ್ರುತಿಯ ಗುಣಗಳಿಗೆ ಏಕತ್ವವಿಶಿಷ್ಟಬ್ರಹ್ಮನಿಂದ ಭೇದವನ್ನು ನಿಷೇಧ ಮಾಡಿದ್ದರೂ, ಅಂತಹ ಗುಣಗಳನ್ನು 'ಧರ್ಮಾನ್' ಎಂದು ಬಹುವಚನಾಂತ ಪದದಿಂದ ಹೇಳಿದ್ದರಿಂದ, ಇಂತಹ ಪ್ರಯೋಗವು 'ವಿಶೇಷ' ವಿಲ್ಲದೆ ಕೂಡಿಸಲು ಅಶಕ್ಯ ವಾದುದರಿಂದ, ಶ್ರುತಿಗೆ ವಿಶೇಷದಲ್ಲಿಯೂ ತಾತ್ಪರ್ಯವಿದೆ. ಆದುದರಿಂದ 'ಅಭೇದ' ಮತ್ತು 'ವಿಶೇಷ' ಇವೆರಡೂ ಆ ಶ್ರುತಿಸಿದ್ಧ ಪ್ರಮೇಯಗಳಾದುದರಿಂದ ವಿಶೇಷವನ್ನು ಸಂಗ್ರಹಿಸಲು ಶ್ರೀ ಆಚಾರ್ಯರು 'ಅಪಿ' ಪದವನ್ನು ಬಳಸಿದ್ದಾರೆ, ಎಂದು ಸಾರ್ಥಕ್ಯವನ್ನು ಹೇಳುವ ಟೀಕಾಕಾರರ ಅಭಿಪ್ರಾಯ.
        ಆ. ಸ್ವಪ್ನಾಧಿಕರಣದ ಅನುವ್ಯಾಖ್ಯಾನದಲ್ಲಿ 'ಜಾಗ್ರದ್ವತ್ ಸ್ಪಷ್ಟತಾ ನ ಚ' ಎಂಬಲ್ಲಿ ಶ್ರೀಮದಾಚಾರ್ಯರು 'ಸ್ಪಷ್ಟತಾń