| ಹನುಮಂತನೇ ಜಯಕ್ಕೆ ಕಾರಣ ಜಯಕ್ಕೆ
ಕಾರಣನಾದ ವಾಯುರೂಪೀ ಹನುಮಂತನು ಅರ್ಜುನನರಥದ ಧ್ವಜದಲ್ಲಿ ಸನ್ನಿಹಿತನಾದುದರಿಂದಲೇ
ಅರ್ಜುನನು ವಿಜಯಶಾಲಿಯಾಗುತ್ತಿದ್ದನೆಂದು ಶ್ರೀಮದಾನಂದತೀರ್ಥರು 'ವಿಶೇಷತೋ ಧ್ವಜಸಂಸ್ಥೇ
ಹನೂಮತ್ಯಜೇಯತಾಸ್ಯಾತ್ ಜಯರೂಪೋ ಯತೋಸೌ (೨೦-೨೨೭) ಎನ್ನುವ ಭಾರತ ತಾತ್ಪರ್ಯನಿರ್ಣಯ
ವಚನದಿಂದ ಸ್ಪಷ್ಟಪಡಿಸಿದ್ದಾರೆ.
-ಶ್ರೀ ಶ್ರೀ ವಿದ್ಯೇಶತೀರ್ಥರು
|
| ಲೋಕಸಂಗ್ರಹದ ವ್ಯಾಪ್ತಿ
ಶ್ರೀಮದ್ಭಗವದ್ಗೀತೆಯು ಅಜ್ಞ-ಜ್ಞಾನಿಗಳಿಬ್ಬರಿಗೂ ಸ್ವೋಚಿತ ಕರ್ಮವು ಅನಿವಾರ್ಯವೆಂದು
ತಿಳಿಸಿದೆ. ಸ್ವತಃ ಶ್ರೀಕೃಷ್ಣನೇ ತಾನು ಕೃತಕೃತ್ಯನಾಗಿದ್ದರೂ ಲೋಕಕ್ಕೆ
ಸನ್ಮಾರ್ಗವನ್ನು ತೋರಲು ಕರ್ಮ ಮಾಡುತ್ತಿದ್ದೇನೆಂದು ತಿಳಿಸಿದ್ದಾನೆ. ತನ್ನಂತೆಯೇ
ಜ್ಞಾನಿಯೂ ಲೋಕ ಶಿಕ್ಷಣಾರ್ಥವಾಗಿ ಕರ್ಮವನ್ನು ಮಾದಬೇಕೆಂದು ೩ ನೇ ಅಧ್ಯಾಯದ ೨೦ ನೇ
ಶ್ಲೋಕದಲ್ಲಿ ಆದೇಶಿಸಿದ್ದಾನೆ.
ಇಲ್ಲಿ '' ಲೋಕಸಂಗ್ರಹ '' ಎನ್ನುವ ಶಬ್ದಕ್ಕೆ 'ಲೋಕಶಿಕ್ಷಣ ' ಯಾ 'ಲೋಕವನ್ನು ಸ್ವಧರ್ಮದಲ್ಲಿ ತೊಡಗಿಸುವುದು ' ಎಂದಿಷ್ಟೇ ಅರ್ಥವಲ್ಲ. ಸಂಸಾರದಿಂದ ಮುಕ್ತರಾದ ಜೀವರ ಸುಖವೂ 'ಲೋಕ ' ಶಬ್ದದ ಅರ್ಥವೆಂದು ಶ್ರೀ ಮಧ್ವರು ಬೃಹದಾರಣ್ಯಕ ಉಪನಿಷತ್ ಭಾಷ್ಯದಲ್ಲಿ ತಿಳಿಸಿದ್ದಾರೆ. ಆದುದರಿಂದ ' ಲೋಕಸಂಗ್ರಹ ' ಶಬ್ದಕ್ಕೆ ' ಮುಕ್ತಿಸುಖದ ಸಮೀಚೀನಜ್ಞಾನ - ಅಭಿವ್ಯಕ್ತಿ ' ಎನ್ನುವ ಅರ್ಥವೂ ಸಂದರ್ಭೋಚಿತವಾಗಿದೆ. ಈ ಪ್ರಯೋಜನವನ್ನು ಅಪೇಕ್ಷಿಸಿ ಜ್ಞಾನಿಯಾದ ನೀನೂ (ಅರ್ಜುನನೂ) ಕರ್ಮ ಮಾಡಬೇಕೆಂದು ಶ್ರೀಕೃಷ್ಣನ ಆಶಯವಾಗಿದೆ. - ಶ್ರೀ ಶ್ರೀ ವಿದ್ಯೇಶತೀರ್ಥರು
|
|
'ಪ್ರೀಣಯಾಮೋ ವಾಸುದೇವಮ್'
ಇದು
ಶ್ರೀಪಾದರ ಮೊಟ್ಟಮೊದಲ ಲೇಖನ. ೧೯೮೪ ರ ಜನವರಿ ಹನ್ನೆರಡರಂದು ಶ್ರೀಪಾದರ ಸುಧಾಮಂಗಳ
ಅದಿಮಾರಿನಲ್ಲಿ ನಡೆದಿದ್ದು, ಆ ಸಮಾರಂಭದ ಸವಿನೆನಪಿಗಾಗಿ ಪ್ರಕಟಗೊಂಡ
ಸ್ಮೃತಿಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನ. ಅಂದು ನೀಡಿದ ಪ್ರವಚನದಲ್ಲೂ ಈ ಲೇಖನದ ಕೆಲವು
ವಿಚಾರಗಳ ಸಮರ್ಥನೆಯೇ ನಡೆದಿತ್ತು. ಸರ್ವಮೂಲ ಗ್ರಂಥಗಳ ಸಂದೇಶಗಳ ಅಳವಡಿಕೆಗೇ ತಮ್ಮ
ಲೇಖನ ಹಾಗೂ ಪ್ರವಚನಗಳಲ್ಲಿ ಹೆಚ್ಚು ಗಮನ ನೀಡುವ ಶ್ರೀಪಾದರ ಈ ಲೇಖನ ಅವರ
ವಿಮರ್ಶನಸಾಮರ್ಥ್ಯವನ್ನು ಸಾರುತ್ತಿದೆ. ಶ್ರೀಪಾದರಿಂದ ಈ ಬಗೆಯ ಲೇಖನ, ಪ್ರವಚನಗಳೂ
ಹೆಚ್ಚೆಚ್ಚಾಗಿ ಹೊರಹೊಮ್ಮಲೆಂದು ಪ್ರಾರ್ಥಿಸುತ್ತ ಸುಮಾರು ಎಂಟುವರ್ಷಗಳಕಾಲ
ಶಾಸ್ತ್ರಾಧ್ಯಯನ ನಡೆಸಿ, ಅದರ 'ಪೂರ್ಣಾಹುತಿ' ಯಂತೆ ಅಂದು ಪ್ರವಚನ ನೀಡಿದ್ದ, ಲೇಖನದ
ರೂಪತಾಳಿದ್ದ ಈ 'ಪ್ರಮೇಯಸಂದೇಶ' ವನ್ನು ಅದಮಾರು ಗ್ರಾಮದ ಮಠದ ಆರಾಧ್ಯನಾದ ವಾಸುದೇವನ
ಅಡಿಗೆ ಸಮರ್ಪಿಸಲಾಗುವುದು. |