| 'ಕೃಷ್ಣ
ಜಯಂತಿ, ರಾಮ ಜಯಂತಿ ಇತ್ಯಾದಿಗಳಂತೆ ವೈಶಾಖ ಶುಕ್ಲ ದ್ವಾದಶಿಯಂದು ವೇದವ್ಯಾಸ
ಜಯಂತಿಯನ್ನೂ ವ್ಯಾಪಕವಾಗಿ ನಡೆಸಬೇಕು. ಜ್ಞಾನದ ವಿತರಣೆಗಾಗಿಯೇ ತಾಳಿರುವ
'ಜ್ಞಾನಕಾರ್ಯ' ದ ಅವತಾರ ಶ್ರೀ ವೇದವ್ಯಾಸವತಾರ. ಅಂತಹ ವೇದವ್ಯಾಸರ ಜಯಂತಿಯನು
ಆಚರಿಸಿದಲ್ಲೆ ವಿಶೇಷವಾಗಿ ಜ್ಞಾನ ಪ್ರಚಾರ ನಡೆಸಿದಂತಾಗುವುದು. ಶ್ರೀ ವಿದ್ಯೇಶ ತೀರ್ಥರು ಶ್ರೀ ವೇದವ್ಯಾಸ ಜಯಂತಿಯನ್ನು ವ್ಯಾಪಕವಾಗಿ ನಡೆಸುವುದರ ಮೂಲಕ ಶ್ರೀ ವೇದವ್ಯಾಸ ಜಯಂತಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟಿರುವರು. ಅವರಿಂದ ವರ್ಷೇ ವರ್ಷೇ ಹೆಚ್ಚೆಚ್ಚು ಅರ್ಥವತ್ತಾಗಿ ವೇದವ್ಯಾಸ ಜಯಂತಿ ಆಚರಿಸುವಂತಾಗಲಿ.'' - ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥರು (ಆರಂಭದ ವ್ಯಾಸ ಜಯಂತಿಯ ಉತ್ಸವದಲ್ಲಿ) |

| ''ವೇದ
ವೃಕ್ಷವನ್ನೇರಿ ಅದರಿಂದ ಶ್ರೀ ವೇದವ್ಯಾಸರು ಬೀಳಿಸಿದ ಭಾಗವತ ಹಣ್ಣನ್ನು ಹೆಕ್ಕಿ
ಸುಲಿದು ನಮಗೆ ಕೊಟ್ಟವರು ಶ್ರೀ ಶುಕಾಚಾರ್ಯರು. ಆದರೆ ಆ ಶುಕಾಚಾರ್ಯರು ಈಗ ಇಲ್ಲ. ಅವರ
ಆ ಕೆಲಸವನ್ನು ಇಂದು ಶ್ರೀ ವಿದ್ಯೇಶ ತೀರ್ಥರು ನೆರವೇರಿಸುತ್ತಿರುವರು.'' - ಶ್ರೀ ವಿಶ್ವೇಶ ತೀರ್ಥರು (ಎರಡನೇ ವರ್ಷದ ವೇದವ್ಯಾಸ ಜಯಂತಿಯಲ್ಲಿ) |

| ಶ್ರೀ
ಶ್ರೀ ವಿದ್ಯೇಶತೀರ್ಥರ ಉಲ್ಲೇಖಾರ್ಹ ಸಾಧನೆಗಳಲ್ಲಿ ಒಂದು ಶ್ರೀ ವೇದವ್ಯಾಸ ಜಯಂತಿಯ
ಆಚರಣೆ. ಮೊದಲು ವೈಶಖ ಶುದ್ಧ ದ್ವಾದಶಿಯಂದು ಶ್ರೀ ವೇದವ್ಯಾಸ ಜಯಂತಿ ಪುಟ್ಟ
ಪ್ರಮಾಣದಲ್ಲಿ ಅಲ್ಲಲ್ಲಿ ನಡೆಸಲ್ಪಡುತ್ತಿದ್ದಷ್ಟೇ. ದಿನಗಳ ಹಾಗೂ ಕಾರ್ಯಕ್ರಮಗಳ
ದೃಷ್ಟಿಯಲ್ಲಿ ವ್ಯಾಪಕವಾಗಿ ವೇದವ್ಯಾಸ ಜಯಂತಿಯನ್ನು ನಡೆಸಲು ಆರಂಭಿಸದವರು ಶ್ರೀ
ವಿದ್ಯೇಶತೀರ್ಥರು. ಅವರ ನೇತೃತ್ವದಲ್ಲಿ ೧೯೯೬ ರಿಂದ ಪ್ರತಿ ವರ್ಷ ಹೆಚ್ಚೆಚ್ಚು
ವೈಭವದಿಂದ ವೇದವ್ಯಾಸ ಜಯಂತಿ ಆಚರಿಸಲ್ಪಡುತ್ತಿದೆ. ಶ್ರೀ ಪಾದರ ಆ ಅನುಷ್ಠಾನ ಉಳಿದು ಸಾಧಕರಿಗೂ ಆ ನಿಟ್ಟಿನ ಸ್ಫೂರ್ತಿ ನೀಡುವಂತಾಗಬೇಕೆಂಬ ದೃಷ್ಟಿಯಿಂದ ಹತ್ತು ವರ್ಷಗಳಿಂದ ನಡೆಯುತ್ತ ಬಂದಿರುವ ವ್ಯಾಸ ಜಯಂತಿಯ ಸ್ಠೂಲವಾದ ವರದಿಯನ್ನು ಪ್ರಸ್ತಿತ ಪಡಿಸಲಾಗಿದೆ. |




| ಶ್ರೀ ವೇದವ್ಯಾಸರ ಮೆಚ್ಚುಗೆಯನ್ನೂ, ಗುರುಗಳ ಋಣಾನುಬಂಧವನ್ನೂ, ಉದ್ಘೋಷಿಸಿದ ವ್ಯಾಸಜಯಂತಿ ಆದಷ್ಟು
ಅಧಿಕ ಜಿಜ್ಞಾಸುಗಳಿಗೆ ವ್ಯಾಸಜಯಂತಿಯ ಫಲ ದೊರಕು ವಂತಾಗಬೇಕೆಂದು ಅಂತಹ ಜಿಜ್ಞಾಸುಗಳು
ಅಧಿಕವಾಗಿ ಉಳ್ಳ ಊರುಗಳಲ್ಲಿಯೇ ಹೆಚ್ಚಾಗಿ ವ್ಯಾಸ ಜಯಂತಿಯನ್ನು ಆಚರಿಸುತ್ತ ಬಂದಿದ್ದ
ಶ್ರೀ ವಿದ್ಯೇಶ ತೀರ್ಥರು ೨೦೦೦ ನೆಯ ಇಸವಿಯಲ್ಲಿ ಮಂಗಳೂರಿನಲ್ಲಿ ವ್ಯಾಸ ಜಯಂತಿಯನ್ನು
ನಡೆಸಲು ಸಂಕಲ್ಪಿಸಿದ್ದನ್ನು ಗಮನಿಸಿದಾಗ ಆಶ್ಚರ್ಯವಾಗಿತ್ತು. ವಾಣಿಜ್ಯ ಪ್ರಧಾನವಾದ
ಮಂಗಳೂರಿನ ವ್ಯಸ ಜಯಂತಿಯ ಫಲವನ್ನು ಅನುಭವಿಸಬಲ್ಲ ಪ್ರಾಮಾಣಿಕ ಜಿಜ್ಞಾಸುಗಳು ಎಷ್ಟು
ಮಂದಿ ದೊರಕಿಯಾರು? ಶ್ರೀ ಪಾದರು ಯಾಕೆ ಈ ನಿಟ್ಟಿನಲ್ಲಿ ಯೋಚಿಸಿಲ್ಲ? ಎಂದು
ಆದರೆ ಅದೇ ಅವಧಿಯ ೧೪-೫-೨೦೦೦ ದಂದು ರಾತ್ರಿ ಶ್ರೀ ಪಾದರ ಗುರುಗಳಾದ ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥರು ಮಹಾಪ್ರಸ್ಥಾನವನ್ನು ಕೈಗೊಂಡಿದ್ದು, ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಶ್ರೀ ವಿದ್ಯೇಶ ತೀರ್ಥರು ಪಾಲ್ಗೊಳ್ಳುವಂತಾಯಿತು. ಒಂದು ವೇಳೆ ಜಿಜ್ಞಾಸುಗಳು ಅಧಿಕವಾಗಿ ಉಳ್ಳ ಘಟ್ಟದ ಮೇಲಿನ ಬೇರೆ ಯಾವುದೇ ಊರಿನಲ್ಲಿ ವ್ಯಾಸ ಜಯಂತಿಯನ್ನು ಹಮ್ಮಿಕೊಂಡಿದ್ದರೆ, ಶ್ರೀ ಪಾದರಿಗೆ ತಮ್ಮ ಗುರುಗಳ ಮಹಾಪ್ರಸ್ಥಾನ ಸಮಾರಂಭದಲ್ಲಿ ಪಾಲ್ಗೊಳ್ಳಲಾಗುತ್ತಿದ್ದಿಲ್ಲ. ಅಲ್ಲದೆ, ಆರನೇ ದಿನಕ್ಕೇ ಆ ವ್ಯಾಸ ಜಯಂತಿಯನ್ನು ಕೊನೆಗೊಳಿಸಬೇಕಿತ್ತು. ಹೀಗೆ ಅರ್ಧದಲ್ಲಿಯೇ ನಿಂತಂತಾಗುತ್ತಿತ್ತು! ಉಡುಪಿಯಲ್ಲಿಯೇ ಆ ವ್ಯಾಸ ಜಯಂತಿಯನ್ನು ನಡೆಸಿದ್ದರೂ, ಅಂದಿನ ವ್ಯಾಸ ಜಯಂತಿಯ ಕಾರ್ಯಕ್ರಮಕ್ಕೆ ವಿಘ್ನ ಬರುತ್ತಿತ್ತು. ಆದರೆ ಉಡುಪಿ ಕೃಷ್ಣಮಠಕ್ಕಿಂತ ಭಾರೀ ದೂರವೂ ಅಲ್ಲದೆ, ಭಾರೀ ಹತ್ತಿರವೂ ಅಲ್ಲದ ಮಂಗಳೂರಿನಲ್ಲಿ ವ್ಯಾಸ ಜಯಂತಿಯನ್ನು ನಡೆಸಿದ್ದರಿಂದಲೇ ಏಳು ದಿನಗಳ ಅವಧಿಯ ವ್ಯಾಸ ಜಯಂತಿಯೂ ನಿರ್ವಿಘ್ನವಾಗಿಯೇ ಜರಗುವಂತಾಯಿತು. ಶ್ರೀ ವಿದ್ಯೇಶತೀರ್ಥರಿಗೆ ಗುರುಗಳ ಮಹಾಪ್ರಸ್ಥಾನದಲ್ಲೂ ಪಾಲ್ಗೊಳ್ಳಲು ಅವಕಾಶ ದೊರಕುವಂತಾಯಿತು. ಇದರಿಂದಾಗಿ ಸ್ಪಷ್ಟವಾಗುವ ಅಂಶ ಆ ಅವಧಿಯ ವ್ಯಾಸ ಜಯಂತಿಯನ್ನು ಮಂಗಳೂರಿನಲ್ಲಿಯೇ ಸಂಯೋಜಿಸುವಂತೆ ಪ್ರೇರಿಸಿರುವ ಶ್ರೀ ವೇದವ್ಯಾಸರು ತಮ್ಮ ಜಯಂತಿಯನ್ನು ಆಚರಿಸುವ ವಿದ್ಯೇಶ ತೀರ್ಥರ ನಿಷ್ಠೆಯನ್ನು ಮೆಚ್ಚಿಕೊಂಡಿರುವರು. ಹಾಗೆಯೇ ಶ್ರೀ ವಿದ್ಯೇಶತೀರ್ಥರಿಗೆ ತಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥರ ಋಣಾನುಬಂಧ ಎಷ್ಟೊಂದು ಗಾಢವಾಗಿದೆ ಎಂಬುದೂ ಸ್ಪಷ್ಟವಾಗಬಲ್ಲದು. |






