| ವೇದಾಭಿಮಾನಿನಿಯ ಆಶಯ ಕ್ಷೀರಸಾಗರದ
ಮಥನಕಾಲದಲ್ಲಿ ಸಾಗರದಿಂದ ಪಾದುರ್ಭೂತಳಾದ ಸಕಲ ವೇದಗಳಿಗೆ ಅಭಿಮಾನಿನಿಯಾದ ರುಮೆಯು ಇತರ
ಎಲ್ಲಾ ದೇವತೆಗಳಲ್ಲಿ ಕೋಪ, ಕಾಮ, ಪಾರತಂತ್ರ್ಯ ಮೊದಲಾದ ದೋಷಗಳನ್ನೂ, ಗುಣಗಳ
ನ್ಯೂನತೆಯನ್ನೂ ಕಂಡಳು. ಆದರೆ ಶ್ರೀಹರಿಯು ಅವ್ಯಭಿಚಾರಿ (ಬೇರೆಕಡೆ ಇಲ್ಲದ) ಸದ್ಗುಣಗಳ
ನಿಧಿ ಹಾಗೂ ನಿರ್ದೋಷನಾದ ಸುಮಂಗಲ ಪುರುಷೋತ್ತಮನೆಂದು ಗುರುತಿಸಿ ಆತನನ್ನೇ
ಪತಿರೂಪದಲ್ಲಿ ವರಿಸಿದಳು. ವೇದ ಹಗೂ ಅದರ ಅಭಿಮಾನಿನಿಯಾದ ಲಕ್ಷ್ಮಿಯ ಅಭಿಪ್ರಾಯ ಒಂದೇ
ಆಗಿದೆ.
ಆದುದರಿಂದ ಸಕಲ ವೇದಗಳೂ ಶ್ರೀಹರಿಯನ್ನೇ ನಿರ್ದೋಷ ಗುಣ ಪೂರ್ಣನಾದುದರಿಂದ ಸರ್ವೋತ್ತಮನೆಂದು ಆಯ್ಕೆಮಾಡಿವೆ ಎನ್ನುವ ಮಾತಿಗೆ, ವೇದಾಭಿಮಾನಿನಿಯಾದ ಲಕ್ಷ್ಮಿಯು ವಿಮರ್ಶಪೂರ್ವಕವಾಗಿ ಮಾಡಿದ ನಾರಾಯಣನ ಆಯ್ಕೆಯೇ ಜ್ವಲಂತ ನಿದರ್ಶನ. ಲಕ್ಷ್ಮಿಯು ಮಾಡಿದ ವಿಮರ್ಶಾಪೂರ್ವಕವಾದ ಶ್ರೀಹರಿಯ ಆಯ್ಕೆಯು ಭಾಗವತದ (೮-೭-೧೮,೨೨) ಭಾಗದಲ್ಲಿ ಉಲ್ಲಿಖಿತವಾಗಿದೆ. -ಶ್ರೀ ಶ್ರೀ ವಿದ್ಯೇಶತೀರ್ಥರು.
|
| ಗಾಯತ್ರೀಪ್ರತಿಪಾದ್ಯ ಸರ್ವಶ್ರೇಷ್ಠ ಎಲ್ಲ
ವೇದಗಳ ಸಾರ ಶ್ರೀಗಾಯತ್ರೀಮಂತ್ರ. ಅದೇ ಸರ್ವಶ್ರೇಷ್ಠವಾದ ಮಂತ್ರ. ಆದುದರಿಂದ ಆ
ಮಂತ್ರದಿಂದ ಪ್ರತಿಪಾದ್ಯನಾದ ದೇವತೆಯೇ ಸರ್ವೋತ್ತಮದೇವತೆ. ಗಾಯತ್ರೀಮಂತ್ರಕ್ಕೆ
ಅಭಿಮಾನಿನಿ ಎನಿಸಿಕೊಂಡ ಭಾರತೀ ದೇವಿಯ ಅವತಾರಭೂತರಾದ ದ್ರೌಪದೀದೇವಿಯರು ಆ ಮಂತ್ರದಿಂದ
ಪ್ರತಿಪಾದ್ಯನು ಸೂರ್ಯಮಂಡಲ ಮಧ್ಯವರ್ತಿಯಾದ ನಾರಾಯಣನೇ ಎಂದು ಎತ್ತಿ ತೋರಿಸಿದ್ದಾರೆ.
ಅವರು ಕೀಚಕನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೂರ್ಯಮಂಡಲ ಮಧ್ಯವರ್ತಿಯಾದ
ಶ್ರೀನಾರಾಯಣನನ್ನೇ ರಕ್ಷಕನೆಂದು ನಂಬಿ ಮೊರೆಯಿಟ್ಟು ಆತನ ಅನ್ಗ್ರಹದಿಂದ
ಸುರಕ್ಷಿತರಾದರು. ಇದರಿಂದ ಶ್ರೀಮನ್ನಾರಾಯಣನೇ ರಕ್ಷಕನಾದುದರಿಂದ ಗಾಯತ್ರೀಮಂತ್ರದಲ್ಲಿ
ಪ್ರತಿಪಾದ್ಯನದ 'ಭರ್ಗನು' (ಸಕಲ ವ್ಯಾಪಾರಗಳನ್ನು, ಜಗದ್ರಕ್ಷಣೆಯನ್ನು ಮಾಡುವವನೇ
'ಭರ್ಗ' ಎಂದು ಕರೆಯಲ್ಪಡುವನು.) ಎಂದು ಸಾಬೀತುಪಡಿಸಿ ಆತನೇ ಸರ್ವೋತ್ತಮದೇವತೆ ಎಂದು
ಸೂಚಿಸಿದರು. ಧರ್ಮರಾಜನೂ ವನವಾಸದ ಕಾಲದಲ್ಲಿ ಸೂರ್ಯನಲ್ಲಿ ಸನ್ನಿಹಿತನಾದ ನಾರಾಯಣನ
ಅನುಗ್ರಹದಿಂದಲೆ ಅಕ್ಷಯ ಪಾತ್ರೆಯನ್ನು ಪಡೆದು ತನ್ನ ಸಂಗಡಿಗರಾದ ಸಹಸ್ರಾರು ಮುನಿಗಳಿಗೆ
ಅನ್ನವನ್ನಿತ್ತು ಸಂರಕ್ಷಣೆ ಮಾಡಿದನು. ಇದರಿಂದ ಸೂರ್ಯನಲ್ಲಿರುವ ಶ್ರೀಮನ್ನಾರಾಯಣನೇ
ಅನ್ನವನ್ನಿತ್ತು ಸಲಹುವ ಭರ್ಗನು ಎಂದು ದೃಢವಾಗುತ್ತದೆ.
-ಶ್ರೀ ಶ್ರೀ ವಿದ್ಯೇಶತೀರ್ಥರು.
|
| 'ಶ್ರೀಕೃಷ್ಣನ ಸತ್ಯಸಂಕಲ್ಪತ್ವ' ಸತ್ಯಸಂಕಲ್ಪತ್ವ
ಭಗವಂತನ ಅಸಾಧಾರಣ ಮಹಿಮೆ. ಅದನ್ನು ಶ್ರೀಕೃಷ್ಣ ತನ್ನಲ್ಲಿ ಇರುವುದೆಂದು
ಸ್ಪಷ್ಟಪಡಿಸಿದ್ದಾನೆ. ಸುಭದ್ರೆಯನ್ನು ದುರ್ಯೋಧನನಿಗೆ ನೀಡುತ್ತೇನೆಂದು ವಚನ
ಕೊಟ್ಟಿದ್ದರೂ ಜೀವನಾದ ಬಲಭದ್ರನು ಆಕೆಯನ್ನು ದುರ್ಯೋಧನನಿಗೆ ನೀಡಲು ಸಮರ್ಥನಾಗಲಿಲ್ಲ.
ಶ್ರೀಕೃಷ್ಣನ ಸಂಕಲ್ಪದಂತೆ, ಅರ್ಜುನನೇ ಆಕೆಯನ್ನು ಪಡೆದ. ಈ ನಿದರ್ಶನದಿಂದ ಜೀವರು
ಸತ್ಯಸಂಕಲ್ಪರಲ್ಲ, ಶ್ರೀಕೃಷ್ಣನೇ ಉಪನಿಷತ್ತಿನಲ್ಲಿ ವರ್ಣಿಸಲ್ಪಟ್ಟ ''ಸತ್ಯಸಂಕಲ್ಪ''
ನೆಂದು ಸ್ಫುಟವಾಯಿತು.
- ಶ್ರೀ ಶ್ರೀ ವಿದ್ಯೇಶತೀರ್ಥರು
|
| ಉಡುಪಿ ಅನಂತಾಸನನ ಸನ್ನಿಧಿಯಲ್ಲಿ ನೀಡಿದ ಸಂದೇಶ ಸತ್ಯತೀರ್ಥನಾಮದ ಅನ್ವರ್ಥತೆ ಭಂಡರಕೇರಿಮಠದ
ಮೂಲಯತಿಗಳಿಗೆ 'ಸತ್ಯತೀರ್ಥ' ಎಂಬ ನಾಮವು ತುಂಬ ಅನ್ವರ್ಥವಾದುದು. 'ನಿರ್ಣೀಯತೇ ಯತಃ
ಸಮ್ಯಗಿದಂ ಸತ್ಯಮಿತಿ ಸ್ಫುಟಮ್' ಎಂದು ಶಬ್ದನಿರ್ಣಯ (ಕಾ.ಉ.ಭಾ) ನಿರ್ಣಯಿಸುವಂತೆ ಸತ್ಯ
ಎಂದರೆ ಮೀಮಾಂಸಾಶಾಸ್ತ್ರ. ಆದ್ದರಿಂದ 'ಸತ್ಯಂ ತೀರ್ಥಂ ಶಾಸ್ತ್ರಂ ಯಸ್ಮಾತ್' ಎಂಬ
ನಿರ್ವಚನ ಪ್ರಕಾರ, ಸತ್ಯ ಎನಿಸುವ ಬ್ರಹ್ಮಸೂತ್ರರೂಪವಾದ ಮೀಮಾಂಸಾಶಾಸ್ತ್ರಕ್ಕೆ
ಸಂಬಂಧಿಸಿದ ಮಾಧ್ವಭಾಷ್ಯ ವನ್ನು ಬರೆದ ಪ್ರಯುಕ್ತ ಅವರು ನಿಜವಾಗಿ ಸತ್ಯತೀರ್ಥರು ತಾನೇ?
ಗೋಪುಚ್ಛಗ್ರಹಣದ ಸಂಕೇತ
ಸಾಮಾನ್ಯವಾಗಿ
ಮಕ್ಕಳು, ನಾಯಿ, ಬೆಕ್ಕು ಮುಂತಾದ ಪಶುಗಳ ಬಾಲವನ್ನು ಹಿಡಿದುಕೊಳ್ಳುವುದಾದರೆ,
ಶ್ರೀಮದಾಚಾರ್ಯರು ವಾಸುದೇವ ನಾಗಿದ್ದಾಗ ಹಸುವಿನ ಬಾಲವನ್ನು ದೃಢವಾಗಿ ಹಿಡಿದುಕೊಂಡು
ಅರಣ್ಯವಿಡೀ ಸಂಚರಿಸಿ ಬಂದಿದ್ದರು. ಆ ಮೂಲಕ ಅವರು ನೀಡಿದ ಸಾಂಕೇತಿಕ ಸಂದೇಶ ವೆಂದರೆ,
ಹಸು ಗೋ ಎನಿಸುತ್ತಿದ್ದು ವೈದಿಕಸಾಹಿತ್ಯವನ್ನು ಸಂಕೇತಿಸುತ್ತದೆ. ಮುಂದೆ ತಾವು ಅಂತಹ
ಗೋವಿನ ಬಾಲ ಹಿಡಿದುಕೊಂಡೇ ಅಂದರೆ ವೈದಿಕಸಾಹಿತ್ಯದ ಆಧಾರದಲ್ಲೇ ಸಂಚರಿಸುವೆವು ಹೊರತು
ಅದನ್ನು ಎಂದೂ ಉಲ್ಲಂಘಿಸುವುದಿಲ್ಲ. ಆದ್ದರಿಂದಲೇ ತಾವು ಏನೂ ಅಪಾಯವಿಲ್ಲದೆ ತಮ್ಮ
ಗುರಿಯನ್ನು ಸಾಧಿಸಬಹುದಾಗಿದೆ ಕೂಡಾ - ಎಂಬುದಾಗಿ
- ಶ್ರೀ ಶ್ರೀ ವಿದ್ಯೇಶತೀರ್ಥರು
|
| ವೇದ - ವೇದಾರ್ಥಗಳನ್ನು ಜೊತೆಗೂಡಸಿದವರು
ರಾಮವತಾರದ ಸಂದರ್ಭದಲ್ಲಿ ವೇದಾಭಿಮಾನಿನಿಯಾದ ಸೀತೆಯನ್ನು
ಪತಿಯಿಂದ ಬೇರ್ಪಡಿಸಲು ಯತ್ನಿಸಿದಾಗ, ಕೃಷ್ಣ್ಆವತಾರದ ಸಂದರ್ಭದಲ್ಲಿ ವೇದಕ್ಕೆ
ಅವಾಂತರಾಭಿಮಾನಿನಿಯಾದ ದ್ರೌಪದಿದೇವಿಯನ್ನು ಪತಿಗಳಿಂದ ಬೇರ್ಪಡಿಸಲು ಯತ್ನಿಸಿದಾಗ -
ಅದನ್ನು ಹನುಮಂತನಾಗಿ, ಭೀಮನಾಗಿ ಪ್ರತಿಭಟಿಸಿದ ಶ್ರೀಮುಖ್ಯಪ್ರಾಣನೇ ಶ್ರೀ
ಮಧ್ವರೂಪವನ್ನು ತಾಳಿ ವೇದಾರ್ಥವನ್ನು ವೇದದಿಂದ ಬೇರ್ಪಡಿಸಲು ಯತ್ನಿಸುತ್ತಿದ್ದ
ಅಸುರೀಶಕ್ತಿಯನ್ನು ಸದೆಬಡಿದು ವೇದಾರ್ಥವು ವೇದದ ಜೊತೆಗೆ ಮೆರೆಯುತ್ತಿರುವಂತೆ
ಮಾಡಿರುವನು.
- ಶ್ರೀಶ್ರೀ ವಿದ್ಯೇಶತೀರ್ಥರು
|